ಕನ್ನಡಿಗರ ಪ್ರಜಾನುಡಿ
ದೇಶಪ್ರಧಾನ ಸುದ್ದಿಮುಖ್ಯಾಂಶಗಳುರಾಜ್ಯ

ಭಾರತ-ಕೆನಡಾ ನಡುವೆ ವಿವಾದದ ಎಫೆಕ್ಟ್: ಶೀಘ್ರವೇ ಬೇಳೆಕಾಳುಗಳ ಬೆಲೆಯಲ್ಲಿ ಭಾರೀ ಏರಿಕೆ!

ನವದೆಹಲಿ: ಭಾರತ-ಕೆನಡಾ ನಡುವೆ ವಿವಾದ ತೀವ್ರಗೊಂಡಿದ್ದು ಇದರ ಪರಿಣಾಮ ಇದೀಗ ಬೆಲೆ ಏರಿಕೆಯ ಮೇಲೂ ಬೀರುವ ಸಾಧ್ಯತೆ ಇದೆ. ಭಾರತ ಮತ್ತು ಕೆನಡಾ ನಡುವೆ ವಿವಾದ ಉಂಟಾದ ಹಿನ್ನೆಲೆ  ಕೆನಡಾದ ಪ್ರಜೆಗಳಿಗೆ ವೀಸಾ ನೀಡುವುದನ್ನು ಈಗಾಗಲೇ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಕೆನಡಾದಿಂದ ಬೇಳೆಕಾಳುಗಳ ಆಮದು ತೀವ್ರವಾಗಿ ಕಡಿಮೆಯಾಗಿದೆ. ಹೀಗಾಗಿ ಭಾರತದಲ್ಲಿ ಬೇಳೆಕಾಳುಗಳ ಬೆಲೆಯಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ.

ನಮ್ಮ ದೇಶದಲ್ಲಿ ಬೇಳೆಕಾಳುಗಳ ಕಡಿಮೆ ಉತ್ಪಾದನೆಯಿಂದಾಗಿ. ಭಾರತವು ಇತರ ದೇಶಗಳ ಮೇಲೆ ಅವಲಂಬಿತವಾಗಿದೆ. ಹೆಚ್ಚಿನ ಧಾನ್ಯಗಳನ್ನು ಕೆನಡಾದಿಂದ ಆಮದು ಮಾಡಿಕೊಳ್ಳಲಾಗುತ್ತಿತ್ತು, ಆದರೆ ಈಗ ಪರಿಸ್ಥಿತಿಗಳ ಬದಲಾವಣೆಯೊಂದಿಗೆ, ಆಮದು ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇಕಡಾ 6 ರಷ್ಟು ಕಡಿಮೆಯಾಗಿದೆ.

ಇನ್ನು ವಿವಾದದಿಂದಾಗಿ ಕೆನಡಾದಿಂದ ಬೇಳೆಕಾಳುಗಳ ಆಮದು ತೀವ್ರವಾಗಿ ಕಡಿಮೆಯಾಗಿದೆ ಮತ್ತು ಇದು ಮುಂದುವರಿದರೆ ಭಾರತದಲ್ಲಿ ಬೆಲೆಗಳು ಹೆಚ್ಚಾಗುವ ಸಾಧ್ಯತೆಯಿದೆ. ಉಭಯ ದೇಶಗಳ ನಡುವಿನ ಪ್ರಸ್ತುತ ರಾಜತಾಂತ್ರಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ವ್ಯಾಪಾರ ನಿರ್ಬಂಧಗಳನ್ನು ಮತ್ತಷ್ಟು ಬಲಪಡಿಸುವ ಸಾಧ್ಯತೆಯಿದೆ ಎಂದು ಉದ್ಯಮ ಮೂಲಗಳು ಕಳವಳ ವ್ಯಕ್ತಪಡಿಸಿವೆ.

ಪ್ರಸ್ತುತ, ಭಾರತವು ಕೆನಡಾವನ್ನು ಹೆಚ್ಚು ಅವಲಂಬಿಸುವ ಬದಲು ಆಸ್ಟ್ರೇಲಿಯಾದಂತಹ ಇತರ ದೇಶಗಳನ್ನು ಅವಲಂಬಿಸಲು ಪರ್ಯಾಯ ಮಾರ್ಗಗಳನ್ನು ಅನ್ವೇಷಿಸುತ್ತಿದೆ. ಆದರೆ ಭಾರತೀಯ ಮಾರುಕಟ್ಟೆಯಲ್ಲಿ ಬೇಳೆಕಾಳುಗಳ ಬೆಲೆಗಳು ಹೆಚ್ಚಾಗುವ ಸಾಧ್ಯತೆಯಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ ಎನ್ನಲಾಗಿದೆ.

2022-23ರ ಆರ್ಥಿಕ ವರ್ಷದಲ್ಲಿ ದ್ವಿದಳ ಧಾನ್ಯಗಳ ಆಮದಿನಲ್ಲಿ ಕೆನಡಾ ಮಹತ್ವದ ಪಾತ್ರ ವಹಿಸಿದೆ, ಇದು ಭಾರತದ ಒಟ್ಟು ಬೇಳೆಕಾಳುಗಳ ಆಮದಿನ ಅರ್ಧಕ್ಕಿಂತ ಹೆಚ್ಚು. ಭಾರತದ ವಾಣಿಜ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ಏಪ್ರಿಲ್ ಮತ್ತು ಜುಲೈ ನಡುವೆ ಭಾರತವು 1,90,784 ಟನ್ ಆಮದು ಮಾಡಿಕೊಂಡಿದೆ.

 

Related posts

ಕನ್ನಡವನ್ನು ತಳಮಟ್ಟದಲ್ಲಿ ಉಳಿಸಿ ಬೆಳೆಸುವಲ್ಲಿ ಕಾರ್ಮಿಕರ ಪಾತ್ರ ಬಹುದೊಡ್ಡದು -ನಾಡೋಜ ಡಾ. ಮಹೇಶ ಜೋಶಿ

ಸೆ.16ರಂದು ಕಾಗೋಡು ತಿಮ್ಮಪ್ಪನವರ ಅಭಿನಂದನಾ ಸಮರ್ಪಣಾ ಸಮಾರಂಭ.

900 ಹೆಣ್ಣು ಭ್ರೂಣಗಳ ಹತ್ಯೆ: ಇಬ್ಬರು ವೈದ್ಯರು ಸೇರಿ 9 ಮಂದಿ ಅಂದರ್.