ಕನ್ನಡಿಗರ ಪ್ರಜಾನುಡಿ
ಪ್ರಧಾನ ಸುದ್ದಿಮುಖ್ಯಾಂಶಗಳುರಾಜ್ಯ

ದೀಪಾವಳಿ ಹಬ್ಬದ ಎಫೆಕ್ಟ್ : ವಾಯುಮಟ್ಟ ಸೂಚ್ಯಂಕದಲ್ಲಿ ಹೆಚ್ಚಳ.

ಬೆಂಗಳೂರು: ನಾಡಿನಾದ್ಯಂತ ದೀಪಾವಳಿ ಹಬ್ಬದ ಸಂಭ್ರಮ ಮುಗಿದಿದೆ. ಪಟಾಕಿ ಹಚ್ಚಿ ಸಂಭ್ರಮ ಸಡಗರದಿಂದ ಎಲ್ಲರೂ ಹಬ್ಬವನ್ನ ಆಚರಿಸಿದ್ದು ಇದೀಗ ಪಟಾಕಿ ಹೊಡೆದ ಪರಿಣಾಮ ವಾಯುಮಟ್ಟ ಸೂಚ್ಯಂಕದಲ್ಲಿ ಹೆಚ್ಚಳವಾಗಿದೆ

ಹೌದು,  ಸೇಫ್ ಸಿಟಿಯಾಗಿದ್ದ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ  ದೀಪಾವಳಿ ಪರಿಣಾಮವಾಗಿ ವಾಯು ಮಾಲಿನ್ಯ  ಹೆಚ್ಚಳವಾಗಿದೆ.  ನಗರದ ಎಲ್ಲ ಪ್ರದೇಶಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕ ಹೆಚ್ಚಳಗೊಂಡು ಗುಣಮಟ್ಟ ಕುಸಿದಿದೆ. ಉಸಿರಾಡಲು ಯೋಗ್ಯವಾದ ಗುಣಮಟ್ಟವನ್ನು ಕೆಲವೆಡೆ ಕಳೆದುಕೊಂಡಿದ್ದರೆ ಮತ್ತೆ ಕೆಲವೆಡೆ ಮಧ್ಯಮ ಗುಣಮಟ್ಟ ಕಾಯ್ದುಕೊಂಡಿದೆ.  108 ರಿಂದ 274 ರವರೆಗೆ ಒಂದೊಂದು ಪ್ರದೇಶದಲ್ಲಿ ಒಂದೊಂದು ರೀತಿಯ ಎಕ್ಯೂಐ ದಾಖಲಾಗಿದೆ.

ನೆರೆಹೊರೆ ರಾಜ್ಯಗಳ ರಾಜಧಾನಿಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ನವೆಂಬರ್ ಆರಂಭದಲ್ಲಿ ಕಡಿಮೆ ಇದ್ದ ವಾಯು ಮಾಲಿನ್ಯದ ಪ್ರಮಾಣ ದೀಪಾವಳಿ ಹಬ್ಬದ ಹಿನ್ನಲೆ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಈ ಕುರಿತು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕೃತ ವೆಬ್ ಸೈಟ್ ನಲ್ಲಿ ಸೂಚ್ಯಂಕದ ವಿವರಗಳನ್ನು ನಮೂದಿಸಿದ್ದು, ಇದರಲ್ಲಿ ಈ ಬಾರಿಯ ನವೆಂಬರ್ ನಲ್ಲಿ ವಾಯುಗುಣಮಟ್ಟ ಸೂಚ್ಯಂಕ ಯೋಗ್ಯ ಪ್ರಮಾಣದ ಗೆರೆಯನ್ನು ಕಾಯ್ದುಕೊಂಡಿತ್ತಾದರೂ, ಈಗ ಯೋಗ್ಯ ಪ್ರಮಾಣವನ್ನು ದಾಟಿದೆ ಎನ್ನುವ ಮಾಹಿತಿಯನ್ನು ನೀಡಿದೆ.

ನವೆಂಬರ್ ನಲ್ಲಿ ಮೆಜೆಸ್ಟಿಕ್, ಸಿಲ್ಕ್ ಬೋರ್ಡ್, ಬಾಪೂಜಿನಗರ, ಜಿಗಣಿ, ಬಿಟಿಎಂ ಲೇಔಟ್ ಮಾತ್ರ ಮಧ್ಯಮ ಪ್ರಮಾಣದ ವಾಯುಗುಣಮಟ್ಟ ಸೂಚ್ಯಂಕ ದಾಖಲಿಸಿದ್ದವು. ಆದರೂ ಉಸಿರಾಡಲು ಯೋಗ್ಯವಾದ ಗುಣಮಟ್ಟವನ್ನು ಹೊಂದಿವೆ ಎಂದು ಪರಿಗಣಿಸಬಹುದಾಗಿತ್ತು ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ತಿಳಿಸಿತ್ತು. ಹೊರತುಪಡಿಸಿ ಹೆಬ್ಬಾಳ, ವಿಲ್ಸನ್ ಗಾರ್ಡನ್, ಜಯನಗರ, ಪೀಣ್ಯ ಸೇರಿ ಇತರ ಕಡೆ ಇರುವ ಮಾಲಿನ್ಯ ನಿರ್ವಹಣಾ ಘಟಕಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕ ಹಸಿರು ಬಣ್ಣದ ವ್ಯಾಪ್ತಿ ಕಾಯ್ದುಕೊಂಡಿತ್ತು. ಆದರೆ, ದೀಪಾವಳಿ ಹಿನ್ನೆಲೆ ಈಗ ಹಸಿರು ಬಣ್ಣದ ವ್ಯಾಪ್ತಿಯಲ್ಲಿ ಬೆಂಗಳೂರಿನ ಯಾವುದೇ ಪ್ರದೇಶವೂ ಇಲ್ಲ. ಕೇವಲ ಬಿಟಿಎಂ ಲೇಔಟ್ ಮಾತ್ರ 100 ಎಕ್ಯೂಐ ಒಳಗಡೆ ಇದೆ. ಇದು 95 ಎಕ್ಯೂಐ ಸೂಚ್ಯಂಕ ಪಡೆದುಕೊಂಡಿದೆ.

ಇನ್ನು ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ, ಹೆಬ್ಬಾಳ, ಹೊಂಬೇಗೌಡ ನಗರ, ಜಿಗಣಿ, ಕಸ್ತೂರಿ ನಗರ, ಪೀಣ್ಯ, ಮೈಲಸಂದ್ರ, ಸಾಣೆಗುರವಹಳ್ಳಿ, ಶಿವಪುರ-ಪೀಣ್ಯದಲ್ಲಿರುವ ಮಾಲಿನ್ಯ ನಿರ್ವಹಣಾ ಘಟಕಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕ 101-200ರ ಒಳಗಡೆ ದಾಖಲಾಗಿದೆ. ಇನ್ನುಳಿದಂತೆ ಜಯನಗರ, ಸಿಲ್ಕ್ ಬೋರ್ಡ್, ಬಾಪೂಜಿ ನಗರದ ಮಾಲಿನ್ಯ ನಿರ್ವಹಣಾ ಘಟಕಗಳಲ್ಲಿ ವಾಯುಗುಣಮಟ್ಟ ಸೂಚ್ಯಂಕ 201 ದಾಟಿದೆ.

 

Related posts

ಕೈಗಾರಿಕಾ ರತ್ನ ಪ್ರಶಸ್ತಿ ಪುರಸ್ಕೃತ ಎಂಎಲ್‌ಸಿ ರುದ್ರೇಗೌಡರಿಗೆ ಸನ್ಮಾನ.

ಕ್ರೀಡೆಗಳು ಹಿರಿಯರಿಗೆ ಉಲ್ಲಾಸ ತರುತ್ತವೆ-ಪಾಲಿಕೆ ಮೇಯರ್ ಶಿವಕುಮಾರ್

ಆರೋಗ್ಯ ಶಿಬಿರ ದಲ್ಲಿ ಭಾಗವಹಿಸಿದ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ  ವಿತರಣೆ.