ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಅ.18(ನಾಳೆ) ಮಲ್ನಾಡ್ ಶೈರೆ ರೆಸಾರ್ಟ್‍ನ ಉದ್ಘಾಟನಾ ಸಮಾರಂಭ.

ಶಿವಮೊಗ್ಗ: ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಕೇಂದ್ರೀಯ ವಿದ್ಯಾಲಯದ ಪಕ್ಕದಲ್ಲಿರುವ ಡಾ, ಮಲ್ಲೇಶ್ ಕನ್ವೆನ್ಷನ್ ಸೆಂಟರ್ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಮಲ್ನಾಡ್ ಶೈರೆ ರೆಸಾರ್ಟ್‍ನ ಉದ್ಘಾಟನಾ ಸಮಾರಂಭ ಅ.18ರ ಬೆಳಿಗ್ಗೆ 9-30ಕ್ಕೆ ನಡೆಯಲಿದೆ ಎಂದು ರೆಸಾರ್ಟ್‍ನ ಮಾಲೀಕ ಡಾ. ಸ್ವರೂಪ್ ಮಲ್ಲೇಶ್ ತಿಳಿಸಿದರು.
ಅವರು ಇಂದು ರೆಸಾರ್ಟ್‍ನ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಾನೂನು ಮತ್ತು ಪ್ರವಾಸೋದ್ಯಮ ಇಲಾಖೆ ಸಚಿವ ಹೆಚ್.ಕೆ, ಪಾಟೀಲ್ ರೆಸಾರ್ಟ್ ಉದ್ಘಾಟಿಸಲಿದ್ದಾರೆ ಎಂದರು.
ಮುಖ್ಯ ಅತಿಥಿಯಾಗಿ ಸಕ್ಕರೆ ಖಾತೆ ಹಾಗೂ ಎಪಿಎಂಸಿ ಸಚಿವ ಶಿವಾನಂದ ಪಾಟೀಲ್, ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಮಾಜಿಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಸಂಸದ ಬಿ.ವೈ. ರಾಘವೇಂದ್ರ ಹಾಗೂ ಜಿಲ್ಲೆಯ ಶಾಸಕರು, ಮಾಜಿ ಶಾಸಕರು ಭಾಗವಹಿಸಲಿದ್ದಾರೆ ಎಂದರು.
ನೂತನ ರೆಸಾರ್ಟ್‍ನಲ್ಲಿ ಅತ್ಯಾಧುನಿಕ 66 ಕೊಠಡಿಗಳಿದ್ದು, ಮೂರು ಸ್ವಿಮ್ಮಿಂಗ್ ಪೂಲ್, ಬ್ಯಾಂಕ್ವೆಟ್ ಹಾಲ್, ಕ್ಲಬ್ ಹೌಸ್, ಸ್ಪಾ, ಇಂಡೋರ್ ಗೇಮ್ಸ್, ಔಟ್‍ಡೋರ್ ಚಿಲ್ಡನ್ಸ್ ಪ್ಲೇ ಏರಿಯಾ, ಯೂನಿಸೆಕ್ಸ್ ಸಲೂನ್, ರೆಸ್ಟೋರೆಂಟ್, ಬೋರ್ಡ್ ರೂಂ, ಜಿಮ್ ಸೇರಿದಂತೆ ಹಲವಾರು ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡಿದೆ ಎಂದ ಅವರು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದು ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ಡಾ. ಶಕುಂತಲಾ ಮಲ್ಲೇಶ್, ಕರಿಬಸವರಾಜ್ ಬೆನ್ನೂರು, ರಾಜೇಶ್ ರಾವತ್, ರಾಮಚಂದ್ರಪ್ಪ ರೆಡ್ಡಿ, ಶ್ರೇಯಾ ಮಲ್ಲೇಶ್ ಇದ್ದರು.

Related posts

ಅಜ್ಜಿ ಇಂದಿರಾ ಗಾಂಧಿಯಂತೆ ಕಾಣುವುದರಿಂದ ನನ್ನನ್ನು ನೋಡಲು ಜನ ಬರುತ್ತಿದ್ದಾರೆ: ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ

ಡಿವಿಎಸ್‌ನಲ್ಲಿ ಗಮನ ಸೆಳೆದ ವಸ್ತು ಪ್ರದರ್ಶನ

ರಾಜ್ಯಾದ್ಯಂತ ಧಾರಾಕಾರ ಮಳೆ ಸಾಧ್ಯತೆ- ಹವಮಾನ ಇಲಾಖೆ ಮುನ್ಸೂಚನೆ.