ಕನ್ನಡಿಗರ ಪ್ರಜಾನುಡಿ
ಪ್ರಧಾನ ಸುದ್ದಿಮುಖ್ಯಾಂಶಗಳುರಾಜ್ಯ

ಸಾರಿಗೆ ಇಲಾಖೆಯಿಂದ ಮಾಸ್ಟರ್ ಪ್ಲಾನ್: ಇನ್ಮುಂದೆ ಸರ್ಕಾರಿ ಬಸ್ ಗಳಲ್ಲಿ ಚಿಲ್ಲರೇ ಸಮಸ್ಯೆಯೇ ಉದ್ಬವಿಸಲ್ಲ.

ಬೆಂಗಳೂರು: ದಿನನಿತ್ಯದ ಜೀವನದಲ್ಲಿ ಪ್ರಯಾಣವೆಂಬುದು ಹಾಸುಹೊಕ್ಕಾಗಿದೆ. ಕೆಲಸಕ್ಕೆ ಶಾಲಾಕಾಲೇಜಿಗೆ ಪ್ರವಾಸಕ್ಕೆ ಹೀಗೆ ಎಲ್ಲೆಡೆಗೆ ಜನರು ಪ್ರಯಾಣಿಸುತ್ತಲೇ ಇರುತ್ತಾರೆ. ಈ ಮಧ್ಯೆ ಸಾಮನ್ಯವಾಗಿ ಬಸ್ ಗಳಲ್ಲಿ ಚಿಲ್ಲರೆ  ಕಿರಿಕಿರಿ ಇದ್ದೇ ಇರುತ್ತದೆ. ಇದರಿಂದಾಗಿ ಪ್ರಯಾಣಿಕರು ಮತ್ತು ಕಂಡಕ್ಟರ್ ನಡುವೆ ಜಗಳವೂ ಸಂಭವಿಸಿದ ಉದಹಾರಣೆಗಳಿವೆ. ಇದೀಗ ಇಂತಹ ಘಟನೆಗಳಿಗೆ ಬ್ರೇಕ್ ಹಾಕಲು ಸಾರಿಗೆ ಇಲಾಖೆ ಮಾಸ್ಟರ್ ಪ್ಲಾನ್ ರೂಪಿಸಿದೆ.

ಹೌದು ಸಾರಿಗೆ ಇಲಾಖೆ ಇದೀಗ ಡಿಜಿಟಲ್ ಪ್ಲಾನ್ ರೂಪಿಸಿದ್ದು,  ಪ್ರಯಾಣಿಕರು ಇನ್ನು ಮುಂದೆ ಪೇಟಿಎಂ, ಫೋನ್ಪೇ, ಗೂಗಲ್ ಪೇ ಮೂಲಕ ಹಣ ಪಾವತಿಸಿ, ಟಿಕೆಟ್ ಖರೀದಿಸಬಹುದಾಗಿದೆ. ನಗದು ರಹಿತ ಪಾವತಿ ಮೂಲಕ ಗ್ರಾಹಕರು ಹಾಗೂ ಸಾರಿಗೆ ಸಿಬ್ಬಂದಿಗೆ ಇಬ್ಬರಿಗೂ ಕೂಡ ಚಿಲ್ಲರೆ ವಿಚಾರಕ್ಕೆ ಜಗಳ ಆಗದೆ ಇರೋ ರೀತಿ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಈ ಪ್ಲಾನ್ ರೂಪಿಸಲಾಗಿದೆ.

ಬಸ್ ಗಳಲ್ಲಿ ಟಿಕೆಟ್ ಪಡೆಯಲು ಇನ್ನಷ್ಟು ಅನುಕೂಲ ಸಾರಿಗೆ ಇಲಾಖೆ ಮಾಡಿ ಕೊಡುತ್ತಿದೆ. ಇನ್ಮುಂದೆ ನಿಮ್ಮ ಮೊಬೈಲ್ ನಲ್ಲಿ UPI ಪೇಮೆಂಟ್ ಅವಕಾಶ ಇದ್ದರೆ ಸಾಕು ಬಸ್ ನಲ್ಲಿ ಟಿಕೆಟ್ ಪಡೆಯಬಹುದು. UPI ಕೋಡ್ ಸ್ಕ್ಯಾನ್ ಮಾಡಿ ಟಿಕೆಟ್ ಪಡೆಯಲು ಅವಕಾಶ ಸಾರಿಗೆ ಇಲಾಖೆ ಮಾಡಿ ಕೊಟ್ಟಿದ್ದು ಪ್ರಯೋಗಿಕವಾಗಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬಸ್ ಗಳಲ್ಲಿ ಆರಂಭ ಮಾಡಲಾಗಿದೆ.

ಪೋನ್ ಪೇ, ಗೂಗಲ್ ಪೇ ಸೇರಿದಂತೆ UPI ಮೂಲಕ ಪೇಮೆಂಟ್ ಗೆ ಅವಕಾಶ ಕಲ್ಪಿಸಿ ಕೊಡಲಾಗಿದೆ. ಮುಂದಿನ ದಿನಗಳಲ್ಲಿ ಬಿಎಂಟಿಸಿ, ಕೆಎಸ್ಆರ್ಟಿಸಿ, ಕೆಕೆಆರ್ಟಿಸಿಯಲ್ಲೂ ವಿಸ್ತರಿಸಲು ಇಲಾಖೆ ಚಿಂತನೆ ನಡೆಸುತ್ತಿದೆ. ಇನ್ನೂ UPI ಪೇಮೆಂಟ್ ನಿಂದಾಗುವ ಅನುಕೂಲಗಳು ಏನಪ್ಪಾ ಅಂತ ನೋಡೋದಾದ್ರೆ ನಗದು ರಹಿತ ಪಾವತಿ ಮಾಡಲು ಅನುಕೂಲಕರ.

ಮೊಬೈಲ್ ನಲ್ಲಿ UPI ಆಯಪ್

ಮೊಬೈಲ್ ನಲ್ಲಿ UPI ಆಯಪ್ ಇದ್ದರೆ ಸಾಕು ಬಸ್ ನಲ್ಲಿ ಸಂಚರಿಸಬಹುದು. ಮೊಬೈಲ್ UPI ಮೂಲಕ ಪೇಮೆಂಟ್ ಮಾಡಿ ಟಿಕೆಟ್ ಪಡೆಯಬಹುದು. ಎಲ್ಲಕ್ಕಿಂತ ಮುಖ್ಯವಾಗಿ ಚಿಲ್ಲರೆ ಸಮಸ್ಯೆಯಿಂದ ಮುಕ್ತಿ ಸಿಗುತ್ತೆ. ಚಿಲ್ಲರೆ ಇಲ್ಲ ಅನ್ನೋ ಪ್ರಯಾಣಿಕರು ಮತ್ತು ಕಂಡಕ್ಟರ್ ಸಮಸ್ಯೆ ದೂರವಾಗುತ್ತೆ, ಕಂಡಕ್ಟರ್ ಟಿಕೆಟ್ ನೀಡಿಲ್ಲ ಅನ್ನೋ ಭಯವಿರಲ್ಲ.

ಕಂಡಕ್ಟರ್ ಹಾಗೂ ಪ್ರಯಾಣಿಕರಿಬ್ಬರಿಗೂ ಸಮಯ ಉಳಿತಾಯ

ಕಂಡಕ್ಟರ್ ಹಾಗೂ ಪ್ರಯಾಣಿಕರಿಬ್ಬರಿಗೂ ಸಮಯ ಕೂಡ ಉಳಿತಾಯ ಆಗುತ್ತೆ. ಆದಾಯ ಸೋರಿಕೆ ತಡೆಯುವ ಪ್ಲಾನ್ ಕೂಡ ಹೌದು. ಒಟ್ಟಿನಲ್ಲಿ ಸಾರಿಗೆ ನಿಗಮ ಕೂಡ ಡಿಜಿಟಲ್ ಆಗಿ ಸಾಕಷ್ಟು ಅಭಿವೃದ್ಧಿ ಹೊಂದಿದ್ದು ಇನ್ನೋವೇಟಿವ್ ಐಡಿಯಾಗಳ ಇಂಪ್ಲಿಮೆಂಟ್ ಮಾಡುತ್ತಾ ಇದ್ದು ಒಂದೊಂದೇ ಉತ್ತಮ ಹೆಜ್ಜೆ ಇಟ್ಟು ‘ದಿ ಬೆಸ್ಟ್ ಟ್ರಾನ್ಸ್ಪೋರ್ಟ್ ಸಿಸ್ಟಂ’ ಅಂತ ಅನ್ನಿಸಿ ಕೊಳ್ಳುವತ್ತ ಸಾಗುತ್ತಾ ಇದೆ.

 

Related posts

ಇಸ್ರೋದ ಗಗನಯಾನ ನೌಕೆ ಸುರಕ್ಷತಾ ಪ್ರಯೋಗ ಯಶಸ್ವಿ.

ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಈ ವರ್ಷವೂ `ಉಚಿತ ಸೈಕಲ್’ ವಿತರಣೆ ಇಲ್ಲ!

ನೀರಲ್ಲಿ ಮುಳುಗಿದ ಬಾಲಕನನ್ನ ಬದುಕಿಸಿದ ಗಣೇಶ: ಹೇಗೆ ಅಂತಿರಾ..?