ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಭಾರತವನ್ನು ವಿಶ್ವಗುರು ಸ್ಥಾನಕ್ಕೆ ಏರಿಸುವ ಶಕ್ತಿ ಈ ದೇಶದ ಮಹಿಳೆಯರಲ್ಲಿದೆ-ಲೇಖಕಿ ಸಿನು ಜೋಸ್

ಶಿವಮೊಗ್ಗ : ಪರಂಪರಾಗತ ಜ್ಞಾನವನ್ನು ಪಸರಿಸುವ ಮೂಲಕ ಭಾರತವನ್ನು ವಿಶ್ವಗುರು ಸ್ಥಾನಕ್ಕೆ ಏರಿಸುವ ಶಕ್ತಿ ಈ ದೇಶದ ಮಹಿಳೆಯರಲ್ಲಿದೆ ಎಂದು ಲೇಖಕಿ ಹಾಗೂ ಸಾಮಾಜಿಕ ಕಾರ್ಯಕರ್ತೆ ಬೆಂಗಳೂರಿನ ಸಿನು ಜೋಸ್ ಹೇಳಿದರು.

ಮಹಿಳಾ ಸಮನ್ವಯವು ವಿಕಾಸ ಟ್ರಸ್ಟ್ ಸಹಯೋಗದಲ್ಲಿ ಭಾನುವಾರ ಇಲ್ಲಿನ ಶುಭಮಂಗಳ ಸಮುದಾಯ ಭವನದಲ್ಲಿ ಆಯೋಜಿಸಿದ್ದ ನಾರೀ ಶಕ್ತಿ ಸಂಗಮ ಮಹಿಳಾ ಸಮ್ಮೇಳನದಲ್ಲಿ ಮುಖ್ಯ ಭಾಷಣ ಮಾಡಿ, ಸ್ತ್ರೀ ಮೂಲಂ ಸರ್ವ ಧಮರ್ಂ ಎಂದು ಮಹಿಳೆಯನ್ನು ಬಣ್ಣಿಸಲಾಗಿದೆ. ಸ್ತ್ರೀಯರಲ್ಲಿ ದೈವೀ ಶಕ್ತಿ ಇದೆ. ಅದನ್ನು ಸಿದ್ಧಿಸಿಕೊಂಡು ಮುನ್ನಡೆಯಬೇಕಿದೆ ಎಂದರು.
ಭಾರತೀಯ ಸ್ತ್ರೀಯರು ಗರ್ಭರ್ಕಶ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅವರಿಗೆ ಏನೂ ಗೊತ್ತಿಲ್ಲ ಎಂದು ವಿದೇಶಿಯರು ಜರಿಯುತ್ತಿದ್ದರು. ಆದರೆ ಭಾರತೀಯ ಮಹಿಳೆಯರಲ್ಲಿ ಇರುವಷ್ಟು ಆರೋಗ್ಯ, ಚೈತನ್ಯ ವಿದೇಶಿಯರಲ್ಲಿ ಕಾಣಸಿಗುವುದಿಲ್ಲ. ಭಾರತದಲ್ಲಿ ಶೇ.20 ರಷ್ಟು ಮಹಿಳೆಯರಲ್ಲಿ ಗರ್ಭರ್ಕಶ ಸಮಸ್ಯೆ ಇದೆ.ಯುಕೆ ನಲ್ಲಿ ಶೇ.50 ರಷ್ಟು ಹಾಗೂ ಯುಎಸ್‍ಎನಲ್ಲಿ ಶೇ.40 ರಷ್ಟು ಸಮಸ್ಯೆ ಇದೆ. ಕೆಲವು ದೇಶಗಳಲ್ಲಿ ಗರ್ಭರ್ಕಶವನ್ನೇ ತೆಗೆಸಿಕೊಳ್ಳಲಾಗುತ್ತಿದೆ ಎಂದರು.
ಋತು ಚಕ್ರದ ಅವಧಿಯಲ್ಲಿ ಭಾರತೀಯ ಮಹಿಳೆಯರು ಅನುಸರಿಸುತ್ತಿದ್ದ ನಿಯಮಗಳ ಬಗ್ಗೆ ಅಧ್ಯಯನ ನಡೆದಿದೆ. ಈ ನಿಯಮಗಳಿಂದ, ಸೇವಿಸುವ ಆಹಾರದಿಂದ ಆರೋಗ್ಯ ವೃದ್ಧಿಯಾಗುತ್ತದೆ ಎಂಬುದು ಅಧ್ಯಯನದಿಂದ ದೃಢಪಟ್ಟಿವೆ. ಈ ನಿಯಮಗಳನ್ನು ವಿದೇಶಿಯರು ಇಂದು ಪಾಲಿಸುತ್ತಿದ್ದಾರೆ. ಇದು ವಿಶ್ವಕ್ಕೆ ಭಾರತ ಕೊಡುವ ಜ್ಞಾನ ಎಂದರು.
ಕುಂಕುಮ ಇಡುವುದರಲ್ಲಿಯೂ ವೈಜ್ಞಾನಿಕತೆ ಇದೆ. ನಾಸಿಕ ಮರ್ಮಸ್ಥಾನದಲ್ಲಿ ಕುಂಕುಮ ಇಟ್ಟುಕೊಳ್ಳುವುದರಿಂದ ಹೃದಯದಲ್ಲಿ ನೆಗೆಟಿವ್ ವೈಬ್ರೇಶನ್ ದೂರವಾಗುತ್ತದೆ. ಇದರಿಂದ ಆರೋಗ್ಯ ವೃದ್ಧಿಯಾಗುತ್ತದೆ ಎಂದರು.
ಹಿಂದೆ ಮಹಿಳೆಯರು ಕಚ್ಚೆ ಸೀರೆ ಧರಿಸುತ್ತಿದ್ದರು. ಇದರಲ್ಲಿಯೂ ಕೂಡ ವೈಜ್ಞಾನಿಕತೆ ಇದೆ. ಸೊಂಟಕ್ಕೆ ಸೀರೆಯನ್ನು ಹಿತವಾಗಿ ಕಟ್ಟಿಕೊಳ್ಳುವುದರಿಂದ ಮೂಲಾಧಾರ ಚಕ್ರಕ್ಕೆ ಶಕ್ತಿ ಬರುತ್ತದೆ. ಆದರೆ ಇಂದು ಸ್ಕರ್ಟ್‍ನಂತೆ ಸೀರೆ ಧರಿಸಲಾಗುತ್ತದೆ. ಬಳೆ ಅಕ್ಯೂಪಂಚರ್ ಕೆಲಸ ಮಾಡುತ್ತದೆ. ಮಲ್ಲಿಗೆ ಮುಡಿಯುವುದರಿಂದ ಪಿತ್ತಕಾರಕ ಅಂಶ ಕ್ಷೀಣಿಸುತ್ತದೆ. ಮುಡಿದ ಮಲ್ಲಿಗೆ ಬೇಗನೆ ಬಾಡಿದೆ ಎಂದರೆ ದೇಹದಲ್ಲಿನ ಪಿತ್ತ ಕಡಿಮೆಯಾಗಿದೆ ಎಂದರ್ಥ. ಇವೆಲ್ಲವೂ ಭಾರತೀಯ ನಾರಿಯರು ಪರಂಪಾಗತವಾಗಿ ಕಂಡುಕೊಂಡ ಜ್ಞಾನ. ಇದನ್ನು ವಿಶ್ವಕ್ಕೆ ತಿಳಿಸಿ ವಿಶ್ವಗುರುವಾಗಬಹುದೆಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ಕುಮುದ ಸುಶೀಲಪ್ಪ, ನಮ್ಮಲ್ಲಿ ಛಲ, ಗುರಿ ಇದ್ದರೆ ಏನನ್ನಾದರೂ ಸಾಸಬಹುದಾಗಿದೆ. ಮೊದಲು ಆಸಕ್ತಿ ಮುಖ್ಯ. ಪ್ರತಿಯೊಬ್ಬ ಮಹಿಳೆಯರು ಕೂಡ ತಮ್ಮ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಂಕಲ್ಪ ಮಾಡಬೇಕೆಂದು ಹೇಳಿದರು.
ಹಕ್ಕಿಪಿಕ್ಕಿ ಸಮುದಾಯದಲ್ಲಿ ನಾನೇ ಮೊದಲ ಇಂಜಿನಿಯರ್. ಹೀಗಾಗಿ ನಮ್ಮ ಸಮುದಾಯದ ಬಗ್ಗೆ ಸಾಕಷ್ಟು ಕೆಲಸ ಮಾಡಿದ್ದೇನೆ. ಈಗಲೂ ಮಾಡುತ್ತಿದ್ದೇನೆ. ಹಕ್ಕಿಪಿಕ್ಕಿ ಸಮುದಾಯದವಳೆಂದು ಹೇಳಿಕೊಳ್ಳಲು ನನಗೆ ಯಾವುದೇ ಅಂಜಿಕೆ ಇಲ್ಲಘಿ. ವನವಾಸಿ ಕಲ್ಯಾಣ ಸಂಸ್ಥೆಯಲ್ಲಿಯೂ ತೊಡಗಿಸಿಕೊಂಡಿರುವುದಾಗಿ ಹೇಳಿದರು.
ವನವಾಸಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಿದರೆ ಅಲ್ಲಿ ಮಕ್ಕಳು ಇರುತ್ತಿಲ್ಲ. ತಂದೆ,ತಾಯಂದಿರ ಬಳಿಗೆ ಬಂದು ಓದು ನಿಲ್ಲಿಸುತ್ತಿದ್ದಾರೆ. ಕೆಲವು ಕಡೆಗಳಲ್ಲಿ ಹಕ್ಕಿಪಿಕ್ಕಿಗಳ ಮತಾಂತರ ಕೂಡ ಆಗಿದೆ. ಅಂತಹವರನ್ನು ಮರಳಿ ಕರೆತರುವ ಜವಾಬ್ದಾರಿ ಕೂಡ ನನ್ನದಾಗಿದೆ ಎಂದರು.
ಈ ಸಮುದಾಯದಲ್ಲಿ ಅಪಾರ ಪಾಂಡಿತ್ಯವಿದೆ. ಹಾವು ಕಚ್ಚಿದವರನ್ನು, ಚೇಳು ಕುಟುಕಿದವರನ್ನು, ಹುಲಿಯ ಬಾಯಿಗೆ ಸಿಕ್ಕವರನ್ನು ಬದುಕಿಸುವ ಮಂತ್ರ ಶಕ್ತಿ ಹಕ್ಕಿಪಿಕ್ಕಿಯವರಲ್ಲಿದೆ. ಇದನ್ನು ಉಳಿಸಿ ಮುಂದಿನ ತಲೆಮಾರಿಗೆ ಕಲಿಸುವ ಉದ್ದೇಶವೂ ಇದೆ ಎಂದರು.
ಉಪಸ್ಥಿತರಿದ್ದ ವಿಕಾಸ ಟ್ರಸ್ಟ್ ಅಧ್ಯಕ್ಷ ರಂಗನಾಥ ಬಿ.ಎ. ಮಾತನಾಡಿ, ಸ್ತ್ರೀ ಶಕ್ತಿಯನ್ನು ಸಮಾಜದ ಅಭಿವೃದ್ಧಿಯಲ್ಲಿ ತೊಡಗಿಸಬೇಕೆಂಬ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಸಂಪ್ರದಾಯ ಹಾಗೂ ಪದ್ಧತಿಗಳನ್ನು ಪ್ರತೀ ಮನೆಮನೆಗಳಿಗೂ ತಲುಪಿಸುವ ಉದ್ದೇಶವಿದೆ ಎಂದರು.
ಪ್ರಸೂತಿ ಮತ್ತು ಸೀ ರೋಗ ತಜ್ಞೆ ಡಾ.ವೀಣಾ ಭಟ್ ಅಧ್ಯಕ್ಷತೆ ವಹಿಸಿದ್ದರು. ಸಮ್ಮೇಳನದ ಸಹಸಂಚಾಲಕಿ ಶ್ರೀರಂಜನಿ ದತ್ತಾತ್ರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ವಿವಿಧ ಪ್ರದರ್ಶಿನಿಗಳನ್ನು ಏರ್ಪಡಿಸಲಾಗಿತ್ತು.

Related posts

ಮೊದಲ ಹಂತದ ಬೆಳೆ ಸಮೀಕ್ಷೆ:  62 ತಾಲೂಕುಗಳು ಬರ ಪಟ್ಟಿಗೆ ಸೇರ್ಪಡೆ- ಸಚಿವ ಕೃಷ್ಣಬೈರೇಗೌಡ.

ಕಟೀಲ್ : ವಿಶ್ವ ಬಂಟರ ಸಾಂಸ್ಕೃತಿಕ ವೈಭವದ ಕರಪತ್ರ ಬಿಡುಗಡೆ: ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ಸಮಾಜಮುಖಿ ಕೆಲಸ: ಶ್ರೀ ಲಕ್ಷ್ಮೀನಾರಾಯಣ ಅಸ್ರಣ್ಣ…..

ಟ್ವಿಟ್ಟರ್ ಬಳಕೆದಾರರೇ ಗಮನಿಸಿ : ಇನ್ಮುಂದೆ ಸಿಗುತ್ತೆ ಆಡಿಯೋ ವಿಡಿಯೋ ಕಾಲ್ ಸೌಲಭ್ಯ..