ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಉದ್ಯಮದ ಯಶಸ್ಸಿಗೆ ಕುಟುಂಬದ ಸಹಕಾರ ತುಂಬಾ ಅಗತ್ಯ-ವಾಗ್ಮಿ ರಾಯಚೂರು ಕೃಷ್ಣಾಚಾರ್

ಶಿವಮೊಗ್ಗ: ಉದ್ಯಮದ ಯಶಸಿಗೆ ಕುಟುಂಬದ ಸಹಕಾರ ತುಂಬಾ ಅಗತ್ಯ. ಕುಟಂಬದಲ್ಲಿ ಪ್ರೀತಿ, ನಂಬಿಕೆ ಹಾಗೂ ವಿಶ್ವಾಸ ಮುಖ್ಯ ಪ್ರತಿಯೊಬ್ಬ ಸದಸ್ಯರಲ್ಲಿಯ ಒಳ್ಳೆಯ ಭಾವನೆ ಇರಬೇಕು ಎಂದು ವಿದ್ವಾಂಸ, ವಾಗ್ಮಿ ರಾಯಚೂರು ಕೃಷ್ಣಾಚಾರ್ ಹೇಳಿದರು.

ನಗರದ ಮಥುರಾ ಪಾರಾಡೈಸ್ ನಲ್ಲಿ ಹೊಟೇಲ್ ಮಾಲೀಕರ ಸಂಘದಿಂದ ಆಯೋಜಿಸಿದ್ದ ಹೊಟೇಲ್ ಉದ್ಯಮದ ಕುರಿತು ಚರ್ಚೆ ಕಾರ್ಯಕ್ರಮದಲ್ಲಿ ಉದ್ಯಮ ಹಾಗೂ ಕುಟುಂಬದ ಸಮತೋಲನ ವಿಷಯ ಬಗ್ಗೆ ಮಾತನಾಡಿದರು.

ಯಾಂತ್ರಿಕ ಯುಗದಲ್ಲಿ ಕುಟುಂಬದವರೊಂದಿಗೆ ಮಕ್ಕಳೊಂದಿಗೆ ಸರಿಯಾಗಿ ಸಮಯ ಕೊಡಲು ಸಾಧ್ಯ ಆಗುತ್ತಿಲ್ಲ. ಅವರಿಗೆ ಪ್ರೀತಿ ಭಾವದಿಂದ ಮಾತನಾಡಿಸಲು, ಕುಟಂಬದ ಸದಸ್ಯರ ಕಷ್ಟ ಸುಖ ಹಂಚಿಕೊಳ್ಳಲು ಸಮಯ ಆಗುತ್ತಿಲ್ಲ. ಎಷ್ಟೋ ಕುಟುಂಬಗಳು ಸಮಸ್ಯೆ ಎದುರಿಸುತ್ತಿವೆ. ಇಂತಹ ಕಾರ್ಯಕ್ರಮಗಳು ಆತ್ಮವಿಶ್ವಾಸ ಬಾಂಧವ್ಯ ವೃದ್ಧಿಸುವಲ್ಲಿ ಸಹಕಾರಿಯಾಗುತ್ತವೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಯೋಗ ಶಿಕ್ಷಕ ಬಾ.ಸು.ಅರವಿಂದ ಅವರು ಯೋಗ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ಯೋಗದ ಕುರಿತು ಮಾತನಾಡಿ, ಯೋಗವು ನಮ್ಮ ಜೀವನದ ಅವಿಭಾಜ್ಯ ಅಂಗವಾಗಬೇಕು. ಒತ್ತಡ ನಿವಾರಣೆಗೆ ಯೋಗದಲ್ಲಿ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ. ಪ್ರಾಣಾಯಾಮ ನಮ್ಮ ಮಾನಸಿಕ ಒತ್‌ತಡ ಕಡಿಮೆ ಮಾಡುವುದರ ಜತೆಯಲ್ಲಿ ದೇಹ ಹಾಗೂ ಮನಸ್ಸನ್ನು ಸದೃಢವಾಗಿಸುತ್ತದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹೊಟೇಲ್ ಮಾಲೀಕರ ಸಂಘದ ಅಧ್ಯಕ್ಷ ಯು.ಎಂ.ಶಂಕರ ನಾರಾಯಣ ಹೊಳ್ಳ ಮಾತನಾಡಿ, ವೃತ್ತಿ ಜತೆಯಲ್ಲಿ ಕುಟುಂಬದ ಜತೆಯಲ್ಲಿ ಸಮಯ ಕಳೆಯುವುದು ಅತ್ಯಂತ ಮುಖ್ಯ. ಇಂತಹ ಕಾರ್ಯಕ್ರಮಗಳು ಇನ್ನೂ ಹೆಚ್ಚು ನಡೆಯಬೇಕು ಎಂದು ತಿಳಿಸಿದರು.

ವಿಜೇಂದ್ರರಾವ್ ಮತ್ತು ಸಂಗಡಿಗರು ಅವರು ಮನೋರಂಜನಾ ಕಾರ್ಯಕ್ರಮ ನಡೆಸಿಕೊಟ್ಟರು. ಹೊಟೇಲ್ ಮಾಲೀಕರ ಸಂಘದ ಕಾರ್ಯದರ್ಶಿ ಎನ್.ಗೋಪಿನಾಥ್, ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹ ಕಾರ್ಯದರ್ಶಿ ಜಿ.ವಿಜಯ್‌ಕುಮಾರ್, ಲಕ್ಷ್ಮೀದೇವಿ ಗೋಪಿನಾಥ್, ಹೊಟೇಲ್ ಮಾಲೀಕರ ಸಂಘದ ಸದಸ್ಯರು, ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.

Related posts

ರಾಜ್ಯಸಭೆಯಲ್ಲಿ ಶೇ 12 ರಷ್ಟು ಸದಸ್ಯರು ಕೋಟ್ಯಾಧಿಪತಿಗಳು.

ನಾಡು, ನುಡಿ, ಜಲದ ವಿಷಯದಲ್ಲಿ ಜೆಡಿಎಸ್ ಎಂದೂ ರಾಜಿ ಮಾಡಿಕೊಂಡಿಲ್ಲ-ವೈ.ಎಸ್.ವಿ.ದತ್ತಾ

ಎಲ್ಲೆಂದರಲ್ಲಿ ಅಪರಿಚಿತರಿಗೆ ‘ಆಧಾರ್, ಪ್ಯಾನ್ ಕಾರ್ಡ್’ ಕೊಡುವ ಮುನ್ನ ಇರಲಿ ಎಚ್ಚರ.!