ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಜೆಸಿಐ ಶಿವಮೊಗ್ಗ ಭಾವನದ ವತಿಯಿಂದ ರಕ್ತದಾನ , ನೇತದಾನ ಹಾಗೂ ದೇಹ ದಾನ ಶಿಬಿರ

ಶಿವಮೊಗ್ಗ:  ಜೆಸಿಐ ಶಿವಮೊಗ್ಗ ಭಾವನದ ವತಿಯಿಂದ, ಶಂಕರ ಕಣ್ಣಿನ ಆಸ್ಪತ್ರೆ, ಸಂಜೀವಿನಿ ಬ್ಲಡ್ ಬ್ಯಾಂಕ್ ಹಾಗೂ ಶಿವಮೊಗ್ಗ ವೈದ್ಯಕೀಯ ಮಹಾವಿದ್ಯಾಲಯದ ಸಹಕಾರದೊಂದಿಗೆ  ಮಥುರಾ ಪ್ಯಾರಡೈಸ್ ಎದುರಲ್ಲಿರುವ ಪ್ರವಾಸಿ ಟ್ಯಾಕ್ಸಿ ಚಾಲಕರ ಸಂಘದ ಸದಸ್ಯರು ಹಾಗೂ  ಸಾರ್ವಜನಿಕರಿಗೆ  ರಕ್ತದಾನ ಶಿಬಿರ, ನೇತದಾನ ಶಿಬಿರ ಹಾಗೂ ದೇಹ ದಾನ ಶಿಬಿರವನ್ನು ಆಯೋಜಿಸಲಾಗಿತ್ತು.
 ಈ ಕಾರ್ಯಕ್ರಮದಲ್ಲಿ 200 ಕ್ಕೂ ಅಧಿಕ ಜನರು ಪಾಲ್ಗೊಂಡು ರಕ್ತದಾನ,ಕಣ್ಣಿನ ದಾನ, ದೇಹ ದಾನವನ್ನು  ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಾಡುವುದರ ಮೂಲಕ ಜೀವ ಉಳಿಸುವ ಹಾಗೂ ಇನ್ನೊಬ್ಬರಿಗೆ ಆರೋಗ್ಯವನ್ನು ಕೊಡುವ ರೀತಿಯಲ್ಲಿ  ಸಮಾಜ ಸೇವೆಯನ್ನು ಮತ್ತಷ್ಟು ಹೆಚ್ಚು ಮಾಡುವ ಪ್ರತಿಜ್ಞೆ ಮಾಡಿದರು.
 ಜೆ ಸಿ ಐ ಶಿವಮೊಗ್ಗದ ಅಧ್ಯಕ್ಷೆ ಪೂರ್ಣಿಮಾ ಸುನಿಲ್ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ  JCI ನ  ZP Jc ಅನುಷ್ ಗೌಡ, ಕೋ ಆರ್ಡಿನೇಟರ್ JC ಪ್ರದೀಪ್ ಶಂಕರ್ ಕಣ್ಣಿನ ಆಸ್ಪತ್ರೆಯ ಡಾಕ್ಟರ್ ವಿಶ್ವಾಸ್, ಸಂಜೀವಿನಿ ಬ್ಲಡ್ ಬ್ಯಾಂಕ್ ನ ದಿನಕರ್, ಶಿವಮೊಗ್ಗ ವೈದ್ಯಕೀಯ ಮಹಾವಿದ್ಯಾಲಯದ ಡಾಕ್ಟರ್ ರೇಖಾ,  ಟ್ಯಾಕ್ಸಿ ಚಾಲಕರ ಸಂಘದ ಅಧ್ಯಕ್ಷ BD ಗಣೇಶ್, ಕಾರ್ಯದರ್ಶಿ ರಾಘವೇಂದ್ರ, ಅವರು ಈ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ನಡೆಸಿಕೊಟ್ಟರು.
 ಈ ಸಂದರ್ಭದಲ್ಲಿ  ಸುಧೀರ್ ಮಲ್ಯ ಅರುಣ್ ಕುಮಾರ್ ಅವರು ದೇಹ ದಾನ ಮಾಡಿದ್ದು ತುಂಬಾ ವಿಶೇಷವಾಗಿತ್ತು.

Related posts

ಚಿನ್ನದ ಪದಕಕ್ಕೆ ಮುತ್ತಿಟ್ಟ ನೀರಜ್ ಚೋಪ್ರಾ: ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ಮೋದಿ ಅಭಿನಂದನೆ.

ಮೊರಾಕೊದಲ್ಲಿ ಪ್ರಬಲ ಭೂಕಂಪನದಿಂದ 296 ಮಂದಿ ಸಾವು: ಪ್ರಧಾನಿ ಮೋದಿ ಸಂತಾಪ.

ಅ.18(ನಾಳೆ) ಮಲ್ನಾಡ್ ಶೈರೆ ರೆಸಾರ್ಟ್‍ನ ಉದ್ಘಾಟನಾ ಸಮಾರಂಭ.