ಕನ್ನಡಿಗರ ಪ್ರಜಾನುಡಿ
ಕ್ರೈಮ್ಪ್ರಧಾನ ಸುದ್ದಿಮುಖ್ಯಾಂಶಗಳುರಾಜ್ಯ

ಚೈತ್ರಾ ಕುಂದಾಪುರ ಅಂಡ್ ಗ್ಯಾಂಗ್ ವಂಚನೆ ಕೇಸ್ : 3ನೇ ಆರೋಪಿ ಹಾಲಶ್ರೀ ಒಡಿಶಾದಲ್ಲಿ ಬಂಧನ.

ಬೆಂಗಳೂರು: ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಹೇಳಿ ಉದ್ಯಮಿ ಬಳಿ 5 ಕೋಟಿ ಪಡೆದು ಚೈತ್ರಾ ಕುಂದಾಪುರ ಅಂಡ್ ಗ್ಯಾಂಗ್ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪ್ರಕರಣದ 3ನೇ ಆರೋಪಿ ಹಾಲಶ್ರೀಯನ್ನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಪ್ರಕರಣದ 3ನೇ ಆರೋಪಿ ಹಾಲಶ್ರೀಯವರನ್ನ ಒಡಿಶಾದ ಕಟಕ್ ನಲ್ಲಿ ಚಲಿಸುತ್ತಿದ್ದ ರೈಲಿನಲ್ಲಿ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಭುವನೇಶ್ವರಂದಿಂದ  ಬೋಧ್ ಗಯಾಗೆ ತೆರಳುತ್ತಿದ್ದ ವೇಳೆ ಒಡಿಶಾ ಪೊಲೀಸರ ಸಹಾಯದಿಂದ ಬಂಧಿಸಲಾಗಿದೆ.

ಇಂದು ರಾತ್ರಿ ಬೆಂಗಳೂರಿಗೆ ಹಾಲಶ್ರೀಯನ್ನ ಪೊಲೀಸರು ಕರೆತರಲಿದ್ದಾರೆ. ಈಗಾಗಲೇ ಚೈತ್ರಾ ಕುಂದಾಪುರ ಅಂಡ್ ಗ್ಯಾಂಗ್ ತಮ್ಮ ವಶಕ್ಕೆ ಪಡೆದು ಸಿಸಿಬಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Related posts

ಕಾವೇರಿ ನೀರಿಗಾಗಿ ಹೋರಾಟ:   ಸೆ.26 ರಂದು ಬೆಂಗಳೂರು ಬಂದ್.

ರಾಜ್ಯದಲ್ಲಿ ಈಗ 4000 ಮೆ.ವ್ಯಾ. ವಿದ್ಯುತ್ ಕೊರತೆ: ಅನಧಿಕೃತ ಲೋಡ್ ಶೆಡ್ಡಿಂಗ್ ಜಾರಿ

ಶಾಲೆಗಳಲ್ಲಿ ಕಡ್ಡಾಯವಾಗಿ ಪ್ರತಿ ವಿದ್ಯಾರ್ಥಿಗೆ ಜಾಗ ಮೀಸಲಿಡಿ- ಸುತ್ತೋಲೆ ಹೊರಡಿಸಿದ ಶಿಕ್ಷಣ ಇಲಾಖೆ..