ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಬಾನುಲಿ ಕ್ವಿಜ್ ವಿಜೇತರಿಗೆ ಬಹುಮಾನ ವಿತರಣೆ

ಶಿವಮೊಗ್ಗ:  2023ರ ಸ್ವಾತಂತ್ರ್ಯದಿನಾಚರಣೆಯ ಅಂಗವಾಗಿ ರೇಡಿಯೋ ಶಿವಮೊಗ್ಗ ಹಾಗೂ ಪ್ರಜ್ಞಾ ಬುಕ್ ಗ್ಯಾಲರಿಯ ಸಹಯೋಗದಲ್ಲಿ ನಡೆಸಲಾದ ಬಾನುಲಿ ರಸಪ್ರಶ್ನೆ ಸ್ಪರ್ಧೆಯ ವಿಜೇತರಿಗೆ ಸೋಮವಾರ ಬಹುಮಾನ ವಿತರಿಸಲಾಯಿತು.

ವಿಜೇತರಾದ ಪ್ರಿಯಾ ಚೆನ್ನಗಿರಿ, ಮಹೇಶ್ ಮಂಡ್ಯ, ಆರ್.ಬಿ.  ಪ್ರೇಮಾ ಆಲೂರು ಹಾಸನ, ಕೆ.ಎಸ್. ಗಿರೀಶ್ ಪುಣೆ, ಶೋಭಾ ಮಂಜುನಾಥ್ ಶಿವಮೊಗ್ಗ, ವಿಕಾಸ್ ಎಸ್ ಎಂ ಶಿವಮೊಗ್ಗ, ಪ್ರೀತಿ ಚೆನ್ನಗಿರಿ ಬಹುಮಾನ ವಿಜೇತರು. ಶಿವಮೊಗ್ಗದ ಸಹ್ಯಾದ್ರಿ ನಗರದ  ಐ.ಹೆಚ್. ಭಾರತಿ ಇವರಿಗೆ ಬಂಪರ್ ಬಹುಮಾನ ಬಂದಿರುತ್ತದೆ.

ಕಾರ್ಯಕ್ರಮದಲ್ಲಿ ಕಳೆದ ಬಾರಿ ರಸಪ್ರಶ್ನೆಯ  ಬಂಪರ್ ವಿಜೇತೆ ವಿಜಯಾ ಗಣೇಶ್, ನಿಲಯ ಸಂಯೋಜಕ ಗುರುಪ್ರಸಾದ್, ಮಹಾನಗರಪಾಲಿಕೆ ಆರೋಗ್ಯ ನಿರೀಕ್ಷಕ ಕೃಷ್ಣಮೂರ್ತಿ, ಪ್ರಜ್ಞಾ ಬುಕ್ ಗ್ಯಾಲರಿಯ ಮಾಲಕಿ ಸೌಮ್ಯಾ, ಕಾರ್ಯಕ್ರಮ ಸಂಯೋಜಕ ಕೆ.ವಿ. ಅಜೇಯ ಸಿಂಹ, ಆರ್ ಜೆ ಗಳಾದ ಶ್ವೇತಾ, ಮಹಾಲಕ್ಷ್ಮೀ, ಅಶ್ವಿನಿ ಹಾಗೂ ಪ್ರಜ್ಞಾ ಬುಕ್ ಗ್ಯಾಲರಿಯ ಸಿಬ್ಬಂದಿಗಳು ಇದ್ದರು.  

Related posts

ರಾಜ್ಯಕ್ಕೆ ಬರ ಪರಿಹಾರ ನೀಡುವಲ್ಲಿ ಕೇಂದ್ರ ಸರ್ಕಾರ ವಿಫಲ-ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್

ಡಿಸಿಸಿ ಬ್ಯಾಂಕಿನಲ್ಲಿ ನಡೆದಿದೆ ಎನ್ನಲಾದ ಸಿಬ್ಬಂದಿ ನೇಮಕಾತಿ ಅವ್ಯವಹಾರ ಉನ್ನತ ಮಟ್ಟದಲ್ಲಿ ತನಿಖೆಯಾಗಬೇಕು- ಶಾಸಕ ಬೇಳೂರು ಗೋಪಾಲಕೃಷ್ಣ

2050ರ ವೇಳೆಗೆ ಪ್ರತಿ ವರ್ಷ 5 ಪಟ್ಟು ಹೆಚ್ಚು ಸಾವು ಸಂಭವ: ವಿಜ್ಞಾನಿಗಳಿಂದ ಭವಿಷ್ಯ..