ಕನ್ನಡಿಗರ ಪ್ರಜಾನುಡಿ
ಪ್ರಧಾನ ಸುದ್ದಿಮುಖ್ಯಾಂಶಗಳುರಾಜ್ಯ

ವಾಹನ ಸವಾರರಿಗೆ ಗುಡ್ ನ್ಯೂಸ್: ಇನ್ಮುಂದೆ ಡಿಎಲ್ ಮತ್ತು ಆರ್ ಸಿಗೆ ಅತ್ಯಾಧುನಿಕ ಸ್ಮಾರ್ಟ್ ಕಾರ್ಡ್ಸ್ ವಿತರಣೆ.

ಬೆಂಗಳೂರು: ಅಧುನಿಕ ಜಗತ್ತಿನಲ್ಲಿ ವೈಜ್ಞಾನಿಕತೆ ಮತ್ತು ತಾಂತ್ರಿಕತೆ ಬೆಳೆದಂತೆ ಅನೇಕ ಬದಲಾವಣೆಗಳು ಕಂಡು ಬರುತ್ತಿವೆ. ಈ ಮಧ್ಯೆ  ರಾಜ್ಯ ಸಾರಿಗೆ ಇಲಾಖೆ, ಡ್ರೈವಿಂಗ್ ಲೈಸೆನ್ಸ್ (ಡಿಎಲ್) ಮತ್ತು ರಿಜಿಸ್ಟ್ರೇಷನ್ ಸರ್ಟಿಫಿಕೇಟ್ (ಆರ್ಸಿ)ಗೆ ಅತ್ಯಾಧುನಿಕ ಸ್ಮಾರ್ಟ್ ಕಾರ್ಡ್ಸ್ ವಿತರಣೆ ಮಾಡಲಿದೆ.

ಡಿಎಲ್ ಮತ್ತುಆರ್ ಸಿ ಚಿಪ್ ಗಳು ಮತ್ತು ಕ್ಯೂಆರ್ ಕೋಡ್ ಗಳು ಒಳಗೊಂಡ ಅತ್ಯಾಧುನಿಕ ಸೌಲಭ್ಯಗಳುಳ್ಳ ಸ್ಮಾರ್ಟ್ ಕಾರ್ಡ್ಗಳನ್ನು ಪರಿಚಯಿಸಲು ತಯಾರಿ ನಡೆಸುತ್ತಿದೆ. ಪ್ರಸ್ತುತ ಮಾರಾಟಗಾರರು ಕಳೆದ 15 ವರ್ಷಗಳಿಂದ ಚಿಪ್ ಗಳನ್ನು ಒಳಗೊಂಡ ಸ್ಮಾರ್ಟ್ ಕಾರ್ಡ್ಗಳನ್ನು ಪೂರೈಸುತ್ತಿದ್ದು, 2024ರ ಫೆಬ್ರವರಿ ತಿಂಗಳಲ್ಲಿ ಅದರ ಒಪ್ಪಂದವನ್ನು ಮುಕ್ತಾಯಗೊಳಿಸುತ್ತಾರೆ. ಕರ್ನಾಟಕದಾದ್ಯಂತ 2 ಕೋಟಿಗೂ ಹೆಚ್ಚು ಡಿಎಲ್ಗಳು ಮತ್ತು 2 ಕೋಟಿಗೂ ಅಧಿಕ ಆರ್ಸಿಗಳನ್ನು ಅವರು ಪೂರೈಸಿದ್ದಾರೆ ಎಂದು ಸಾರಿಗೆ ಇಲಾಖೆಯ ಮೂಲಗಳು ತಿಳಿಸಿವೆ. ಡಿಎಲ್ ಮತ್ತು ಆರ್ ಸಿಗಳಿಗಾಗಿ ಸ್ಮಾರ್ಟ್-ಕಾರ್ಡ್ ಮಾದರಿಯ ಬದಲಾವಣೆಯು 2009ರಲ್ಲೇ ಆರಂಭವಾಯಿತು. ಈ ಹೊಸ ಪ್ರಸ್ತಾವಿತ ಕಾರ್ಡ್ಗಳು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ (MoRTH) ನಿಗದಿಪಡಿಸಿದ ವಿಶೇಷತೆಗಳಿಗೆ ಬದ್ಧವಾಗಿರುತ್ತವೆ ಮತ್ತು ರಾಷ್ಟ್ರವ್ಯಾಪಿ ವಿತರಣೆಯಲ್ಲಿ ಈ ಸ್ಮಾರ್ಟ್ ಕಾರ್ಡ್ ಗಳು ಏಕರೂಪತೆಯನ್ನು ಉತ್ತೇಜಿಸುತ್ತದೆ.

ಈ ಹಿಂದಿನ ಕಾರ್ಡ್ ಗಳಿಗೆ ಹೋಲಿಸಿದರೆ, ಈ ಕಾರ್ಡುಗಳಲ್ಲಿ ಹೆಚ್ಚುವರಿ ಮಾಹಿತಿಗಳು ಇರಲಿದೆ. ಡಿಎಲ್ ನ ಮುಂಭಾಗದಲ್ಲಿ ಕಾರ್ಡುದಾರನ ಹೆಸರು, ವ್ಯಾಲಿಡಿಟಿ, ಜನ್ಮ ದಿನಾಂಕ, ರಕ್ತದ ಗುಂಪು, ವಿಳಾಸ ಮತ್ತು ಫೋಟೋ ಇರಲಿದೆ. ಅಲ್ಲದೆ, ಚಿಪ್ ಕೂಡ ಅಳವಡಿಸಲಾಗಿರುತ್ತದೆ. ಕಾರ್ಡಿನ ಹಿಂಭಾಗದಲ್ಲಿ ಕ್ಯೂಆರ್ ಕೋಡ್ ಜೊತೆಗೆ ವಾಹನದ ಮಾದರಿ ಮತ್ತು ತುರ್ತು ಸಂಪರ್ಕ ಸಂಖ್ಯೆಗಳನ್ನು ನಮೂದಿಸಲಾಗಿರುತ್ತದೆ.

ಆರ್ಸಿಯ ಮುಂಭಾಗದಲ್ಲಿ ರಿಜಿಸ್ಟ್ರೇಷನ್ ನಂಬರ್, ರಿಜಿಸ್ಟ್ರೇಷನ್ ದಿನಾಂಕ, ವ್ಯಾಲಿಡಿಟಿ, ಚಾಸಿಸ್, ಇಂಜಿನ್ ನಂಬರ್ಗಳು, ಮಾಲೀಕನ ಮಾಹಿತಿ ಮತ್ತು ವಿಳಾಸ ಇರಲಿದೆ. ಕಾರ್ಡಿನ ಹಿಂಭಾಗದಲ್ಲಿ ವಾಹನ ತಯಾರಕರ ಹೆಸರು, ಮಾಡೆಲ್, ವಾಹನದ ಮಾದರಿ (ಬಾಡಿ ಟೈಪ್), ಆಸನದ ಸಾಮರ್ಥ್ಯ, ಆರ್ಥಿಕ ಮಾಹಿತಿ ಜತೆಗೆ ಕ್ಯೂಆರ್ ಕೋಡ್ ಇರಲಿದೆ. ಈ ಕ್ಯೂಆರ್ ಕೋಡ್ ಸ್ಪೇಷಾಲಿಟಿ ಏನೆಂದರೆ, ಕಾರ್ಡುದಾರನ ವಿವರಗಳನ್ನು ಪರಿಶೀಲಿಸಲು ಅಧಿಕಾರಿಗಳಿಗೆ ಸುಲಭವಾಗುತ್ತದೆ.

ಕರ್ನಾಟಕದಲ್ಲಿ ನೋಂದಾಯಿಸುವ ಹೊಸ ವಾಹನಗಳು ಮತ್ತು ಹೊಸ ಡಿಎಲ್ಗಳಿಗೆ ಅರ್ಜಿ ಸಲ್ಲಿಸುವ ವ್ಯಕ್ತಿಗಳಿಗೆ ಈ ಹೊಸ ಮಾದರಿಯ ಸ್ಮಾರ್ಟ್ ಕಾರ್ಡ್ಗಳನ್ನು ನೀಡಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.

 

Related posts

ಡಯಾಬಿಟಿಸ್ ವೆಲ್ ನೆಸ್ ಸೆಂಟರ್ ನ ಉದ್ಘಾಟನೆ.

ಮತ್ತೊಂದು ಇತಿಹಾಸ ಸೃಷ್ಠಿಸಲು ಇಸ್ರೋ ಸಜ್ಜು:  ಇಂದು ಆದಿತ್ಯ ಎಲ್-1 ಉಡಾವಣೆ.

ವಿಧಾನಪರಿಷತ್ ನೈರುತ್ಯ ಶಿಕ್ಷಕರ ಕ್ಷೇತ್ರದ ಮತದಾರರ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಿದ ಶಿಕ್ಷಣ ಸಚಿವರಾದ ಮಧುಬಂಗಾರಪ್ಪ…..