ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಶ್ರದ್ಧೆ, ನಿಷ್ಠೆ ಜೀವನದಲ್ಲಿ ನೆಮ್ಮದಿ ಪಡೆಯುವ ಸರಳ ಮಂತ್ರಗಳು-ಶ್ರೀ ಬಸವ ಮರುಳ ಸಿದ್ಧ ಸ್ವಾಮೀಜಿ

ಶಿವಮೊಗ್ಗ: ಮನುಷ್ಯ ಜೀವನದಲ್ಲಿ ಕಾಣಲು ಶ್ರದ್ಧೆ, ನಿಷ್ಠೆ, ಅವದಾನ, ಅನುಭವ, ಆನಂದ ಹಾಗೂ ಸಮರಸಗಳನ್ನು ಅಳವಡಿಸಿಕೊಳ್ಳುವುದು ಅತ್ಯಂತ ಮುಖ್ಯ ಎಂದು ಬಸವಕೇಂದ್ರದ ಶ್ರೀ ಬಸವ ಮರುಳ ಸಿದ್ಧ ಸ್ವಾಮೀಜಿ ಹೇಳಿದರು.

ಶಿವಮೊಗ್ಗ ನಗರದ ಬಸವಕೇಂದ್ರದಲ್ಲಿ ಶಿವಾನುಭವ ಸಪ್ತಾಹದ ಎರಡನೇ ದಿನದ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿ, ಶ್ರಾವಣ ಮಾಸದಲ್ಲಿ ಪ್ರತಿ ವರ್ಷ ಆಚರಿಸುವ ಶಿವಾನುಭವಗೋಷ್ಠಿಯು ಭಕ್ತರ ಮನೆ ಮನಗಳನ್ನು ಬೆಳಗುವ ಶ್ರೇಷ್ಠ ಕಾರ್ಯವಾಗಿದೆ ಎಂದು ತಿಳಿಸಿದರು.
ಮಾಹೇಶ್ವರ ಸ್ಥಲ ವಿಷಯ ಕುರಿತು ಸಾಹಿತಿ, ಪ್ರಕಾಶಕ ಗಿರಿಮಲ್ಲನವರ ಮಾತನಾಡಿ, ಶರಣರು ಸಂಸಾರದಿAದ ಶೂನ್ಯದವರೆಗೆ ಸಾಗುವ ಸಾಧನೆಯ ಪಥವನ್ನು ಷಟಸ್ಥಲ ಎಂದು ಕರೆದರು. ಮಾಹೇಶ್ವರ ಸ್ಥಲದಲ್ಲಿರುವ ಸಾಧಕರು ಗುರುವಿನಲ್ಲಿ ವಿಶೇಷವಾಗಿ ನಿಷ್ಠೆ ಭಕ್ತಿಯುಳ್ಳವರಾಗಿರುತ್ತಾರೆ ಎಂದರು.
ಮಾಹೇಶ್ವರ ಸ್ಥಲದಲ್ಲಿ ಗುರುಲಿಂಗವೇ ಮುಖ್ಯವಾಗಿದೆ. ಮಾಹೇಶ್ವರ ಸ್ಥಲದಲ್ಲಿ ದೀಕ್ಷಾಬದ್ಧನಾದ ಸಾಧಕನು ತನ್ನ ಸ್ವಾರ್ಥವನ್ನೆಲ್ಲಾ ಬದಿಗೊತ್ತಿ ಸಮಾಜದಲ್ಲಿ ಹಿತ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಾನೆ ಎಂದು ಹೇಳಿದರು.
ಶಿವಾನುಭವ ಸಪ್ತಾಹದ ಎರಡನೇ ದಿನದ ಅಧ್ಯಕ್ಷತೆ ವಹಿಸಿದ್ದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಘಟಕದ ಅಧ್ಯಕ್ಷ ಜಿ.ವಿಜಯ್ ಕುಮಾರ್ ಮಾತನಾಡಿ, ಶಿವಾನುಭವ ಗೋಷ್ಠಿಗಳಂತಹ ಅರ್ಥಪೂರ್ಣ ಕಾರ್ಯಕ್ರಮಗಳಿಂದ ಭಕ್ತರ ಜ್ಞಾನ ಸಂಪತ್ತು ವೃದ್ಧಿಯಾಗುತ್ತದೆ. ಇಂತಹ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರು ಮಕ್ಕಳೊಂದಿಗೆ ಪಾಲ್ಗೊಳ್ಳಬೇಕು ಎಂದು ತಿಳಿಸಿದರು.
ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ರುದ್ರಮುನಿ ಸಜ್ಜನ್ ಮಾತನಾಡಿ, ಬಸವಕೇಂದ್ರ ನಿರಂತರವಾಗಿ ಅನೇಕ ವರ್ಷಗಳಿಂದ ಸಪ್ತಾಹ ನಡೆಸುತ್ತ ಬಂದಿದ್ದು, ಉಪನ್ಯಾಸಕರ ಮುಖಾಂತರ ಭಕ್ತರಿಗೆ ಮಹತ್ತರ ವಿಷಯಗಳ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ಬಸವಕೇಂದ್ರದ ಅಧ್ಯಕ್ಷ ಜಿ.ಬೆನಕಪ್ಪ, ಕಾರ್ಯದರ್ಶಿ ಚಂದ್ರಶೇಖರ್ ತೆಲಗಿನಹಾಳ್, ಸಂಗಮೇಶ್ ಮಠದ್, ವಾಣಿ, ಚಂದ್ರಪ್ಪ ಶೆಟ್ಟಿ, ಮಂಜುನಾಥ್, ದೇವಕುಮಾರ್, ಪುಷ್ಪಾ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

Related posts

ಶಾಂತಿ, ಕ್ರಾಂತಿ ಮತ್ತು ಅಧ್ಯಾತ್ಮದ  ಮೂಲಕ ನಮ್ಮ ಹಿರಿಯರು ದೇಶಕ್ಕೆ ಸ್ವಾತಂತ್ರ ತಂದು ಕೊಟ್ಟಿದ್ದಾರೆ-ನಾಡೋಜ ಡಾ. ಮಹೇಶ ಜೋಶಿ ಅಭಿಪ್ರಾಯ

ಅಪಘಾತದಲ್ಲಿ ಸಾವನ್ನಪ್ಪುವ ಸಂಖ್ಯೆಯಲ್ಲಿ ಯುವ ಸಮೂಹವೇ ಹೆಚ್ಚು- ಎಸ್ಪಿ ಜಿ.ಕೆ.ಮಿಥುನ್ ಕುಮಾರ್ ಕಳವಳ.

ಅಕ್ಟೋಬರ್ ನಿಂದ ಸಕ್ಕರೆ ರಫ್ತು ನಿಷೇಧ…