ಶಿವಮೊಗ್ಗ: ಪಾಲಿಕೆ ಅನುದಾನದಲ್ಲಿ ವಿನೋಬನಗರ ಮೂರನೇ ತಿರುವಿನಲ್ಲಿ ರುದ್ರರೂಪಿಣಿ ಸ್ನೇಹಸಂಘದ ಸಮುದಾಯ ಭವನ ಕಾಮಗಾರಿಗೆ ಶಾಸಕ ಎಸ್.ಎನ್. ಚನ್ನಬಸಪ್ಪ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯ ರಾಹುಲ್ ಬಿದರೆ. ರುದ್ರ ರೂಪಿಣಿ ಸ್ನೇಹ ಸಂಘದ ಅಧ್ಯಕ್ಷ ಕೆ.ಎನ್. ಮಂಜುನಾಥ್. ಉಪಾಧ್ಯಕ್ಷ ವಿನಯ್ ದತ್ತಾತ್ರಿ, ಕಾರ್ಯದರ್ಶಿ ಶ್ರೀಕಾಂತ್, ಖಜಾಂಜಿ ಗಣೇಶ್, ಸುಧೀರ್ ನಾಯಕ್ ಹಾಗೂ ಸಂಘದ ನಿರ್ದೇಶಕರು ಮತ್ತು ಸದಸ್ಯರು ಉಪಸ್ಥಿತರಿದ್ದರು.