ಶಿವಮೊಗ್ಗ: ಜೆಸಿಐ ಶಿವಮೊಗ್ಗದ ಸಹ ಸಂಚಾಲಕಿ ದಿವ್ಯ ಪ್ರವೀಣ್ ಅವರಿಗೆ ಪತಂಜಲಿ ಯೋಗ ಮತ್ತು ಪ್ರಕೃತಿ ಸಂಸ್ಥೆಯು `ಕನಕಶ್ರೀ ಚೇತನ ಪತಂಜಲಿ ರತ್ನ’ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಿದೆ.
ಇತ್ತೀಚೆಗೆ ಹೊಸಮನೆ ಮೂರನೇ ತಿರುವಿನಲ್ಲಿರುವ ಪತಂಜಲಿ ಯೋಗ ಕಲಾಮಂದಿರದಲ್ಲಿ ನಡೆದ ಸಮಾರಂಭದಲ್ಲಿ ಸಂಸ್ಥೆಯ ಪದಾಧಿಕಾರಿಗಳು ದಿವ್ಯ ಪ್ರವೀಣ್ ಅವರನ್ನು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಸಮಿತಿಯ ಕಾರ್ಯದರ್ಶಿ ಜೆ. ನಾಗರಾಜ್, ಪ್ರಮುಖರಾದ ಎ.ಹೆಚ್. ಶ್ಯಾಮಲಾ, ಜಿ.ಇ. ಶಿವಾನಂದಪ್ಪ, ಪರಿಸರ ಸಿ. ರಮೇಶ್, ಟಿ.ಎನ್. ಶಶಿಧರ್ ಸೇರಿದಂತೆ ಹಲವರಿದ್ದರು.