ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ತಮಿಳು ಚಿತ್ರ ಪ್ರದರ್ಶನ ಸ್ಥಗಿತಕ್ಕೆ ಕನ್ನಡ ಕಾರ್ಮಿಕರ ರಕ್ಷಣಾ ವೇದಿಕೆ ಆಗ್ರಹ.

ಶಿವಮೊಗ್ಗ: ವೀರಭದ್ರೇಶ್ವರ ಚಿತ್ರಮಂದಿರಲ್ಲಿ ತಮಿಳು ಚಿತ್ರ ಪ್ರದರ್ಶನ ವಿರೋಧಿಸಿ ಕೂಡಲೇ ಚಿತ್ರ ಪ್ರದರ್ಶನ ಸ್ಥಗಿತಕ್ಕೆ ಆಗ್ರಹಿಸಿ ಕನ್ನಡ ಕಾರ್ಮಿಕರ ರಕ್ಷಣಾ ವೇದಿಕೆ ಚಿತ್ರಮಂದಿರದ ಮಾಲೀಕರಿಗೆ ಮನವಿ ಮಾಡಿದೆ.
ಇಡೀ ನಾಡಿನಲ್ಲಿ ಕಾವೇರಿ ಗಲಾಟೆ ಹಬ್ಬುತ್ತಿದೆ. ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಬಿಡುತ್ತಿರುವುದನ್ನು ವಿರೋಧಿಸಿ ಹೋರಾಟಗಳು ನಡೆಯುತ್ತಿವೆ. ಈ ಹಿನ್ನಲೆಯಲ್ಲಿ ಕಾವೇರಿಯಿಂದ ನೀರು ಹರಿಸುವುದನ್ನು ನಿಲ್ಲಿಸುವತನಕ ನಗರದಲ್ಲಿ ತಮಿಳು ಚಲನಚಿತ್ರ ಪ್ರದರ್ಶಿಸಬಾರದು. ಕೂಡಲೇ ಚಿತ್ರ ಪ್ರದರ್ಶನ ಸ್ಥಗಿತಗೊಳಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಮನವಿದಾರರು ತಮಿಳು ಚಿತ್ರದ ಪೋಸ್ಟರ್ ಗಳನ್ನು ಹರಿದು ಹಾಕಿದರು.
ಈ ಸಂದರ್ಭದಲ್ಲಿ ವಾಟಾಳ್ ಮಂಜುನಾಥ್, ಪ್ರಶಾಂತ್, ನಿತಿನ್ ರೆಡ್ಡಿ, ಸತೀಶ್, ಸಂತೋಷ್ ಮೊದಲಾದವರಿದ್ದರು.

Related posts

ಈದ್ ಮಿಲಾದ್ ರ್ಯಾಲಿ ವೇಳೆ ಕಲ್ಲು ತೂರಾಟ: ಶಿವಮೊಗ್ಗ ನಗರದಲ್ಲಿ 144 ಸೆಕ್ಷನ್ ಜಾರಿ.

ಉದ್ಯೋಗಾಕಾಂಕ್ಷಿಗಳಿಗೆ ಸಿಹಿಸುದ್ದಿ: 15,078 ಹುದ್ದೆ ಭರ್ತಿಗೆ ಪತ್ರ ಬರೆದ ಸಚಿವ ಪ್ರಿಯಾಂಕ್ ಖರ್ಗೆ

ಮಹಿಳಾ ಮೀಸಲಾತಿ ಯೋಜನೆ ಮಸೂದೆ ಮಂಡನೆ: ಐತಿಹಾಸಿಕ ತೀರ್ಮಾನ- ಕೆಎಸ್ ಈಶ್ವರಪ್ಪ.