ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುರಾಜಕೀಯಶಿವಮೊಗ್ಗ

ರಾಜಕಾರಣ ಎಂಬ ಆಗಸದಲ್ಲಿ ದಿ. ಬಂಗಾರಪ್ಪ ಮರೆಯಲಾಗದ ಧ್ರುವತಾರೆ-ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಬಣ್ಣನೆ

ಶಿವಮೊಗ್ಗ: ರಾಜಕಾರಣ ಎಂಬ ಆಗಸದಲ್ಲಿ ದಿ. ಬಂಗಾರಪ್ಪ ಮರೆಯಲಾಗದ ಧ್ರುವತಾರೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಬಣ್ಣಿಸಿದರು.
ಅವರು ಇಂದು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಿದ್ದ ದಿ. ಬಂಗಾರಪ್ಪನವರ 90ನೇ ಹುಟ್ಟುಹಬ್ಬದ ಅಂಗವಾಗಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಬಂಗಾರಪ್ಪನವರು ಹಿಂದುಳಿದ ವರ್ಗದವರ ನೇತಾರರಾಗಿದ್ದರು. ಬಡವರ ಪಾಲಿನ ಆಶ್ರಯದಾತ. ಮುಖ್ಯಮಂತ್ರಿಯಾಗಿದ್ದಾಗ ಹಲವು ಜನಪ್ರಿಯ ಯೋಜನೆಗಳನ್ನು ಜಾರಿಗೆ ತಂದು ಶೋಷಿತರ ಪರವಾಗಿ ನಿಂತವರು. ನಿಷ್ಠೂರವಾದಿಯಾಗಿದ್ದರು. ಇಷ್ಟವಾಗುತ್ತಿದ್ದರು. ಹಲವು ಪಕ್ಷಗಳಲ್ಲಿ ಕಾಣಿಸಿಕೊಂಡರೂ ಕಾಂಗ್ರೆಸ್ ಅವರ ತವರುಮನೆಯಾಗಿತ್ತು. ಕೇವಲ ರಾಜಕಾರಣಿಯಾಗಿರದೆ ಸಾಂಸ್ಕøತಿಕ ರಾಯಭಾರಿಯೂ ಅವರಾಗಿದ್ದರು. ಅವರ ಆದರ್ಶಗಳನ್ನು ಪಾಲಿಸುವ ಮೂಲಕ ಅವರಿಗೆ ಗೌರವ ಸಲ್ಲಿಸಬೇಕು ಎಂದರು.
ನಾಲ್ಕು ದಶಕಗಳ ಕಾಲ ರಾಜಕಾರಣದಲ್ಲಿದ್ದ ಅವರು, ಶಿವಮೊಗ್ಗದ ಅಭಿವೃದ್ಧಿಗಾಗಿ ಶ್ರಮಿಸಿದವರು. ಗ್ರಾಮೀಣ ಕೃಪಾಂಕ ನೀಡುವ ಮೂಲಕ ಗಮನಸೆಳೆದವರು. ಕಾಂಗ್ರೆಸ್ ಕಾರ್ಯಕರ್ತರು ಸರ್ಕಾರದ ಯೋಜನೆಯನ್ನು ಜನರಿಗೆ ಮುಟ್ಟಿಸುವ ಮೂಲಕ ಅವರ ಆಶಯಗಳನ್ನು ಈಡೇರಿಸಬೇಕು ಎಂದರು.
ಈ ಸಂದರ್ಭದಲ್ಲಿ ಪ್ರಮುಖರಾದ ಚಂದ್ರಭೂಪಾಲ್, ಕಲೀಂಪಾಶಾ, ಇಕ್ಕೇರಿ ರಮೇಶ್, ಗಾಡಿಕೊಪ್ಪ ರಾಜಣ್ಣ, ಮೋಹನ್, ಚಂದ್ರಶೇಖರ್, ಬಲ್ಕಿಷ್‍ಬಾನು, ವಿಜಯಲಕ್ಷ್ಮಿ ಪಾಟೀಲ್, ಸ್ಟೆಲ್ಲಾ ಮಾರ್ಟಿನ್, ನಾಜೀಮಾ, ಪ್ರೇಮಾ ಎನ್. ಶೆಟ್ಟಿ, ಗಂಗಾಧರ್, ಶಮೀಮ್ ಬಾನು ಸಂಧ್ಯಾ, ಶೋಭಾ, ಕವಿತಾ, ಸುವರ್ಣ ನಾಗರಾಜ್, ಚಂದ್ರಕಲಾ, ಮಧು ಸೇರಿದಂತೆ ಹಲವರಿದ್ದರು.

Related posts

ಜನಪದದ ಮೂಲ ಸ್ವರೂಪವನ್ನು ಅರ್ಥೈಸಿಕೊಳ್ಳಿ : ಡಿ.ಮಂಜುನಾಥ

ಗಾಂಧಿ ಬಸಪ್ಪ ಮತ್ತು ಹಳದಮ್ಮ ಪ್ರತಿಷ್ಠಾನದ ವತಿಯಿಂದ ಸ್ವಾತಂತ್ರ್ಯ ದಿನಾಚಾರಣೆ.

ಶಾಂತಿ, ಕ್ರಾಂತಿ ಮತ್ತು ಅಧ್ಯಾತ್ಮದ  ಮೂಲಕ ನಮ್ಮ ಹಿರಿಯರು ದೇಶಕ್ಕೆ ಸ್ವಾತಂತ್ರ ತಂದು ಕೊಟ್ಟಿದ್ದಾರೆ-ನಾಡೋಜ ಡಾ. ಮಹೇಶ ಜೋಶಿ ಅಭಿಪ್ರಾಯ