ನವದೆಹಲಿ: ಭಯೋತ್ಪಾದನೆಗೆ ಸಂಬಂಧಿಸಿದ ವ್ಯಕ್ತಿಗಳಿಗೆ ವೇದಿಕೆ ಕೊಡಬೇಡಿ ಎಂದು ಟಿವಿ ಚಾನೆಲ್ ಗಳಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ.
ಹೌದು, ಭಯೋತ್ಪಾದನೆಗೆ ಸಂಬಂಧಿಸಿದ ವ್ಯಕ್ತಿಗಳನ್ನು ಸಂದರ್ಶಿಸದಂತೆ ಕೇಂದ್ರ ಸರ್ಕಾರ ಖಾಸಗಿ ಟೆಲಿವಿಷನ್ ಚಾನೆಲ್ ಗಳಿಗೆ ಸಲಹೆ ನೀಡಿದೆ. ಈ ಕುರಿತು ಸಲಹೆ ಹೊರಡಿಸಿರುವ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ, ಭಾರತದಲ್ಲಿ ಕಾನೂನಿನಿಂದ ನಿಷೇಧಿಸಲ್ಪಟ್ಟ ಸಂಘಟನೆಗೆ ಸೇರಿದ ಭಯೋತ್ಪಾದನೆ ಸೇರಿದಂತೆ ಗಂಭೀರ ಅಪರಾಧ ಪ್ರಕರಣಗಳನ್ನು ಹೊಂದಿರುವ ವಿದೇಶದಲ್ಲಿರುವ ವ್ಯಕ್ತಿಯನ್ನು ದೂರದರ್ಶನ ಚಾನೆಲ್ ನಲ್ಲಿ ಚರ್ಚೆಗೆ ಆಹ್ವಾನಿಸಲಾಗಿದೆ. ಅದರಲ್ಲಿ ಆ ವ್ಯಕ್ತಿಯು ದೇಶದ ಸಾರ್ವಭೌಮತ್ವ, ಸಮಗ್ರತೆಗೆ ಹಾನಿಕಾರಕವಾದ ಹಲವಾರು ಕಾಮೆಂಟ್ ಗಳು ಹೇಳಿಕೆಗಳನ್ನು ನೀಡಿದ್ದಾರೆ ಎಂದು ಸಚಿವಾಲಯದ ಗಮನಕ್ಕೆ ಬಂದಿದೆ. ಭಾರತದ ಭದ್ರತೆ, ವಿದೇಶದೊಂದಿಗೆ ಭಾರತದ ಸ್ನೇಹ ಸಂಬಂಧಗಳು ಮತ್ತು ದೇಶದಲ್ಲಿ ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ತರುವ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಿದೆ.
ಈ ಮೇಲಿನಂತೆ ನಡೆದುಕೊಂಡರೇ, ಸಂವಿಧಾನದ 19 (2) ನೇ ವಿಧಿಯ ಅಡಿಯಲ್ಲಿ ವಿಧಿಸಲಾದ ಮತ್ತು ಸಿಟಿಎನ್ನ ಸೆಕ್ಷನ್ 20 ರ ಉಪ-ವಿಭಾಗ (2) ರ ಅಡಿಯಲ್ಲಿ ಉಲ್ಲೇಖಿಸಲಾದ ಸಮಂಜಸವಾದ ನಿರ್ಬಂಧಗಳನ್ನು ಪರಿಗಣಿಸಿ, ಗಂಭೀರ ಅಪರಾಧಗಳು / ಭಯೋತ್ಪಾದನೆಯ ಆರೋಪಗಳನ್ನು ಹೊಂದಿರುವವರು ಮತ್ತು ಕಾನೂನಿನಿಂದ ನಿಷೇಧಿಸಲ್ಪಟ್ಟ ಸಂಸ್ಥೆಗಳಿಗೆ ಸೇರಿದವರು ಅಂತ ಪರಿಗಣಿಸಿ, ಆ ವ್ಯಕ್ತಿಗಳ ವರದಿಗಳು / ಉಲ್ಲೇಖಗಳು ಮತ್ತು ಅಭಿಪ್ರಾಯಗಳು / ಕಾರ್ಯಸೂಚಿಗೆ ಯಾವುದೇ ವೇದಿಕೆಯನ್ನು ನೀಡದಂತೆ ದೂರದರ್ಶನ ಚಾನೆಲ್ಗಳಿಗೆ ಸೂಚಿಸಲಾಗಿದೆ ಕ್ರಮ ಕೈಗೊಳ್ಳಲಾಗುತ್ತದೆ ಅಂತ ಎಚ್ಚರಿಕೆ ನೀಡಿದೆ.