ಕನ್ನಡಿಗರ ಪ್ರಜಾನುಡಿ
ಕ್ರೈಮ್ಪ್ರಧಾನ ಸುದ್ದಿಮುಖ್ಯಾಂಶಗಳುರಾಜ್ಯ

ನಾಟಕ ಪ್ರದರ್ಶನ ವೇಳೆ ಸ್ಟೇಜ್ ಮೇಲೆಯೇ ಹೃದಯಾಘಾತ:  ಕುಸಿದು ಬಿದ್ದು  ಕಲಾವಿದ ಸಾವು.

ವಿಜಯಪುರ: ನಾಟಕ ಪ್ರದರ್ಶನ ವೇಳೆ ಸ್ಟೇಜ್ ಮೇಲೆಯೇ ಕುಸಿದು ಬಿದ್ದು ಕಲಾವಿದ ಸಾವನ್ನಪ್ಪಿರುವ ಘಟನೆ ವಿಜಯಪುರದಲ್ಲಿ ನಡೆದಿದೆ.

ಜಿಲ್ಲೆಯ ತಿಕೋಟಾ ತಾಲೂಕಿನ ಕೋಟ್ಯಾಳ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಹಾಸ್ಯಪಾತ್ರ ಮಾಡಿದ್ದ ಶರಣು ಬಾಗಲಕೋಟೆ (28) ಮೃತಪಟ್ಟ ಕಲಾವಿದ.

ನಿನ್ನೆ ಕೋಟ್ಯಾಳ ಗ್ರಾಮದಲ್ಲಿ ಗ್ರಾಮ ದೇವತೆ ಮುಕ್ತಾಕರ ದೇವರ ಜಾತ್ರೆಯ ಅಂಗವಾಗಿ ನಾಟಕ ಪ್ರದರ್ಶನ ಮಾಡಲಾಗಿತ್ತು. ಈ ನಡುವೆ ನಾಟಕ ಪ್ರದರ್ಶನದ ವೇಳೆಯೇ ಹೃದಯಾಘಾತದಿಂದ ಶರಣು ಬಾಗಲಕೋಟೆ ಏಕಾಏಕಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ.

ಶರಣು ಕುಸಿದು ಬೀಳುತ್ತಿರುವ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ.  ಮೃತರು ಬಾಗಲಕೋಟೆ ಅಂಚೆ ಕಚೇರಿಯಲ್ಲಿ ಪೋಸ್ಟ್ ಮ್ಯಾನ್ ಆಗಿ ಕೆಲಸ  ನಿರ್ವಹಿಸುತ್ತಿದ್ದರು. ಶರಣು ಅವರು ಮೃತಪಟ್ಟ ಕಾರಣ ನಾಟಕ ಪ್ರದರ್ಶನ ರದ್ದುಗೊಳಿಸಲಾಯಿತು.

Related posts

ಖರೀದಿಸಲು ಶಕ್ತಿ ಇಲ್ಲದವರು 2 ತಿಂಗಳು ಈರುಳ್ಳಿ ತಿನ್ನದಿದ್ರೆ ಏನು ಆಗಲ್ಲ- ಸಚಿವರೊಬ್ಬರ ಉಡಾಫೆ ಉತ್ತರಕ್ಕೆ ನೆಟ್ಟಿಗರು ಕ್ಲಾಸ್.

1 ಸೆಕೆಂಡ್ ನಲ್ಲಿ 150 ಮೂವಿ ಡೌನ್ಲೋಡ್ ಮಾಡುವ ಸಾಮರ್ಥ್ಯದ ವಿಶ್ವದ ಅತ್ಯಂತ ವೇಗದ ಇಂಟರ್ನೆಟ್ ಪ್ರಾರಂಭ.

ರೈತರೇ ಬೇಸಿಗೆ ಬೆಳೆ ಬೆಳೆಯಬೇಡಿ: ಸಚಿವ ಚಲುವರಾಯಸ್ವಾಮಿ ಮನವಿ

TOD News