ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುರಾಜಕೀಯಶಿವಮೊಗ್ಗ

ಬಿಜೆಪಿ ಪಕ್ಷ ನುಡಿದಂತೆ ನಡೆಯುವ ಪಕ್ಷವಲ್ಲ ಎಂಬುವುದು ಮತ್ತೊಮ್ಮೆ ಸಾಬೀತು-ಜಿಲ್ಲಾಕಾಂಗ್ರೆಸ್ ವಕ್ತಾರ ವೈ.ಬಿ.ಚಂದ್ರಕಾಂತ್

ಶಿವಮೊಗ್ಗ: ಭಾರತೀಯಜನತಾ ಪಕ್ಷ ನುಡಿದಂತೆ ನಡೆಯುವ ಪಕ್ಷವಲ್ಲ ಎನ್ನುವುದನ್ನು ರಾಜ್ಯ ಬಿ.ಜೆ.ಪಿ. ಅಧ್ಯಕ್ಷರನ್ನಾಗಿ ಬಿ.ವೈ.ವಿಜಯೇಂದ್ರ ಅವರನ್ನು ನೇಮಕ ಮಾಡುವ ಮೂಲಕ ಮತ್ತೊಮ್ಮೆ ಸಾಬೀತುಪಡಿಸಿದೆ ಎಂದು ಜಿಲ್ಲಾಕಾಂಗ್ರೆಸ್ ವಕ್ತಾರ ವೈ.ಬಿ.ಚಂದ್ರಕಾಂತ್ ಆರೋಪಿಸಿದ್ದಾರೆ.
ದೇಶಕ್ಕೆ ಸ್ವಾತಂತ್ರ್ಯ ಪಡೆಯುವ ಉದ್ದೇಶದಿಂದ ಜನ್ಮ ತಾಳಿದ ಕಾಂಗ್ರೆಸ್ ಪಕ್ಷವನ್ನು ಸ್ವಾತಂತ್ರ್ಯ ನಂತರ ಹುಟ್ಟಿಕೊಂಡಂತಹ ಜನಸಂಘ ಮತ್ತು ಭಾರತೀಯ ಜನತಾ ಪಕ್ಷಗಳು, ಕಾಂಗ್ರೇಸ್ ಪಕ್ಷದ ಸರ್ಕಾರಗಳು ಜಾರಿಗೆ ತಂದಂತಹ ಎಲ್ಲಾ ಜನಪರ ಆಡಳಿತವನ್ನು ವಿರೋಧಿಸಿಕೊಂಡು ಬಂದಿರುವುದನ್ನು ದೇಶದ ಜನರು ಕಂಡಿದ್ದಾರೆ.
ಈಗ ಬಿ.ಎಸ್. ಯಡಿಯೂರಪ್ಪರವರ ಪುತ್ರ ಬಿ.ವೈ.ವಿಜಯೇಂದ್ರ ಅವರನ್ನು ಬಿ.ಜೆ.ಪಿ. ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡುವ ಮೂಲಕ ತಮ್ಮ ನೈತಿಕತೆಯನ್ನುತಾವೇ ಕಳೆದುಕೊಂಡಿದ್ದಾರೆ ಎಂದು ಅವರು ಕುಟುಕಿದ್ದಾರೆ.
ಕಾಂಗ್ರೆಸ್ ಸರ್ಕಾರಗಳು ಜನಪರವಾದ ಯೋಜನೆಗಳ ಘೋಷಿಸಿದಾಗ ಪ್ರಧಾನಿ ಮೋದಿಯವರು ಆದಿಯಾಗಿ ಬಿ.ಜೆ.ಪಿ. ನಾಯಕರು ಕಾಂಗ್ರೆಸ್ ಪಕ್ಷ ದೇಶಕ್ಕೆ ಮಾರಕವಾಗುತ್ತಿದೆ. ಉಚಿತ ಯೋಜನೆಗಳ ಜಾರಿಗೆ ತರುವ ಮೂಲಕ ದೇಶವನ್ನು ದಿವಾಳಿ ಮಾಡಹೊರಟಿದೆ ಎಂದು ಟೀಕಿಸಿದ್ದಾರೆ.
ಕುಟುಂಬ ರಾಜಕಾರಣವನ್ನು ವಿರೋಧಿಸುತ್ತ ಬಂದಿದ್ದ ಪ್ರಧಾನಿ ಮೋದಿಯವರು, ಬಿ.ಎಸ್. ಯಡಿಯೂರಪ್ಪ, ಕೆ.ಎಸ್.ಈಶ್ವರಪ್ಪ ಇತರೆ ನಾಯಕರು ತಾವೇ ಕುಟುಂಬ ರಾಜಕಾರಣಕ್ಕೆ ಇಳಿದು ತಮ್ಮ ರಾಜಕೀಯ ದಿವಾಳಿತನವನ್ನು ತೋರ್ಪಡಿಸಿರುವುದರಿಂದ ಬಿ.ಜೆ.ಪಿ. ನಾಯಕರೆಲ್ಲರೂ ಕಾಂಗ್ರೆಸ್ ಪಕ್ಷದ ಕ್ಷಮೆ ಕೇಳಬೇಕೆಂದು ಜಿಲ್ಲಾ ವಕ್ತಾರ ವೈ.ಬಿ.ಚಂದ್ರಕಾಂತ್‍ಆಗ್ರಹಿಸಿದ್ದಾರೆ.

Related posts

ಮಾನಸಿಕ ಆರೋಗ್ಯಕ್ಕೆ ಪ್ರಾಮುಖ್ಯತೆ ನೀಡುವುದು ಮುಖ್ಯ-ಜಿ.ವಿಜಯ್‌ಕುಮಾರ್

ಶಿವಮೊಗ್ಗ ವಿಮಾನ ಹಾರಾಟ ಪ್ರಕ್ರಿಯೆ ಆ. 31ರಿಂದ ಅಧಿಕೃತ ಆರಂಭ- ಸಂಸದ ಬಿ.ವೈ.ರಾಘವೇಂದ್ರ

ಹಬ್ಬದ ರೀತಿಯಲ್ಲಿ ಪೌರ ಕಾರ್ಮಿಕರ ಕ್ರೀಡಾಕೂಟ-ಪಾಲಿಕೆ ಮೇಯರ್ ಶಿವಕುಮಾರ್