ಕನ್ನಡಿಗರ ಪ್ರಜಾನುಡಿ
ದೇಶಪ್ರಧಾನ ಸುದ್ದಿಮುಖ್ಯಾಂಶಗಳುಸಿನಿಮಾ

ಮಿರಾಕಲ್ ಸಂಭವಿಸುತ್ತವೆ, ನಾನು ಲೆಜೆಂಡ್ ಆಗುವುದಕ್ಕೆ ಅದೇ ಕಾರಣ ಎಂದ್ರು ನಟ ರಜನಿಕಾಂತ್

ಚೆನ್ನೈ: ಮಿರಾಕಲ್  ಸಂಭವಿಸುತ್ತವೆ, ನಾನು ಲೆಜೆಂಡ್ ಆಗುವುದಕ್ಕೆ ಅದೇ ಕಾರಣ ಎಂದು ನಟ ಸೂಪರ್ ಸ್ಟಾರ್ ರಜನಿಕಾಂತ್ ಹೇಳಿದ್ದಾರೆ.

ವೇದಿಕೆಯೊಂದರಲ್ಲಿ ಮಾತನಾಡುತ್ತ ಈ ವಿಚಾರ ಹಂಚಿಕೊಂಡುರುವ ರಜನಿಕಾಂತ್,  ಪವಾಡಗಳು ಸಂಭವಿಸುತ್ತದೆ’ ನಾನು ಲೆಜೆಂಡ್ ಆಗುವುದಕ್ಕೆ ಅದೇ ಕಾರಣ ಎಂದು ತಮ್ಮನ್ನೇ ತಾಜಾ ಉದಾಹರಣೆಯನ್ನು ಕೊಟ್ಟಿದ್ದಾರೆ.   ದೊಡ್ಡ ಸಮಾರಂಭದಲ್ಲಿ, ತಮಗೆ ಅವಾರ್ಡ್ ಬಂದ ಸಂದರ್ಭದಲ್ಲಿ ಮಾತನಾಡುತ್ತಿದ್ದ ನಟ ರಜನಿಕಾಂತ್, ಮಿರಾಕಲ್ಗಳು ಸಂಭವಿಸುತ್ತವೆ, ಸಾಮಾನ್ಯ ಬಸ್ ಕಂಡಕ್ಟರ್ ಒಬ್ಬ ಇವತ್ತು ಲೆಜೆಂಡ್ ಗಳ ಸಾಲಿಗೆ ಸೇರಿಕೊಂಡಿರುವುದು ಪವಾಡವೇ ಆಗಿದೆ’ ಎಂದಿದ್ದಾರೆ.

ನನ್ನ ಯಶಸ್ಸನ್ನು, ನನಗೆ ಬಂದ ಬಹುಮಾನಗಳನ್ನು ನಾನು ನನ್ನ ಸಹೋದರ, ಅಪ್ಪ-ಅಮ್ಮರಿಗೆ ಹಾಗೂ ತಮಿಳು ಜನತೆಗೆ ಡೆಡಿಕೇಟ್ ಮಾಡುತ್ತೇನೆ. ತಮಿಳು ಜನರ ಪ್ರೀತಿ, ವಿಶ್ವಾಸದ ಬೆಂಬಲ ಇಲ್ಲದಿದ್ದರೆ ನಾನು ಖಂಡಿತವಾಗಿ ಈ ಹಂತಕ್ಕೆ ಬೆಳೆಯಲು ಸಾಧ್ಯವೇ ಇರಲಿಲ್ಲ. ನಾನು ಇಂದು ಇಂತಹ ವೇದಿಕೆಗಳಲ್ಲಿ ನಿಂತಿದ್ದೇನೆ, ಮಾತನಾಡುತ್ತಿದ್ದೇನೆ ಎಂದರೆ ಅದು ಅವರೆಲ್ಲರ ಬೆಂಬಲದಿಂದಲೇ ಸಾಧ್ಯವಾಗಿರುವುದು’ ಎಂದು ನಟ ರಜನಿಕಾಂತ್ ಹೇಳಿದ್ದಾರೆ.

ರಜನಿಕಾಂತ್ ಪವಾಡ ಸಂಭವಿಸುತ್ತದೆ ಎಂದಿದ್ದಕ್ಕೆ, ಹಲವರು ‘ಹೌದು, ಸ್ವತಃ ರಜನಿಕಾಂತ್ ಒಂದು ಪವಾಡ’ ಎನ್ನುತ್ತಿದ್ದಾರೆ. ನಟ ರಜನಿಕಾಂತ್ ಸಾಧನೆ ಹಾಗೂ ವ್ಯಕ್ತಿತ್ವವನ್ನು ನೋಡಿದರೆ ಅವರನ್ನು ಪವಾಡ ಎನ್ನಲೇಬೇಕು.

 

Related posts

ದೇಶ ಸ್ವಾತಂತ್ರ್ಯ ಗಳಿಸಲು ಅನೇಕ ಸ್ವಾತಂತ್ರ‍್ಯ ಹೋರಾಟಗಾರರ ತ್ಯಾಗ ಬಲಿದಾನ ಎಂದೆಂದೂ ಅವೀಸ್ಮರಣೀಯ-ಜ್ಯೋತಿಪ್ರಕಾಶ್

ಕ್ರೀಡೆಯಿಂದ ದೇಹದ ಆರೋಗ್ಯದ ಜೊತೆ ದೇಶದ ಆರೋಗ್ಯವೂ ಉತ್ತಮವಾಗುತ್ತದೆ-ಶ್ರೀ ಪ್ರಸನ್ನನಾಥ ಸ್ವಾಮೀಜಿ

ಲೋಕಸಭೆ ಚುನಾವಣೆ ಬಳಿಕ ಕಾಂಗ್ರೆಸ್ ಸರ್ಕಾರ ಇರಲ್ಲ-ಕೆ.ಎಸ್. ಈಶ್ವರಪ್ಪ