ಶಿವಮೊಗ್ಗ : ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಸೆ.12 ರ ಮಂಗಳವಾರ ಸಂಜೆ 06:00 ಕ್ಕೆ ನಗರದ ಗೋಪಿಶೆಟ್ಟಿಕೊಪ್ಪದ ಚಾಲುಕ್ಯ ನಗರದಲ್ಲಿರುವ ಸಾಹಿತ್ಯ ಗ್ರಾಮದಲ್ಲಿ ಕಥೆ ಹೇಳುವ ಕಥಾ ಸಂಜೆ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಹಿರಿಯ ಸಾಹಿತಿಗಳಾದ ಕಟ್ಟೆಪುರಾಣ ಖ್ಯಾತಿ ಬಿ.ಚಂದ್ರೇಗೌಡ ಉದ್ಘಾಟಿಸಲಿದ್ದಾರೆ. ಕಥೆಗಾರರಾದ ಡಾ. ಕಲೀಮ್ ಉಲ್ಲಾ, ತುರುವನೂರು ಮಲ್ಲಿಕಾರ್ಜುನ, ಡಾ.ಕೆ. ಎಸ್.ಗಂಗಾಧರ, ಡಾ.ಅಣ್ಣಪ್ಪ ಮಳೀಮಠ, ಶ್ರೀನಿವಾಸ ನಗಲಾಪುರ, ಕೆ.ವಿನಯ್, ಮಂಜುಳಾ ರಾಜು ಡಿ.ಎಚ್. ಸೂರ್ಯಪ್ರಕಾಶ್, ಡಿ. ಮಂಜುನಾಥ ಕಥೆ ಹೇಳುತ್ತಾರೆ.
ಕಥೆ ಕುರಿತು ತಮ್ಮ ಅಭಿಪ್ರಾಯ ತಿಳಿಸಲು ಆರ್.ಎಸ್. ಹಾಲಸ್ವಾಮಿ, ಡಾ. ಕೆ. ಜಿ. ವೆಂಕಟೇಶ, ಮಹಾದೇವಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮ ಸಂಚಾಲಕರಾಗಿ ಡಿ. ಎಚ್. ಸೂರ್ಯಪ್ರಕಾಶ್, ಎಂ. ಎಂ. ಸ್ವಾಮಿ, ಎಸ್. ನಾರಾಯಣ ಗೋಪಿಶೆಟ್ಟಿಕೊಪ್ಪ ಅವರು ಜವಾಬ್ದಾರಿ ನಿರ್ವಹಣೆ ಮಾಡಲಿದ್ದಾರೆ. ನಿವೃತ್ತ ಎಎಸ್ಐ ಆರ್.ರವಿ ಜನಪದ ಗೀತೆ ಹಾಡಲಿದ್ದಾರೆ. ಸಾಹಿತ್ಯ, ಸಾಂಸ್ಕೃತಿಕ ಮನಸ್ಸುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಡಿ. ಮಂಜುನಾಥ ಮನವಿ ಮಾಡಿದ್ದಾರೆ.