ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಹಳೆಮಂಡ್ಲಿ ಬಳಿ ಪ್ರಾರಂಭವಾಗುತ್ತಿರುವ ಗ್ಯಾಸ್ ಪ್ಯ್ಲಾಂಟ್ ಬೇರೆ ಕಡೆ ಸ್ಥಳಾಂತರಕ್ಕೆ ಆಗ್ರಹ.

ಶಿವಮೊಗ್ಗ: ನಗರದ ಹಳೆಮಂಡ್ಲಿ ಬಳಿ ಪ್ರಾರಂಭವಾಗುತ್ತಿರುವ ಗ್ಯಾಸ್ ಪ್ಯ್ಲಾಂಟ್ ಅನ್ನು ಬೇರೆ ಕಡೆಗೆ ಸ್ಥಳಾಂತರಿಸಬೇಕು ಎಂದು ಆಗ್ರಹಿಸಿ ಮುಸ್ಲಿಮ್ಸ್, ಎಸ್.ಸಿ., ಎಸ್.ಟಿ ಮತ್ತು ಓಬಿಸಿ ಡೆವಲಪ್‍ಮೆಂಟ್ ಫೋರಂ ವತಿಯಿಂದ ಪ್ರತಿಭಟನೆ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ವಾರ್ಡ್ ನಂ.31, 33ರ ಹಳೇ ಮಂಡ್ಲಿ ಹತ್ತಿರ ಎಜಿಪಿ ಸಿಟಿ ಗ್ಯಾಸ್ ಖಾಸಗಿ ಸಂಸ್ಥೆಯವರು ಗ್ಯಾಸ್ ಪ್ಲ್ಯಾಂಟ್ ನಿರ್ಮಿಸಲು ಹೊರಟಿದ್ದಾರೆ. ಈ ಎರಡೂ ವಾರ್ಡ್‍ಗಳ ವಿವಿಧ ಬಡಾವಣೆಗಳಲ್ಲಿ ಸುಮಾರು 4 ಸಾವಿರ ಮನೆ, ಶಾಲೆ, ಅಂಗನವಾಡಿ, ಆಸ್ಪತ್ರೆಗಳಿವೆ. ಗ್ಯಾಸ್ ಪ್ಲ್ಯಾಂಟ್ ನಿರ್ಮಿಸುವುದರಿಂದ ಉಸಿರಾಟದ ತೊಂದರೆಯಾಗಿ ಅನಾರೋಗ್ಯಕ್ಕೆ ಈಡಾಗುವ ಸಂಭವವಿದೆ ಎಂದು ಪ್ರತಿಭಟನಕಾರರು ದೂರಿದರು.
ಅಲ್ಲದೆ ಅಂಗನವಾಡಿ ಮತ್ತು ಶಾಲಾ ಮಕ್ಕಳ ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಈ ಹಿಂದೆಯೂ ಕೂಡ ಇಲ್ಲಿ ಪ್ಲ್ಯಾಂಟ್ ಬೇಡ ಎಂದು ಮನವಿ ಮಾಡಿದ್ದೆವು. ಆದರೆ ಇದುವರೆಗೂ ಸ್ಥಳಾಂತರ ಆದೇಶವಾಗಿಲ್ಲ. ಆದ್ದರಿಂದ ಇಲ್ಲಿನ ನಿವಾಸಿಗಳ ಆರೋಗ್ಯ ರಕ್ಷಣೆಗಾಗಿ ಈ ಪ್ಲ್ಯಾಂಟ್ ವರ್ಗಾವಣೆ ಮಾಡಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಪ್ರಮುಖರಾದ ಮಹ್ಮದ್ ವಸೀಕ್, ಮುನಾವರ್ ಪಾಶಾ, ವಸೀಂ ಖಾನ್, ಅಫ್ತರ್ ಪಾಶಾ ಸೇರಿದಂತೆ ಹಲವರಿದ್ದರು.

Related posts

ವಿದ್ಯಾರ್ಥಿಗಳ ಯೋಚನೆ ಆಲೋಚನೆಗಳು ದೂರದೃಷ್ಟಿಯಿಂದ ಇರಬೇಕು-ಡಾ.ಆನಂದಕುಮಾರ್ ತ್ರಿಪಾಠಿ

ಲೋಕಾಯುಕ್ತದಿಂದ ತಾಲ್ಲೂಕುಗಳಲ್ಲಿ ಕುಂದುಕೊರತೆ ಅರ್ಜಿ ಸ್ವೀಕಾರ

ಸಚಿವ ಸತೀಶ್ ಜಾರಕಿಹೊಳಿ ಸಿಎಂ ಆಗುವುದು ನೂರಕ್ಕೆ ನೂರರಷ್ಟು ಸತ್ಯ; ಕಾಂಗ್ರೆಸ್ ಶಾಸಕ  ಸ್ಪೋಟಕ ಹೇಳಿಕೆ