ಕನ್ನಡಿಗರ ಪ್ರಜಾನುಡಿ
ಪ್ರಧಾನ ಸುದ್ದಿಮುಖ್ಯಾಂಶಗಳುರಾಜಕೀಯರಾಜ್ಯ

ಶಕ್ತಿ ಯೋಜನೆ ಎಫೆಕ್ಟ್: ತುಂಬಿ ತುಳುಕುತ್ತಿರುವ ದೇವಸ್ಥಾನಗಳು: ಆನ್ ಲೈನ್ ಸೇವೆಗೆ ಮುಂದಾದ ಸರ್ಕಾರ.

ಬೆಂಗಳೂರು : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ  ಶಕ್ತಿ ಯೋಜನೆ ಜಾರಿಗೊಳಿಸಿದ್ದು ಇದರ ಪರಿಣಾಮ ಹೆಚ್ಚಿನ  ಸಂಖ್ಯೆಯಲ್ಲಿ ಮಹಿಳೆಯರು ದೇವಸ್ಥಾನಗಳಿಗೆ ಲಗ್ಗೆ ಇಡುತ್ತಿದ್ದಾರೆ. ಯಾವ ದೇವಸ್ಥಾನಕ್ಕೆ ಕಾಲಿಟ್ಟರೂ ತುಂಬಿ ತುಳುಕುತ್ತಿವೆ. ದೇವಸ್ಥಾನಗಳಿಗೆ ಕಾಣಿಕೆ, ಹುಂಡಿಗೆ ಹಣ ಹರಿದು ಬರುತ್ತಿದೆ.

ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಆಗಮಿಸುತ್ತಿರುವ ಹಿನ್ನೆಲೆ ಮುಜರಾಯಿ ವ್ಯಾಪ್ತಿಯ ಪ್ರಮುಖ ದೇವಾಲಯಗಳಲ್ಲಿ ಜನರು ಹರಕೆ, ಪೂಜೆ ಸಲ್ಲಿಸಲು ಪರದಾಡುವಂತಾಗುತ್ತಿದೆ. ಇನ್ನೊಂದೆಡೆ ವಸತಿ, ಲಾಡ್ಜ್ ಸಿಗದೆ ಭಾರೀ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹೀಗಾಗಿ ಈ ಎಲ್ಲಾ ಪರದಾಟ ತಪ್ಪಿಸಲು ಮುಜರಾಯಿ ಇಲಾಖೆ ಹೊಸ ಪ್ಲಾನ್ಗೆ ಮುಂದಾಗಿದೆ. ಭಕ್ತರಿಗೆ ಮತಷ್ಟು ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ರಾಜ್ಯದ ಮುಜರಾಯಿ ದೇವಸ್ಥಾನಗಳಲ್ಲಿ ಆನ್ ಲೈನ್  ಸೇವೆ ಜಾರಿಗೆ ಮುಂದಾಗಿದೆ.

ಈ ಕುರಿತು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಮಾಹಿತಿ ನೀಡಿದ್ದಾರೆ.  ಮುಜರಾಯಿ ದೇವಸ್ಥಾನಗಳಲ್ಲಿ ಸೇವೆ ಸಲ್ಲಿಸಲು ಹಾಗೂ ದರ್ಶನಕ್ಕೆ ಇನ್ನು ಹೆಚ್ಚು ಪ್ರಯಾಸ ಪಡಬೇಕಾಗಿಲ್ಲ. ಹೌದು ಜನರ ಪರದಾಟ ತಪ್ಪಿಸಲು ಕೋಟ್ಯಾಂತರ ಭಕ್ತರ ಅನುಕೂಲದ ದೃಷ್ಟಿಯಿಂದ ಹಿಂದೂ ಧಾರ್ಮಿಕ ಹಾಗೂ ಧರ್ಮದಾಯಿ ದತ್ತಿ ಇಲಾಖೆ ಮಹತ್ವದ ಹೆಜ್ಜೆಗೆ ಮುಂದಾಗಿದೆ. ಮುಜರಾಯಿ ಇಲಾಖೆ ಅಡಿಯಲ್ಲಿ ಹಾಗೂ ಸೇವಾ ಸೌಲಭ್ಯ ಇರುವ ದೇವಸ್ಥಾನಗಳಲ್ಲಿ ಆನ್ಲೈನ್ ಸೇವೆ ನೀಡಲು ಮುಂದಾಗಿದೆ. ಮುಜರಾಯಿ ಇಲಾಖೆಯ ವಸತಿ ಗೃಹ ಇರುವ ದೇವಸ್ಥಾನಗಳಲ್ಲಿಯೂ ಈ ಅವಕಾಶ ನೀಡಲು ಮುಂದಾಗಿದೆ.

ತಿರುಪತಿ ಸೇರಿದಂತೆ ಕುಕ್ಕೆ ಸುಬ್ರಹ್ಮಣ್ಯ, ಕೊಲ್ಲೂರು ಮೂಕಾಂಬಿಕೆ, ಚಾಮುಂಡೇಶ್ವರಿ ದೇವಸ್ಥಾನ, ಕಟೀಲು ದುರ್ಗಾಪರಮೇಶ್ವರಿ ಸೇರಿದಂತೆ ರಾಜ್ಯದ ಮುಜರಾಯಿ ಇಲಾಖೆಯ ವ್ಯಾಪ್ತಿಯ ದೇವಸ್ಥಾನಗಳಲ್ಲಿ ಎಲ್ಲವನ್ನು ಮುಗಂಡ ಬುಕ್ಕಿಂಗ್ ಮಾಡಿಕೊಳ್ಳಲು ಅವಕಾಶ ಕಲ್ಪಿಸಲು ಮುಂದಾಗಿದೆ. ಯಾವುದೇ ಹರಕೆ ಪೂಜೆ, ವಿಶೇಷ ಸೇವೆ, ವಸತಿ ಗೃಹಗಳ ಬುಕ್ಕಿಂಗ್, ಮದುವೆ ಅಥವಾ ಯಾವುದೇ ಶುಭ ಸಮಾರಂಭಗಳಿಗೆ ಮೊದಲೆ ನೀವು ಆನ್ಲೈನ್ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ. ಇದರಿಂದ ನೀವು ದೇವಸ್ಥಾಗಳಲ್ಲಿ ತುರ್ತು ಸೇವೆ ಹಾಗೂ ವಸತಿ ಸೌಲಭ್ಯ ಪಡೆಯಬಹುದಾಗಿದೆ.

ಏನಿದು ಇ ಸೇವೆ. ಬಳಕೆ ಹೇಗೆ ?

ವಾಸ್ತವ್ಯಕ್ಕೆ ಕೊಠಡಿ, ದೇವರ ದರ್ಶನ ಹಾಗೂ ಸೇವೆಗೆ ಮೊದಲೇ ಕಾಯ್ದಿರಿಸುವುದು

ಇ-ಸೇವಾ ಪುಟದಲ್ಲಿ ದೇವಸ್ಥಾನದ ಮಾಹಿತಿ, ಸೇವಾ ವಿವರ, ಸಂಪರ್ಕ ಸಂಖ್ಯೆಗಳು, ಸ್ಥಳ ಪುರಾಣ, ಜಾತ್ರೆ, ಉತ್ಸವದ ವಿವರ ಇರುತ್ತದೆ

ದೇವಸ್ಥಾನಗಳೊಂದಿಗೆ ಆರ್ಥಿಕ ವಹಿವಾಟು ಇಟ್ಟುಕೊಂಡಿರುವ ಬ್ಯಾಂಕ್ಗಳನ್ನು ಇ-ಸೇವೆಗೆ ಜೋಡಿಸಲಾಗುತ್ತಿದೆ. ದೇವಸ್ಥಾನಕ್ಕೆ ಬರಲು ರೂಟ್ ಮ್ಯಾಪ್, ಸುತ್ತಮುತ್ತಲಿನ ಪ್ರವಾಸಿ ತಾಣಗಳ ಜತೆಗೆ ದೇವಸ್ಥಾನದ ಛಾಯಾಚಿತ್ರ ಹಾಗೂ ವಿಡಿಯೋ ಕ್ಲಿಪಿಂಗ್ಗಳನ್ನು ಅಳವಡಿಸಿ ಮಾಹಿತಿ

ಇದರಿಂದ ಭಕ್ತರು ನೇರವಾಗಿ ಅಲ್ಲಿಂದ ಸೇವೆಯನ್ನು ಮುಂಗಡ ಬುಕ್ಕಿಂಗ್ ಮಾಡಿಸಬಹುದು

ಗೃಹಶಕ್ತಿ ಯೋಜನೆಯ ಎಫೆಕ್ಟ್ ಎಲ್ಲ ದೇವಸ್ಥಾನಗಳು ಪುಲ್ ರಶ್ ಹಿನ್ನಲೆ ಜನರು ಪ್ರಮುಖ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ವಸತಿ, ಹಾಗೂ ಹರಕೆ ಮತ್ತಿತರ ಸೇವೆಗೆ ಪರದಾಡಬೇಕಿದೆ. ಇದನ್ನ ತಪ್ಪಿಸಲು ಮುಜರಾಯಿ ಇಲಾಖೆ ತನ್ನ ವ್ಯಾಪ್ತಿಯ ದೇವಸ್ಥಾನಗಳಲ್ಲಿ ಆನ್ಲೈನ್ ಸೇವೆ ನೀಡಲು ಮುಂದಾಗಿದೆ. ಇದಕ್ಕಾಗಿ ಆನ್ಲೈನ್ ಕಂಪ್ಲೀಟ್ ಸೇವೆ ನೀಡಲು ಬೆಂಗಳೂರಿನಲ್ಲಿ ಬುಕ್ಕಿಂಗ್ ಹಾಗೂ ಕಮಾಡಿಂಗ್ ಸೆಂಟರ್ ತೆರದು ನಿರ್ವಹಣೆಗೆ ಮುಂದಾಗಿದೆ. ಈ ಮೂಲಕ ಖಾಸಗಿ ವಸತಿ ಗೃಹಗಳಿಗೆ ಸೋರಿಕೆಯಾಗುತ್ತಿದ್ದ ಹಣ ಮತ್ತು ಹೆಚ್ಚು ತುರ್ತು ಸೇವಯಿಂದ ಭಕ್ತರಿಗೆ ಹೆಚ್ಚಿನ ಅವಕಾಶ ಹಿನ್ನಲೆ ಭಕ್ತರಿಗೆ ವಿಶೇಷ ಅನಕೂಲದ ಜೊತೆ ಹುಂಡಿ ಹಣ ಡಬಲ್ ಮಾಡುವ ಯೋಜನೆಗೆ ಮುಜರಾಯಿ ಇಲಾಖೆ ಕೈಹಾಕಿದೆ.

ಒಟ್ಟಿನಲ್ಲಿ ಮುಜರಾಯಿ ಇಲಾಖೆ ಭಕ್ತರಿಗೆ ಇ-ಸೌಲಭ್ಯದ ಜೊತೆ ಜನರ ಪರದಾಟ ದೂರು ಮಾಡುವುದರ ಜೊತೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರಿಗೆ ಸುಲಭ ಸೇವೆ ನೀಡುವುದರ ಮೂಲಕ ದೇವಸ್ಥಾನದ ಹುಂಡಿ ಹಣ ಡಬಲ್ ಮಾಡಿಕೊಳ್ಳುವ ತಂತ್ರಕ್ಕೆ ಸರ್ಕಾರ ಮುಂದಾಗಿದೆ.

 

Related posts

ರಾಜ್ಯ ಸರ್ಕಾರಿ ನೌಕರರಿಗೊಂದು ಮಾಹಿತಿ: ವಿಮೆ ಮಾಡಿಸಲು ಪ್ರೆರೇಪಿಸುವಂತೆ ಆರ್ಥಿಕ ಇಲಾಖೆ ಪತ್ರ..

ಇನ್ಮುಂದೆ ವಾಹನಗಳಲ್ಲಿ ಎಮರ್ಜೆನ್ಸಿ ಪ್ಯಾನಿಕ್ ಬಟನ್ ಅಳವಡಿಕೆ ಕಡ್ಡಾಯ.

ಮಾಜಿ ಸಿಎಂ.ದಿ. ಎಸ್ ಬಂಗಾರಪ್ಪನವರ ಹುಟ್ಟು ಹಬ್ಬ: ಹಸಿರು ಬಂಗಾರ DRS -ಪಾರ್ಕ್ “ನ ಉದ್ಘಾಟನೆ- ಪ್ರಶಾಂತ್ ದೊಡ್ಡಮನೆ