ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುರಾಜಕೀಯಶಿವಮೊಗ್ಗ

ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಹುಟ್ಟುಹಬ್ಬ: ಬೆಡ್‍ಶೀಟ್ ಮತ್ತು ಹಣ್ಣು ವಿತರಣೆ.

ಶಿವಮೊಗ್ಗ: ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಹುಟ್ಟುಹಬ್ಬದ ಅಂಗವಾಗಿ ಕೋಟೆ ರಸ್ತೆಯ ಮಾರಿಕಾಂಬಾ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕೆ ಬಡವರಿಗೆ ಬೆಡ್‍ಶೀಟ್ ಮತ್ತು ಹಣ್ಣು ವಿತರಿಸಲಾಯಿತು.
ಬಳಿಕ ಜೆಡಿಎಸ್ ಕಚೇರಿಯಲ್ಲಿ ಪಕ್ಷದ ಪ್ರಮುಖರು ಮತ್ತು ಅಭಿಮಾನಿಗಳು ಕೇಕ್ ಕತ್ತರಿಸಿ ಶುಭಕೋರಿದರು. ಗಾಡಿಕೊಪ್ಪದ ಜೀವನಸಂಜೆ ವೃದ್ಧಾಶ್ರಮ ಮತ್ತು ಶಾರದಾ ಅಂಧರ ವಿಕಾಸ ಕೇಂದ್ರದಲ್ಲಿ ಅನ್ನದಾನ ಮಾಡಲಾಯಿತು. ಹಲವಾರು ಸಾಮಾಜಿಕ ಚಟುವಟಿಕೆಗಳನ್ನು ಈ ಸಂದರ್ಭದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಪ್ರಸನ್ನಕುಮಾರ್ ಅಭಿಮಾನಿಗಳು ಮತ್ತು ಜೆಡಿಎಸ್ ಕಾರ್ಯಕರ್ತರು ಹಾಗೂ ಜೆಡಿಎಸ್ ನಗರಾಧ್ಯಕ್ಷ ದೀಪಕ್ ಸಿಂಗ್, ಮಹಿಳಾ ಅಧ್ಯಕ್ಷೆ ಗೀತಾ ಸತೀಶ್ ಹಾಗೂ ಪ್ರಮುಖರಾದ ರಾಮಕೃಷ್ಣ, ಶ್ಯಾಮ್, ನರಸಿಂಹ ಗಂಧದ ಮನೆ, ಹೊನ್ನಮ್ಮ ಮಾಲತೇಶ್, ಸರಿತಾ, ರಾಧಿಕಾ, ವಿನಯ್, ನಿಹಾಲ್, ರವಿ, ಚಂದ್ರಶೇಖರ್, ಶಂಕರ್, ಸುನಿಲ್ ಗೌಡ, ದಯಾನಂದ್, ಬೊಮ್ಮನಕಟ್ಟೆ ಮಂಜುನಾಥ್, ತ್ಯಾಗರಾಜ್, ಗೋಪಿ, ಮಂಜುನಾಥ್ ಗೌಡ, ನಫೀಜ್, ಮುಜೀಬ್ ಮತ್ತಿತರರಿದ್ದರು.

Related posts

ಬಿಜೆಪಿ ಎದುರಿಸುವ ಪಾಠ ಕರ್ನಾಟಕದಿಂದ ಕಲಿತೆವು, 4 ರಾಜ್ಯಗಳಲ್ಲಿ ಕಾಂಗ್ರೆಸ್ ಗೆಲ್ಲುವ ವಿಶ್ವಾಸ- ರಾಹುಲ್ ಗಾಂಧಿ.

25ನೇ ವರ್ಷ ಪೂರೈಸಿದ ಸರ್ಚ್ ಇಂಜಿನ್ ದೈತ್ಯ ಗೂಗಲ್

ಸಾಮಾನ್ಯ ವರ್ಗದಲ್ಲಿ ಹುದ್ದೆಗಳಿಗೆ ಆಯ್ಕೆಯಾದವರಿಗೆ ಸಿಂಧುತ್ವ ಪ್ರಮಾಣ ಪತ್ರ ಕಡ್ಡಾಯವಿಲ್ಲ.