ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಕಾಶ್ಮೀರ ಸರೋವರದ ಯೂತ್ ಹಾಸ್ಟೇಲ್ಸ್ ಚಾರಣಕ್ಕೆ ಹೊರಟ ಗುಂಪಿಗೆ ಬೀಳ್ಕೋಡುಗೆ.

ಶಿವಮೊಗ್ಗ: ಕಾಶ್ಮೀರದ ಕಣಿವೆಗಳಲ್ಲಿ ನಡೆದಾಡುವುದೇ ಅದ್ಭುತ ಅನುಭವ. ಪ್ರಪಂಚದ ಸುಂದರ ಹಾಗೂ ರಮ್ಯ ತಾಣಗಳಲ್ಲಿ ಈ ಪ್ರದೇಶವು ಒಂದು ಎಂದು ಯೂಥ್ ಹಾಸ್ಟೆಲ್ಸ್ ಅಸೋಸಿಯೇಷನ್‍ನ ಅಧ್ಯಕ್ಷ ಎಸ್. ಎಸ್. ವಾಗೀಶ್ ಹೇಳಿದರು.
ಕಾಶ್ಮೀರ ಸರೋವರದ ಯೂತ್ ಹಾಸ್ಟೇಲ್ಸ್ ಚಾರಣಕ್ಕೆ ಹೊರಟ ಗುಂಪಿಗೆ ಬೀಳ್ಕೋಟ್ಟ ಮಾತನಾಡಿದ ಅವರು, ಹಿಮಾಲಯ ಪರ್ವತ ಚಾರಣ ನಿಜಕ್ಕೂ ಕೂಡ ಒಂದು ರೋಚಕ ಅನುಭವ ಎಂದರು.
ಹಿಮಾಲಯ ತಪ್ಪಲಿನ ಜನರ ಬದುಕನ್ನು ಹತ್ತಿರದಿಂದ ನೋಡುವ ಸೌಭಾಗ್ಯ ಎಲ್ಲರಿಗೂ ದೊರಕುವುದಿಲ್ಲ ಎಂದ ಅವರು, ಪಹಡಿಗಳ ದಾರಿಯಲ್ಲಿ ನಡೆದಾಡುವಾಗ ಇವುಗಳನ್ನೆಲ್ಲ ಆಹ್ವಾದಿಸುವ ಭಾಗ್ಯ ದೊರಕುತ್ತದೆ ಎಂದರು.
ಸಂಸ್ಥೆಯ ಮಾಜಿ ರಾಜ್ಯ ಉಪಾಧ್ಯಕ್ಷ ಜಿ. ವಿಜಯಕುಮಾರ್ ಮಾತನಾಡಿ, ಪ್ರತೀ ವರ್ಷ ನೂರಾರು ಸದಸ್ಯರನ್ನು ಹಿಮಾಲಯ ಚಾರಣಕ್ಕೆ ಕಳಿಸಲಾಗುತ್ತಿದೆ. ಈ ಚಾರಣ ಗಳಿಂದ, ನೈಸರ್ಗಿಕ ಆಹ್ಲಾದದೊಂದಿಗೆ ಆರೋಗ್ಯ ಸುಧಾರಣೆ ಸಾಧ್ಯ ಎಂದರು.
ಈ ಚಾರಣದ ನೇತೃತ್ವವನ್ನು ಕಾರ್ಯದರ್ಶಿ ಸುರೇಶ್ ಕುಮಾರ, ಭಾರತಿ ಗುರುಪಾದಪ್ಪ ವಹಿಸಿಕೊಂಡಿದ್ದಾರೆ ಎಂದ ಅವರು, ಆಸಕ್ತರು ಸಂಸ್ಥೆಯ ಸದಸ್ಯತ್ವ ಪಡೆದು, ವರ್ಷ ಪೂರ್ತಿ ನಡೆಯುವ ಚಾರಣಗಳಲ್ಲಿ ಭಾಗವಹಿಸಬಹುದು ಎಂದರು.

Related posts

  ಸಮಾನತೆ ಸಂದೇಶ ಸಾರಿದ್ದು, ನುಡಿದಂತೆ ನಡೆದವರು ಬಸವಾದಿ ಶರಣರು: – ಸಿಎಂ ಸಿದ‍್ಧರಾಮಯ್ಯ.

ಭಾರತೀಯ ವೈದ್ಯಕೀಯ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್..

ಫ್ರೆಂಡ್ಸ್’ ಖ್ಯಾತಿಯ ನಟ ಮ್ಯಾಥ್ಯೂ ಪೆರ್ರಿ ಇನ್ನಿಲ್ಲ…