ಕನ್ನಡಿಗರ ಪ್ರಜಾನುಡಿ
ಪ್ರಧಾನ ಸುದ್ದಿಮುಖ್ಯಾಂಶಗಳುರಾಜಕೀಯರಾಜ್ಯ

ನಾನು ಕೂಡ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ ಆಗಿದ್ದೆ: ನನ್ನ ಪ್ರಯತ್ನ ಫಲಿಸಿಲ್ಲ – ಮಾಜಿ ಸಚಿವ ಶ್ರೀರಾಮುಲು

ಗದಗ:  ವಿಧಾನಸಭೆ ಚುನಾವಣೆ  ನಡೆದು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಐದು ತಿಂಗಳಾದರೂ ಸಹ ಬಿಜೆಪಿ ಹೈಕಮಾಂಡ್ ಇನ್ನೂ ವಿಪಕ್ಷ ನಾಯಕರನ್ನ ಆಯ್ಕೆ ಮಾಡಿಲ್ಲ. ಜೊತೆಗೆ ಬಿಜೆಪಿ ರಾಜ್ಯಾಧ್ಯಕ್ಷರನ್ನೂ ಬದಲಾವಣೆ ಮಾಡಿಲ್ಲ. ಈ ಮಧ್ಯೆ ಮಾಜಿ ಸಚಿವ ಶ್ರೀರಾಮುಲು ನಾನು ಕೂಡ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ ಆಗಿದ್ದೆ ಎಂದಿದ್ದಾರೆ.

ಈ ಕುರಿತು ಮಾತನಾಡಿದ ಶ್ರೀರಾಮುಲು, ನಾನು ಕೂಡ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ ಆಗಿದ್ದೆ. ಆದರೆ ನನ್ನ ಪ್ರಯತ್ನ ಫಲಿಸಿಲ್ಲ. ನಾನು ಪ್ರಯತ್ನ ಮಾಡಿದ್ದೆ, ಆದ್ರೆ ಆಗಲ್ಲ ಅಂತಾ ಗೊತ್ತಾಯಿತು. ಚುನಾವಣೆಯಲ್ಲಿ ಸೋತಿದ್ದೀನಿ, ಅದಕ್ಕೆ ಪಕ್ಷದ ಕೆಲಸ ಮಾಡುತ್ತೇನೆ.  ಖಾಲಿ ಇದ್ದೇನಲ್ಲಾ, ಪಕ್ಷದ ಕಾರ್ಯಕರ್ತನಾಗಿ ದುಡಿಯುತ್ತೇನೆ ಎಂದರು.

Related posts

ಜಾತಿ ಗಣತಿ ಬಗ್ಗೆ ಬಹಳಷ್ಟು ಅಪಪ್ರಚಾರ: ಜನರ ಅಭಿಪ್ರಾಯ ಪರಿಗಣಿಸಿ ತೀರ್ಮಾನ-ಸಚಿವ ಕೆ.ಎನ್ ರಾಜಣ್ಣ

ಸೆ.16ರಂದು ಕಾಗೋಡು ತಿಮ್ಮಪ್ಪನವರ ಅಭಿನಂದನಾ ಸಮರ್ಪಣಾ ಸಮಾರಂಭ.

ರಾಜ್ಯದ ಎಲ್ಲಾ ನಗರದಲ್ಲಿ ಶೌಚಾಲಯ; ಹೈಕೋರ್ಟ್ ಗೆ ಸರ್ಕಾರ ಅಫಿಡವಿಟ್ ಸಲ್ಲಿಕೆ…