ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

33 ನೇ ರಾಜ್ಯ ಮಟ್ಟದ ಸಂಸ್ಕತ ಭಾಷಣ ಸ್ಪರ್ಧೆ: ವಿಜೇತರಿಗೆ ಬಹುಮಾನ ವಿತರಣೆ.

ಶಿವಮೊಗ್ಗ: ನಗರದ ಸಂಸ್ಕೃತ ಭಾರತೀ, ತರುಣೋದಯ ಸಂಸ್ಕತ ಸೇವಾ ಸಂಸ್ಥೆ ಆಶ್ರಯದಲ್ಲಿ ಭಾನುವಾರ ಶಿವಮೊಗ್ಗ ನಗರದ ಸಂಸ್ಕತ ಭವನದಲ್ಲಿ 33 ನೇ ರಾಜ್ಯ ಮಟ್ಟದ ಸಂಸ್ಕತ ಭಾಷಣ ಸ್ಪರ್ಧೆ ನಡೆಸಲಾಗಿದ್ದು, ವಿಜೇತರ ವಿವರ ಇಂತಿದೆ.
ದೇಶದ ಆರ್ಥಿಕ ಸುಭದ್ರತೆಗೆ ಚಾಣಕ್ಯನ ಮಾರ್ಗೋಪಾಯಗಳು ಎಂದು ವಿಚಾರವಾಗಿ ಸಂಸ್ಕೃತದಲ್ಲಿ ಭಾಷಣ ಏರ್ಪಡಿಸಲಾಗಿತ್ತು. ನಾಗರಾಜ ನಾರಾಯಣ ಭಟ್ಟ, ಶ್ರೀ ಮಾತಾ ಸಂಸ್ಕೃತ ಮಹಾವಿದ್ಯಾಲಯ ಉಮ್ಮಚಗಿ ವಿದ್ಯಾರ್ಥಿ, ಇವರು ಶ್ರೀ ಆದಿಚುಂಚನಗಿರಿ ಕ್ಷೇತ್ರದ ಪರಮ ಪೂಜ್ಯ ಶ್ರೀ ಶ್ರೀ ಡಾ|| ಬಾಲಗಂಗಾಧರನಾಥ ಸ್ವಾಮೀಜಿಯವರ ಸ್ಮರಣಾರ್ಥವಾಗಿ ನೀಡಲಾಗುತ್ತಿರುವ ಮೊದಲನೇ ಸ್ಥಾನವನ್ನು ಪಡೆದುಕೊಂಡಿರುತ್ತಾರೆ.
ಸುದರ್ಶನ ಎಮ್.ಎಸ್. ಶ್ರೀ ರಾಜೀವ ಗಾಂಧಿ ಪರಿಸರ ಕೇಂದ್ರೀಯ ಸಂಸ್ಕೃತ ವಿಶ್ವ ವಿದ್ಯಾಲಯ ಶೃಂಗೇರಿ ವಿದ್ಯಾರ್ಥಿ, ಇವರು ಶ್ರೀಮತಿ ಸೀತಮ್ಮ ಹಾಗೂ ವಿದ್ವಾನ್ ವೆಂಕಟರಮಣ ಉಪಾಧ್ಯ ಸ್ಮರಣಾರ್ಥವಾಗಿ ಟಿ.ವಿ.ನರಸಿಂಹ ಮೂರ್ತಿಯವರು ನೀಡಲಾಗುತ್ತಿರುವ ಎರಡನೇ ಸ್ಥಾನವನ್ನು ಪಡೆದುಕೊಂಡಿರುತ್ತಾರೆ.
ಹರಿತ್ರ ಭಾವಿ ಸಮೀರ ಗುರುಕುಲಂ, ಸೋಂದ ವಿದ್ಯಾರ್ಥಿ ಇವರು ಅ.ನಾ. ಮಾಧವರಾವ್ ಸ್ಮರಣಾರ್ಥವಾಗಿ ಆ.ನಾ. ರಾಧಮ್ಮ ರವರು ನೀಡಲಾಗುತ್ತಿರುವ ಮೂರನೇ ಸ್ಥಾನವನ್ನು ಪಡೆದುಕೊಂಡಿರುತ್ತಾರೆ.
ಶ್ರೀ ಸೋಮಶೇಖರ, ಶ್ರೀ ಕಾಲ ಭೈರವೇಶ್ವರ ಸಂಸ್ಕೃತ ವೇದ ಆಗಮ ಮಹಾ ವಿದ್ಯಾಲಯ, ಶ್ರೀ ಆದಿಚುಂಚನಗರಿ ಇದರ ವಿದ್ಯಾರ್ಥಿ ಇವರು ಕರಂಬಳ್ಳಿ ಕೃಷ್ಣಶೆಟ್ಟಿಯವರು ಪ್ರಾಯೋಜಿಸಿರುವ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿರುತ್ತಾರೆ.
ಶ್ರೀ ಪ್ರಭಂಜನ ಭಾವಿ ಸಮೀರ ಗುರುಕುಲಂ, ಸೋಂದ ವಿದ್ಯಾರ್ಥಿ ಇವರು ಶ್ರೀಮತಿ ವಾಗ್ಗೇವಿ ಜೋಯಿಸ್ ಹಾಗೂ ಶ್ರೀ ಮಧುಕರ ಜೋಯಿಸ್ ರವರು ಪ್ರಾಯೋಜಿಸಿ ನೀಡಲಾಗುತ್ತಿರುವ ಐದನೇ ಸ್ಥಾನವನ್ನು ಪಡೆದುಕೊಂಡಿರುತ್ತಾರೆ.
ಶ್ರೀ ಯೋಗೇಶ, ಶ್ರೀ ಕಾಲ ಭೈರವೇಶ್ವರ ಸಂಸ್ಕೃತ ವೇದ ಆಗಮ ಮಹಾ ವಿದ್ಯಾಲಯ, ಆದಿಚುಂಚನಗಳು, ವಿದ್ಯಾರ್ಥಿ ಇವರು ಶ್ರೀಮತಿ ನಾಗೇವಿ ಜೋಯಿಸ್ ಹಾಗೂ ಶ್ರೀ ಮಧುಕರ ಜೋಯಿಸ್ ರವರು ಪ್ರಾಯೋ ನೀಡಲಾಗುತ್ತಿರುವ ಐದನೇ ಸ್ಥಾನವನ್ನು ಪಡೆದುಕೊಂಡಿರುತ್ತಾರೆ.
ಅಂಜಲಿ ಎ. ಸೈಂಟ್ ಜೋಸೆಫ್ ವಿದ್ಯಾಲಯ, ಬೆಂಗಳೂರು ಇದರ ವಿದ್ಯಾರ್ಥಿನಿ ಇವರು ಡಾ.ಭೀಮೇಶ್ವರ ಜೋಶಿ, ಧರ್ಮದರ್ಶಿಗಳು, ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನ, ಶ್ರೀ ಕ್ಷೇತ್ರ ಹೊರನಾಡು ಇವರು ಪ್ರಾಯೋಜಿಸಿ ನೀಡಲಾಗುತ್ತಿರುವ ಆರನೇ ಸ್ಥಾನವನ್ನು ಪಡೆದುಕೊಂಡಿರುತ್ತಾರೆ.
ವಿಜೇತರಿಗೆ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರವನ್ನು ಸಂಸ್ಕೃತ ಭಾರತಿ ಶಿವಮೊಗ್ಗ ಜಿಲ್ಲಾ ಸಂಯೋಜಕ ಹಾಗೂ ತರುಣೋದಯ ಸಂಸ್ಕೃತ ಸೇವಾ ಸಂಸ್ಥೆಯ ಅಧ್ಯಕ್ಷ ಟಿ.ವಿ.ನರಸಿಂಹ ಮೂರ್ತಿ ಮತ್ತು ಸಂಸ್ಕೃತ ಭಾರತಿ ಜಿಲ್ಲಾ ಅಧ್ಯಕ್ಷ ಎನ್.ವಿ. ಶಂಕರನಾರಾಯಣ ವಿತರಿಸಿದರು.
ತರುಣೋದಯ ಸಂಸ್ಕೃತ ಸೇವಾ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ, ಆ.ನಾ.ವಿಜಯೇಂದ್ರ ರಾವ್, ಸ್ಪರ್ಧಾ ನಿರ್ಣಯಕರಾದ ಸೂರ್ಯಜಿದ್ದಾರ್, ಶಿವರಾಮ ಭಟ್ಟ, ಗುರುಮೂರ್ತಿ, ಸುವರ್ಣ ಉಪಸ್ಥಿತರಿದ್ದರು.

Related posts

ಸ್ವಿಸ್ ಬ್ಯಾಂಕ್ ಖಾತೆಗಳ ಹೊಸ ವಿವರ ಪಡೆದ ಭಾರತ.

ಪರಿಷತ್ ಗೆ ಸುಧಾಮ್ ದಾಸ್ ನಾಮನಿರ್ದೇಶನಕ್ಕೆ ನಾಲ್ವರು ಸಚಿವರಿಂದ ವಿರೋಧ: ಹೈಕಮಾಂಡ್ ಗೆ ಪತ್ರ

ವಿಧಾನಪರಿಷತ್ ನೈರುತ್ಯ ಕ್ಷೇತ್ರದ ಚುನಾವಣೆ: ಮತದಾರರ ನೋಂದಣಿ ಅಭಿಯಾನಕ್ಕೆ ಸಚಿವ ಮಧು ಬಂಗಾರಪ್ಪ ಚಾಲನೆ.