ಕನ್ನಡಿಗರ ಪ್ರಜಾನುಡಿ
ಪ್ರಧಾನ ಸುದ್ದಿಮುಖ್ಯಾಂಶಗಳುರಾಜಕೀಯರಾಜ್ಯ

ಡಿಕೆ ಶಿವಕುಮಾರ್  ನನಗಿಂತ ಹೆಚ್ಚು ಕೆಲಸ ಮಾಡುವ ವ್ಯಕ್ತಿ: ಅವರಲ್ಲಿ ಹುಂಬತನವಿದೆ- ಹೊಗಳಿದ ಬಿಜೆಪಿ ಮುಖಂಡ ವಿ.ಸೋಮಣ್ಣ.

ಬೆಂಗಳೂರು:  ಡಿಕೆ ಶಿವಕುಮಾರ್ ಗೆ ಹುಂಬತನವಿದೆ. ಡಿಕೆಶಿ ಯಾರನ್ನೂ ಟಾರ್ಗೆಟ್ ಮಾಡುವ ವ್ಯಕ್ತಿ ಅಲ್ಲ.  ಅವರು ನನಗಿಂತ ಹೆಚ್ಚು ಕೆಲಸ ಮಾಡುವ ವ್ಯಕ್ತಿ ಎಂದು ಡಿಕೆ ಶಿವಕುಮಾರ್ ಪರ ಮಾಜಿ ಸಚಿವ ವಿ.ಸೋಮಣ್ಣ ಬ್ಯಾಟ್ ಬೀಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಸಚಿವ ವಿ.ಸೋಮಣ್ಣ, ಗುತ್ತಿಗೆದಾರರ ಬಿಲ್ ಹಿಡಿದುಕೊಳ್ಳುವುದು ಬೇಡ. ಡಿ.ಕೆ.ಶಿವಕುಮಾರ್​​ ನನಗೆ ಬೇಕಾದಂತಹ ವ್ಯಕ್ತಿ. ಹಿಂದೆ ಡಿ.ಕೆ.ಶಿವಕುಮಾರ್ ಸಿಎಂ ಆಗಲಿ ಅಂತಾ ನಾನೇ ಹೇಳಿದ್ದೆ. ಆದರೆ ರಾಜಕೀಯ ಬೇರೆ, ಡಿಕೆ ಶಿವಕುಮಾರ್ ರನ್ನು ಬೇರೆಯವರಿಗೆ ಹೋಲಿಸಲ್ಲ. ಗುತ್ತಿಗೆದಾರರ ಕಾಮಗಾರಿ ಬಿಲ್​​​​​ ತಡೆಹಿಡಿಯುವುದು ಬೇಡ ಎಂದರು.

ಕಾಮಗಾರಿಗಳ ತನಿಖೆ ಬಳಿಕ ಬಿಲ್ ಪಾವತಿ ಎಂಬ ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆಗೆ ಟಾಂಗ್ ನೀಡಿದ ವಿ.ಸೋಮಣ್ಣ,  ನನ್ನ ಕ್ಷೇತ್ರದಲ್ಲಿ ನಿಮ್ಮ ಶಾಸಕರೇ ಇದ್ದಾರೆ ತನಿಖೆ ನೆಪದಲ್ಲಿ ಯಾರಿಗೂ ತೊಂದರೆಕೊಡಬೇಡಿ.  ಎಲ್ಲಾ ಗುತ್ತಿದಾರರು ಕೆಟ್ಟವರು ಅಂದ್ರೆ ಹೇಗೆ. ಎಲ್ಲಾ ಗುತ್ತಿಗೆದಾರರು ಬಿಜೆಪಿಯವರು ಎಂದ್ರೆ ಹೇಗೆ..? ತನಿಖೆಗೆ ನನ್ನ ತಕರಾರು ಇಲ್ಲ ನನ್ನ ಕ್ಷೇತ್ರದಿಂದಲೇ ತನಿಖೆ ಶುರುಮಾಡಿ ಎಂದರು.

Related posts

 ಸಿಎಂ ನಿವಾಸದ ಬಳಿ ಪಿಎಸ್ ಐ ಹುದ್ದೆ ಪರೀಕ್ಷಾರ್ಥಿಗಳಿಂದ ಪ್ರತಿಭಟನೆ.

ಹುಲಿ ಉಗುರು ಪ್ರಕರಣ: ನಟ ದರ್ಶನ್, ಜಗ್ಗೇಶ್ ಹಾಗೂ ರಾಕ್ ಲೈನ್ ವೆಂಕಟೇಶ್ ನಿವಾಸದಲ್ಲಿ  ಅರಣ್ಯಾಧಿಕಾರಿಗಳಿಂದ  ಪರಿಶೀಲನೆ

ನೆಹರೂ ಸ್ಮಾರಕ ಮ್ಯೂಸಿಯಂ ಇನ್ಮುಂದೆ ಪ್ರಧಾನ ಮಂತ್ರಿ ಮ್ಯೂಸಿಯಂ…