ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ದೇಶಕ್ಕಾಗಿ ಸೇವೆ ಮಾಡುವ ಕಾರ್ಯವು ಅತ್ಯಂತ ಶ್ರೇಷ್ಠ-ನಿವೃತ್ತ ಯೋಧ ಕರ್ನಲ್ ಗೋಪಾಲ್ ಕೌಶಿಕ್

ಶಿವಮೊಗ್ಗ: ದೇಶಕ್ಕಾಗಿ ಸೇವೆ ಮಾಡುವ ಕಾರ್ಯವು ಅತ್ಯಂತ ಶೇಷ್ಠವಾಗಿದ್ದು, ದೇಶಕ್ಕಾಗಿ ಕೆಲಸ ಮಾಡುವಾಗ ಸಿಗುವ ತೃಪ್ತಿ ವರ್ಣಿಸಲು ಸಾಧ್ಯವಿಲ್ಲ ಎಂದು ನಿವೃತ್ತ ಯೋಧ ಕರ್ನಲ್ ಗೋಪಾಲ್ ಕೌಶಿಕ್ ಹೇಳಿದರು.

ಶಿವಮೊಗ್ಗ ನಗರದಲ್ಲಿ ರೋಟರಿ ಶಿವಮೊಗ್ಗ ಪೂರ್ವ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಭಾರತೀಯ ಸೇನೆಯಲ್ಲಿ ಸೇವೆ ಮಾಡಲು ಅರ್ಹತೆ ಇರಬೇಕು. ದೇಶ ಪ್ರೇಮ ಇರಬೇಕು. ದೇಶ ನಮಗೆ ಎಲ್ಲವನ್ನು ಕೊಟ್ಟಿದೆ. ದೇಶದ ಋಣ ತೀರಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು.

ದೇಶದ ವಿವಿಧ ಗಡಿಗಳಲ್ಲಿ ಸಲ್ಲಿಸಿದ ಸೇವೆ ಹಾಗೂ ಅನುಭವ ತುಂಬಾ ರೋಚಕ. ಒಂದು ಕಡೆ ದೇಶ ಪ್ರೇಮ, ಇನ್ನೊಂದು ಕಡೆ ಕುಟುಂಬದಿAದ ದೂರ ಇರುವುದು ತುಂಬಾ ಕಷ್ಟ. ದೇಶದ ಸೇನೆಯಲ್ಲಿ ಕೆಲಸ ನಿರ್ವಹಿಸಿದ ಸಾರ್ಥಕ ಭಾವ ಅತ್ಯಂತ ವಿಶೇಷ ಎಂದರು.

ಭಾರತ ದೇಶ ಇಂದು ತಂತ್ರಜ್ಞಾನ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಹೊಂದಿದ್ದು, ಯುವಜನರು ದೇಶದ ವಿವಿಧ ಕ್ಷೇತ್ರಗಳಲ್ಲಿ ಉನ್ನತ ಸಾಧನೆ ಮಾಡುವ ಸಂಕಲ್ಪ ಮಾಡಬೇಕು ದೇಶದ ಅಭಿವೃದ್ಧಿಯಲ್ಲಿ ಭಾಗಿಯಾಗಬೇಕು ಎಂದು ಹೇಳಿದರು.

ಪ್ರೋಖಾಣ್ ಅಣುಬಾಂಬ್ ಪರೀಕ್ಷೆಯ ವಿಶೇಷ ಅನುಭವವನ್ನು ಹಂಚಿಕೊAಡರು.ಆಪರೇಷನ್ ಶಕ್ತಿ, ಪ್ರೋಖಾನ್ 2 ಸಮಯದಲ್ಲಿ 58 ಇಂಜಿನಿಯರ್ ರೆಜಿಮೆಂಟ್ ಕಮಾಂಡ್ ಆಗಿ ನೇತೃತ್ವ ವಹಿಸಿದ್ದ ಕರ್ನಲ್ ಗೋಪಾಲ್ ಕೌಶಿಕ್ ಅವರನ್ನು ರೋಟರಿ ಶಿವಮೊಗ್ಗ ಪೂರ್ವ ವತಿಯಿಂದ ಸನ್ಮಾನಿಸಲಾಯಿತು.

ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷ ಸತೀಶ್ ಚಂದ್ರ ಮಾತನಾಡಿ, ದೇಶಕ್ಕಾಗಿ ಸೇವೆ ಸಲ್ಲಿಸಿದ ಯೋಧರನ್ನು ಗೌರವಿಸುತ್ತಿರುವುದು ನಮ್ಮ ಪುಣ್ಯ. ದೇಶದ ಸೇನೆಯಲ್ಲಿ ಕೆಲಸ ಮಾಡಲು ಹೆಚ್ಚು ಯುವ ಜನರು ಮುಂದಾಗಬೇಕು ಎಂದು ತಿಳಿಸಿದರು.

ನಮ್ಮ ಟಿವಿ ಜಗದೀಶ್, ನಿರೂಪಕ ಜಿ.ವಿಜಯ್‌ಕುಮಾರ್, ರೋಟರಿ ಶಿವಮೊಗ್ಗ ಪೂರ್ವ ಕಿಶೋರ್ ಕುಮಾರ್, ಪೃಥ್ವಿ ಗಿರಿಮಾಜಿ, ಶ್ರೀಕಾಂತ್ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

Related posts

ಬೇರೆ ಭಾಷೆ ಕಲಿಯಬೇಡಿ ಎನ್ನಲ್ಲ, ಕನ್ನಡದಲ್ಲಿ ಮಾತನಾಡಿ : ತಾಯಿನಾಡಿನ ಋಣ ತೀರಸಿ- ಸಿಎಂ ಸಿದ್ಧರಾಮಯ್ಯ.

ನ.22ರಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕೂಲಿ ಕಾರ್ಮಿಕರ ಒಕ್ಕೂಟ ಪ್ರತಿಭಟನೆ.

ಇಡೀ ದೇಶದ ಜನರ ಮತ್ತು ಪಕ್ಷದ ಕಾರ್ಯಕರ್ತರ ಭರವಸೆಯನ್ನು ರಾಜ್ಯದ ಫಲಿತಾಂಶ ಹೆಚ್ಚಿಸಿದೆ-ಸರ್ವ ಸದಸ್ಯರ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ  ನುಡಿ.