ಕನ್ನಡಿಗರ ಪ್ರಜಾನುಡಿ
ದೇಶಪ್ರಧಾನ ಸುದ್ದಿಮುಖ್ಯಾಂಶಗಳುರಾಜಕೀಯರಾಜ್ಯ

ಈಗ ಬಿಜೆಪಿ ಶಾಸಕರು ಕೂಡ ನಮಸ್ಕಾರ ಸ್ಪೀಕರ್ ಸಾಬ್ ಎನ್ನುವಂತಾಗಿದೆ-  ಸಚಿವ ಜಮೀರ್ ಅಹ್ಮದ್ ಖಾನ್ .

ಹೈದರಾಬಾದ್: ಬಿಜೆಪಿಯವರು ಮುಸ್ಲೀಂರನ್ನ ದ್ವೇಷಿಸುತ್ತಿದ್ದರು. ಈಗ ಬಿಜೆಪಿ ಶಾಸಕರು ಕೂಡ ನಮಸ್ಕಾರ ಸ್ಪೀಕರ್ ಸಾಬ್ ಎನ್ನುವಂತಾಗಿದೆ. ಹೀಗೆ ಮಾಡಿದ್ದು ಕಾಂಗ್ರೆಸ್ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.

ತೆಲಂಗಾಣದಲ್ಲಿ ಅಬ್ಬರದ ಭಾಷಣ ಮಾಡಿರುವ ಸಚಿವ ಜಮೀರ್ ಅಹ್ಮದ್ ಖಾನ್,  ಕರ್ನಾಟಕದಲ್ಲಿ ಕಾಂಗ್ರೆಸ್​ನಿಂದ 9 ಮುಸ್ಲಿಮರು ಗೆದ್ದಿದ್ದಾರೆ. 9 ಮುಸ್ಲಿಂ ಶಾಸಕರ ಪೈಕಿ 5 ಶಾಸಕರಿಗೆ ಅಧಿಕಾರ ನೀಡಿದೆ. ನನ್ನನ್ನು ಸಚಿವನಾಗಿ ಮಾಡಿದೆ. ಅಲ್ಲದೇ ರಹೀಂ ಖಾನ್​​ ಸಹ ಮಂತ್ರಿ ಆಗಿದ್ದಾರೆ. ಸಲೀಂ ಅಹಮದ್​​​ ಅವರನ್ನು​​​ ಮುಖ್ಯ ಸಚೇತಕರಾಗಿ ಮಾಡಲಾಗಿದೆ. ನಜೀರ್ ಅಹಮದ್​​​​​​​​​ ಸಿಎಂ ರಾಜಕೀಯ ಕಾರ್ಯದರ್ಶಿಯಾಗಿದ್ದಾರೆ.

ಇನ್ನು ಕರ್ನಾಟಕ ರಾಜಕೀಯ ಇತಿಹಾಸದಲ್ಲಿ ಯಾವ ಮುಸ್ಲಿಂ ಸ್ಪೀಕರ್ ಆಗಿರಲಿಲ್ಲ. ಯು.ಟಿ.ಖಾದರ್​ ಅವರನ್ನು ವಿಧಾನಸಭಾ ಸ್ಪೀಕರ್​​ ಆಗಿ ನೇಮಿಸಲಾಗಿದೆ. ಈಗ ಬಿಜೆಪಿ ಶಾಸಕರು ಕೂಡ ನಮಸ್ಕಾರ ಸ್ಪೀಕರ್ ಸಾಬ್ ಎನ್ನುತ್ತಾರೆ. ಹೀಗೆ ಮಾಡಿದ್ದು ಕಾಂಗ್ರೆಸ್ ಎಂದು ಜಮೀರ್ ಹೇಳಿದ್ದಾರೆ.

Related posts

ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ: ಪಕ್ಷಬೇಧ ಮರೆತು ಶಿವಮೊಗ್ಗದ ಶಾಂತಿಗಾಗಿ ಸಹಕರಿಸಬೇಕು-ಸಚಿವ ಮಧು ಬಂಗಾರಪ್ಪ

ಪಿಹೆಚ್‍ಡಿ ಪಡೆದ ಆರ್.ಎಸ್.ವರುಣ್‍ಕುಮಾರ್ ಗೌರವ ಸನ್ಮಾನ.

ಸ್ವಿಗ್ಗಿ ಮತ್ತು ಜೊಮ್ಯಾಟೊಗಳನ್ನು ಬಿಟ್ಟು ಮಕ್ಕಳಿಗೆ ತಾಯಂದಿರ ಕೈ ರುಚಿ ತೋರಿಸಿ- ಹೈಕೋರ್ಟ್