ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ನಾಗರ ಪಂಚಮಿಯಂದು ಹಾಲೆರೆದ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದರು ದಯೆ, ವಾತ್ಸಲ್ಯ, ಪ್ರೀತಿ ಸಜ್ಜನರ ಸ್ವಭಾವ.

ಹೊಳೆಹೊನ್ನೂರು : ಏನೇ ಅಪರಾಧ ಎಸಗಿದ್ದರೂ ದಯೆ ತೋರುವ ಸ್ವಭಾವದವ ಇರುವವರು ಸಜ್ಜನರು ಎಂದು ತಿಳಿದುಕೊಂಡಂತೆ ಎಂದು ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದರು ಹೇಳಿದರು.
ಭಾನುವಾರ ಸಂಜೆ ತಮ್ಮ 28ನೇ ಚಾತುರ್ಮಾಸ್ಯದ ಅಂಗವಾಗಿ ನಡೆಯುತ್ತಿರುವ ಶ್ರೀ ಸತ್ಯಧರ್ಮತೀರ್ಥ ಶ್ರೀಪಾದಂಗಳವರ ದಶಮ ಸ್ಕಂದ ವ್ಯಾಖ್ಯಾನಾಧಾರಿತ ಅನುಗ್ರಹ ಸಂದೇಶ ನೀಡಿದರು.
ದಯೆ, ವಾತ್ಸಲ್ಯ, ಪ್ರೀತಿ ಇದು ಸಜ್ಜನರು, ಸಾಧುಗಳು ಮತ್ತು ಸಂತರ ಸಾಮಾನ್ಯವಾದ ಗುಣಗಳು. ವಿಹಿತ ಕರ್ಮಗಳನ್ನು ಮಾಡಬೇಕೇ ಹೊರತು ನಿಷಿದ್ಧವಾದ ಕರ್ಮಗಳನ್ನು ಯಾರೂ ಮಾಡಬಾರದು. ನಿಷಿದ್ಧ ಕರ್ಮಗಳಿಂದ ಪಾಪ ಸಾಧನೆಯಾಗುತ್ತದೆ ಎಂದರು.
ತಪಸ್ಸನ್ನು ಕಾಪಾಡಿಕೊಳ್ಳಿ :
ಪ್ರವಚನ ನೀಡಿದ ಕಡೂರು ಮಧುಸೂದನಾಚಾರ್ಯ, ಮನುಷ್ಯ ತನ್ನ ತಪಸ್ಸನ್ನು ಕಾಪಾಡಿಕೊಳ್ಳುವುದೇ ಬಹಳ ಕಷ್ಟ. ಹೀಗಾಗಿ ಇಂದ್ರಿಯಗಳ ಮೇಲೆ ನಿಯಂತ್ರಣ ಇರಬೇಕು. ಒಂದೇ ಒಂದು ಕೆಟ್ಟ ಕೆಲಸದಿಂದ ಇಡೀ ಜೀವನದ ತಪಸ್ಸು ನಾಶವಾಗಿಬಿಡುತ್ತದೆ ಎಂದರು.
ಸ್ತ್ರೀ ಸಂಗದಿಂದ ಉಂಟಾದಂತಹ ಪಾಪವನ್ನು ಕಳೆದುಕೊಳ್ಳಬೇಕಾದರೆ ಮುಮುಕ್ಷುಗಳಾದವರು ಮೊದಲು ಸ್ನೇಹ ರೂಪವಾದ ಸಂಘವನ್ನು ಮೊದಲು ಬಿಡಬೇಕು. ಒಂದು ವೇಳೆ ಸಂಘ ಮಾಡುವುದಾದರೆ ಭಗವಂತನ ಸಂಘ ಮಾಡಬೇಕು. ಒಬ್ಬನೇ ತಪಸ್ಸು ಮಾಡಬೇಕು. ವಿಷಯಗಳ ಆಸಕ್ತಿಯನ್ನು ಬಿಡಬೇಕು ಎಂದರು.
ಇದೇ ಸಂದರ್ಭದಲ್ಲಿ ಮಥುರಾದಿಂದ ಶ್ರೀಪಾದಂಗಳವರಿಗೆ ಶ್ರೀಕೃಷ್ಣ ಪರಮಾತ್ಮನ ಶೇಷವಸ್ತ್ರ ಹಾಗೂ ಪ್ರಸಾದವನ್ನು ಸಮರ್ಪಿಸಲಾಯಿತು. ಪೂಜಾ ಕಾಲದಲ್ಲಿ ಪ್ರವಚನ ಮಾಡಿದ್ದ ಅನಂತಾಚಾರ್ಯ ಅಕಮಂಜಿ ಅವರನ್ನು ಗೌರವಿಸಲಾಯಿತು.
ಈ ವೇಳೆ ಬೆಂಗಳೂರಿನ ಜಯತೀರ್ಥ ವಿದ್ಯಾಪೀಠದ ಕುಲಪತಿಗಳಾದ ಗುತ್ತಲ ರಂಗಾಚಾರ್ಯ, ಪಂಡಿತರಾದ ಲಕ್ಷ್ಮೀನರಸಿಂಹಾಚಾರ್ಯ, ಶ್ರೀಕಾಂತಾಚಾರ್ಯ ಮುಕ್ಕುಂದಿ, ಚಾತುರ್ಮಾಸ್ಯ ಸಮಿತಿಯ ಅಧ್ಯಕ್ಷ ನವರತ್ನ ಸುಬ್ಬಣ್ಣಾಚಾರ್ಯ, ಪಂಡಿತರಾದ ನವರತ್ನ ಶ್ರೀನಿವಾಚಾರ್ಯ, ನವರತ್ನ ಪುರುಷೋತ್ತಮಾಚಾರ್ಯ, ರಘೂತ್ತಮಾಚಾರ್ಯ ಸಂಡೂರು, ಜಿಲ್ಲಾ ಮಠಾಧಿಕಾರಿ ಬಾಳಗಾರು ಜಯತೀರ್ಥಾಚಾರ್ಯ ಮೊದಲಾದವರಿದ್ದರು.

ಬಾಕ್ಸ್:
ನಾಗರ ಪಂಚಮಿ ನಿಮಿತ್ತ ಆಶ್ಲೇಷಾ ಬಲಿ
ಸೋಮವಾರ ನಾಗರ ಪಂಚಮಿಯ ಅಂಗವಾಗಿ ಚಾತುರ್ಮಾಸ್ಯ ಕಾಲದಲ್ಲಿ ಶ್ರೀಪಾದಂಗಳವರ ಆಜ್ಞಾನುಸಾರ ಆಶ್ಲೇಷಾ ಬಲಿ ಹೋಮವನ್ನು ನೆರವೇರಿಸಲಾಯಿತು. ಒಂದೆಡೆ ಋಕ್ ಸಂಹಿತಾ ಯಾಗ ನಡೆಯುತ್ತಿದ್ದ ಯಾಗ ಶಾಲೆಯಲ್ಲಿ ಮತ್ತೊಂದು ಕಡೆ ಆಶ್ಲೇಷಾ ಬಲಿ ಹೋಮ ನಡೆಯಿತು. ನೂರಾರು ಜನರು ಇದರಲ್ಲಿ ಭಾಗವಹಿಸಿ ಶೇಷ ದೇವರಲ್ಲಿ ತಮ್ಮ ಪ್ರಾರ್ಥನೆ ಸಲ್ಲಿಸಿದರು. ಶ್ರೀಪಾದಂಗಳವರು ಕೂಡ ಸಂಸ್ಥಾನ ಪೂಜೆಯ ಬಳಿಕ ಮೃತ್ತಿಕೆಯ ಶೇಷದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಹಾಲೆರೆದರು.

Related posts

ಹಿಂದೂ ಮಹಾಸಭಾ ಗಣೇಶ ರಾಜಬೀದಿ ಉತ್ಸವ ಶಾಂತಿಯುತವಾಗಿ ನಡೆಯಲು ಎಲ್ಲಾ ರೀತಿಯ ಬಂದೋಬಸ್ತ್- ಎಸ್ಪಿ ಮಿಥುನ್ ಕುಮಾರ್

ಬೆಂಗಳೂರಿನ ಪೀಣ್ಯ ಫ್ಲೈಓವರ್​ ಮತ್ತೆ 4 ದಿನಗಳ ಕಾಲ ಬಂದ್

TOD News

ಇತ್ತ ಗ್ಯಾಸ್ ಬೆಲೆ ಇಳಿಕೆ ಬೆನ್ನಲ್ಲೆ ಅತ್ತ ಶೀಘ್ರದಲ್ಲೇ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ?