ಶಿವಮೊಗ್ಗ: ನಾಡಹಬ್ಬ ದಸರಕ್ಕೆ ಇನ್ನೇನು ಕ್ಷಣಗಣನೆ ಆರಂಭವಾಗಿದೆ, ಇದರ ಪೂರ್ವಭಾವಿಯಾಗಿ ಅನೇಕ ಸಭೆಗಳು ನಡೆಯುತ್ತಿದ್ದು, ಇಂದು ಶಿವಮೊಗ್ಗ ನಗರದ ಶಾಸಕ ಎಸ್.ಎನ್. ಚನ್ನಬಸಪ್ಪ ಬೆಂಗಳೂರಿನ ವಿಧಾನಸೌಧದಲ್ಲಿ ಹಿಂದುಳಿದ ವರ್ಗದ ಕಲ್ಯಾಣ ಮತ್ತು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವ ಶಿವರಾಜ್ ತಂಗಡಗಿಯವರÀ ಕಾರ್ಯದರ್ಶಿರವರನ್ನು ಭೇಟಿಯಾಗಿ ದಸರಾ ಅನುದಾನದ ಬಗ್ಗೆ ಚರ್ಚಿಸಲಾಯಿತು ಮತ್ತು ದಸರಾ ಉತ್ಸವಕ್ಕಾಗಿ ಆನೆಗಳಿಗಾಗಿ ಅನುಮತಿ ಪಡೆಯಲಾಯಿತು.
ಭೇಟಿಯ ಸಮಯದಲ್ಲಿ ಪಾಲಿಕೆಯ ಮಹಾಪೌರರಾದ ಶಿವಕುಮಾರ್, ಉಪಮಹಾಪೌರರಾದ ಲಕ್ಷ್ಮಿ ಶಂಕರ್ ನಾಯಕ್, ಆಡಳಿತ ಪಕ್ಷದ ನಾಯಕ ಜ್ಞಾನೇಶ್ವರ್, ಪಾಲಿಕೆ ಸದಸ್ಯರಾದ ಪ್ರಭಾಕರ್, ವಿಶ್ವಾಸ್, ಅನಿತಾ ರವಿಶಂಕರ್. ವಿಶ್ವನಾಥ್, ಭಾನುಮತಿ, ವಿನೋದ್ ಉಪಸ್ಥಿತರಿದ್ದರು.