ಕನ್ನಡಿಗರ ಪ್ರಜಾನುಡಿ
ಪ್ರಧಾನ ಸುದ್ದಿಮುಖ್ಯಾಂಶಗಳುರಾಜ್ಯ

ಓದುವಾಗ, ಡ್ರೈವಿಂಗ್ ಮಾಡುವಾಗ ನಿದ್ರೆ ಬಂದ್ರೆ ನೋ ಟೆನ್ಷನ್: ತಟ್ಟನೇ ಅಲರ್ಟ್ ಮಾಡುತ್ತೆ ಈ ಕನ್ನಡಕ..

ಹುಬ್ಬಳ್ಳಿ: ರಾತ್ರಿ ಸಮಯದಲ್ಲಿ ಚಾಲನೆ ಮಾಡುವಾಗ, ಓದುವಾಗ ನಿದ್ರೆಗೆ ಜಾರುವುದು ಸಾಮಾನ್ಯ. ಆದರೆ ಡ್ರೈವಿಂಗ್ ಮಾಡುವಾಗ ನಿದ್ದೆಗೆ ಜಾರಿದ್ರೆ ಅಪಘಾತಗಳು ಸಂಭವಿಸಿ ಇಡೀ ಜೀವನವೇ ಅಂತ್ಯವಾಗಬಹುದು ಇಂತಹ ಘಟನೆಗಳು ಸಾಕಷ್ಟು ನಡೆದಿದೆ. ಇದೀಗ ಒಂದು ವೇಳೆ ನಿದ್ರೆಗೆ ಜಾರುವ ಅಭ್ಯಾಸವಿದ್ದರೇ,  ನೋ ಟೆನ್ಷನ್, ಈ ಕನ್ನಡಕ ಹಾಕ್ಕೊಳ್ಳಿ ಸೇಫ್ ಡ್ರೈವ್ ಮಾಡಬಹುದು.

ಇನ್ನು ವಿದ್ಯಾರ್ಥಿಗಳು ಓದುವಾಗ ನಿದ್ರೆಗೆ ಜಾರಿದ್ರೂ ಇದು ಪಟಕ್ಕಂತ ಎಚ್ಚರಿಸುತ್ತೆ. ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರನ್ನೂ ಅಲರ್ಟ್ ಮಾಡುತ್ತೆ  ಆ್ಯಂಟಿ ಸ್ಲೀಪ್ ಡ್ರೌಸಿನೆಸ್ ಪ್ರಿವೆಂಟರ್ ಮಷಿನ್!

ಹುಬ್ಬಳ್ಳಿಯ ವಿದ್ಯಾರ್ಥಿನಿಯೊಬ್ಬರು ಈ ಯಂತ್ರ ಶೋಧನೆ ಮಾಡಿದ್ದಾರೆ. ಹುಬ್ಬಳ್ಳಿಯ ಕಾನ್ವೆಂಟ್ ಶಾಲೆಯ ರಬಿಯಾ ಫಾರೂಕಿ  ಎಂಬ ವಿದ್ಯಾರ್ಥಿನಿಯ ಸಾಧನೆ ಇದು. ಸದ್ಯ ಇವರು ವಿದ್ಯಾನಿಕೇತನ್ ಕಾಲೇಜಿನಲ್ಲಿ ಪಿಯುಸಿ ಮೊದಲ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

ರಬಿಯಾಳ ಈ ಕಾರ್ಯಕ್ಕೆ ರಾಷ್ಟ್ರಮಟ್ಟದಲ್ಲಿಯೂ ಮೆಚ್ಚುಗೆ ದೊರೆತಿದೆ. ವಾಹನ ಚಲಾಯಿಸುವಾಗ ಚಾಲಕ ಒಮ್ಮೊಮ್ಮೆ ತೂಕಡಿಸೋದು ಸಹಜ. ಚಾಲಕ ತೂಕಡಿಸಿದರೆ ಪ್ರಯಾಣಿಕರ ಕಥೆ ಮುಗೀತು! ಡ್ರೈವಿಂಗ್ ವೇಳೆ ನಿದ್ರೆಗೆ ಜಾರಿ ಸಂಭವಿಸುವ ಅಪಘಾತಗಳಿಗೆ ಲೆಕ್ಕವೇ ಇಲ್ಲ. ಇಂತಹ ಅಪಘಾತಗಳನ್ನು ತಡೆಯಲೆಂದೇ ಸದರಿ ವಿದ್ಯಾರ್ಥಿನಿ ಆಯಂಟಿ ಸ್ಲೀಪ್ ಡ್ರೋಸೆನೆಸ್ ಪ್ರವೆಂಟರ್ ಯಂತ್ರವನ್ನು ಶೋಧನೆ ಮಾಡಿದ್ದಾರೆ.

ರಬಿಯಾ ಫಾರೂಕಿ ಸಂಶೋಧನೆಯ ಹಿಂದಿದೆ ಕರುಣಾಜನಕ ಕಥೆ

ರಬಿಯಾ ಫಾರೂಕಿ ಸಂಶೋಧನೆಯ ಹಿಂದೆ  ಕರುಣಾಜನಕ ಕಥೆಯೊಂದು ಇದೆ.  ಊಟಿಗೆ ಟೂರ್ ಹೋಗಿದ್ದಾಗ ಭೀಕರ ಅಪಘಾತ ಸಂಭವಿಸಿತ್ತು. ಚಾಲಕ ನಿದ್ರೆಗೆ ಜಾರಿದ್ದರಿಂದ ಆ ಅಪಘಾತ ಸಂಭವಿಸಿತ್ತು. ಅಪಘಾತದಲ್ಲಿ ಇಡೀ ಕುಟುಂಬದ ಸದಸ್ಯರು ಸಾವನ್ನಪ್ಪಿದ್ದರು. ಈ ರೀತಿಯ ಅಪಘಾತಗಳನ್ನು ಹೇಗೆ ತಪ್ಪಿಸಬಹುದು ಎಂಬ ನಿಟ್ಟಿನಲ್ಲಿ ಈ ಶೋಧನೆಯಲ್ಲಿ ತೊಡಗಿದೆ. ಕೊನೆಗೆ ಈ ಯಂತ್ರ ರೂಪಿಸಿದೆ ಎಂದು ರಬಿಯಾ ಫಾರೂಕಿ ತಮ್ಮ ಸಂಶೋಧನೆಯ ಹಿಂದಿನ ಕರುಣಾಜನಕ ಕತೆ ಹೇಳಿದರು. ರಬಿಯಾ ಫಾರೂಕಿ ಕಾರ್ಯಕ್ಕೆ ಪೋಷಕರು ಮತ್ತು ಶಿಕ್ಷಕ ವೃಂದ ಮೆಚ್ಚುಗೆ ವ್ಯಕ್ತಪಡಿಸಿದೆ.

ಈ ಯಂತ್ರದಲ್ಲಿ ಪಾರದರ್ಶಕ ಕನ್ನಡಕಕ್ಕೆ ಚಾರ್ಜೆಬಲ್ ಬ್ಯಾಟರಿ, ಸಿಬ್ ಬಝರ್ ಹಾಗೂ ಐಆರ್ ಸೆನ್ಸಾರ್ ಅಳವಡಿಕೆ ಮಾಡಲಾಗಿದೆ. ವಾಹನ ಚಾಲನೆ ಮಾಡುವಾಗ ಈ ಕನ್ನಡಕ ಧರಿಸಿದರೆ ಸಾಕು… ಅಕಸ್ಮಾತ್ ಸ್ವಲ್ಪ ಕಣ್ಣು ಮುಚ್ಚಿದರೂ ಕ್ಷಣಾರ್ಧದಲ್ಲಿ ನ್ಯಾನೋ ಅರ್ಡುನೋ ಆಯಕ್ಟಿವ್ ಆಗುತ್ತೆ. ಬಝರ್ ರಿಂಗಣಿಸಿ ಚಾಲಕನನ್ನು ಎಚ್ಚರಿಸುತ್ತೆ. ಕೇವಲ 400 – 450 ರೂಪಾಯಿ ವೆಚ್ಚದಲ್ಲಿ ತಯಾರು ಮಾಡಬಹುದು ಈ ಕನ್ನಡಕವನ್ನು.

ಇಂತಹ ಕನ್ನಡಕ ಧರಿಸಿದ್ರೆ ಖಂಡಿತಾ ದೊಡ್ಡ ಅನಾಹುತ ತಪ್ಪಿಸಬಹುದು. ಈ ಕನ್ನಡಕ ದೆಹಲಿಯಲ್ಲಿ ನಡೆದ ಇನ್ಸ್ಪೈರ್ ಅವಾರ್ಡ್ ಮಾನಕ ದಲ್ಲಿ ಪ್ರದರ್ಶನ ಮಾಡಲಾಗಿದೆ. ರಾಷ್ಟ್ರ ಮಟ್ಟದ ಉತ್ತಮ ಮಾದರಿ ಪ್ರಶಸ್ತಿಗೆ ಆಯ್ಕೆಯಾಗಿದೆ. ಅಂತತರಾಷ್ಟ್ರೀಯ ಮಟ್ಟದ ವಿಜ್ಞಾನ ಪ್ರದರ್ಶನಕ್ಕೂ ಆಯ್ಕೆಯಾಗಿದೆ.

 

Related posts

ಅ.28ರಂದು ಶಿವದೂತ ಗುಳಿಗ ಪ್ರದರ್ಶನ.

ನ.22ರಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕೂಲಿ ಕಾರ್ಮಿಕರ ಒಕ್ಕೂಟ ಪ್ರತಿಭಟನೆ.

ಬೆಂಗಳೂರಿನಲ್ಲಿ 15ಕ್ಕೂ ಹೆಚ್ಚು ಕಡೆ NIA ದಾಳಿ: 8 ಮಂದಿ ಅಕ್ರಮ ಬಾಂಗ್ಲಾ ವಲಸಿಗರು ವಶಕ್ಕೆ.