ಕನ್ನಡಿಗರ ಪ್ರಜಾನುಡಿ
ಚಿಕ್ಕಮಗಳೂರುಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುರಾಜ್ಯ

ಪಟಾಕಿ ದುರಂತ: ಬೆಂಕಿಯ ಕಿಡಿ ತಗುಲಿ ಪಟಾಕಿ ಸಿಡಿದು ಯುವಕ ಸಾವು.

ಚಿಕ್ಕಮಗಳೂರು: ಸಂಭ್ರಮದ ದೀಪಾವಳಿ ಹಬ್ಬ ಮುಗಿದಿದ್ದು ಹಬ್ಬದಲ್ಲಿ ಪಟಾಕಿ ಸಿಡಿಸುವ ವೇಳೆ ಗಾಯಗೊಂಡವರ ಸಂಖ್ಯೆ ಹೆಚ್ಚಾಗಿ. ಈ ಮಧ್ಯೆ ಪಟಾಕಿ ಸಿಡಿದು 30 ವರ್ಷದ ಯುವಕ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ವ್ಯಾಪ್ತಿಯ ಸುಣ್ಣದಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಪ್ರದೀಪ್(30) ಮೃತಪಟ್ಟ ಯುವಕ. ಪ್ರದೀಪ್ ಚೇರ್ ಕೆಳಗೆ ಪಟಾಕಿ ಬಾಕ್ಸ್ ಇಟ್ಟುಕೊಂಡು  ಕುಳಿತಿದ್ದ. ಈ ವೇಳೆ ಪಟಾಕಿ ಬಾಕ್ಸ್ ಗೆ ಕಿಡಿ ತಗುಲಿದ್ದು ಆಟಂಬಾಂಬ್ ಸೇರಿ ಪಟಾಕಿಗಳು ಸಿಡಿದಿವೆ.  ಪಟಾಕಿ ಸಿಡಿದ ರಭಸಕ್ಕೆ ಯುವಕ ಪ್ರದೀಪ್ ಐದು ಅಡಿ ಹಾರಿದ್ದು ಪರಿಣಾಮ ಮೃತಪಟ್ಟಿದ್ದಾನೆ,

ಘಟನೆಯಲ್ಲಿ  ಮತ್ತೋರ್ವ ಯುವಕನಿಗೆ ಗಾಯಗಳಾಗಿದೆ. ಅಲ್ಲದೆ ಮೂವರು ಮಕ್ಕಳಿಗೂ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ .

Related posts

ಇಸ್ರೋಗೆ ಜಾಗ ನೀಡಿದ್ದು ಕಾಂಗ್ರೆಸ್ ಸರ್ಕಾರ- ಎಂಎಲ್ ಸಿ ಬಿ.ಕೆ ಹರಿಪ್ರಸಾದ್.

ಅಯೊಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೆ ದಿನಾಂಕ ಫಿಕ್ಸ್..

ಸಹೋದರಿಯರಿಗೆ ಅನುಕಂಪದ ಉದ್ಯೋಗಕ್ಕೆ ಅವಕಾಶವಿಲ್ಲ- ಹೈಕೋರ್ಟ್.