ಶಿವಮೊಗ್ಗ: ವಿಜಯದಶಮಿಯ ಅಂಬಾರಿ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಸಕ್ರೆಬೈಲು ಆನೆಬಿಡಾರದಿಂದ ಆಗಮಿಸಿದ ಸಾಗರ್, ನೇತ್ರಾವತಿ, ಹೇಮಾವತಿ ಆನೆಗಳನ್ನು ನಗರದ ಕೋಟೆ ದೇವಸ್ಥಾನದ ಬಳಿಯ ವಾಸವಿ ಶಾಲಾ ಆವರಣದಲ್ಲಿ ಉತ್ಸವ ಸಮಿತಿ ವತಿಯಿಂದ ಸ್ವಾಗತಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಮಿತಿ ಅಧ್ಯಕ್ಷ ಯು.ಹೆಚ್. ವಿಶ್ವನಾಥ್, ಮಂಜುನಾಥ್, ರೇಖಾರಂಗನಾಥ್, ಸುರೇಖಾ ಮುರುಳೀಧರ್, ಉಪಮೇಯರ್ ಲಕ್ಷ್ಮಿ ಶಂಕರ ನಾಯಕ್, ಸುವರ್ಣಾ ಶಂಕರ್, ಜ್ಞಾನೇಶ್ವರ್, ಆರತಿ. ಆಮಾ. ಪ್ರಕಾಶ್, ಡಾ. ವಿನಯ್ ಮತ್ತಿತರರಿದ್ದರು.