ಶಿವಮೊಗ್ಗ: ನಗರದ ನೆಹರು ಕ್ರೀಡಾಂಗಣ ಹಾಗೂ ಒಳಾಂಗಣ ಕ್ರೀಡಾಂಗಣದಲ್ಲಿ ಎರಡು ದಿನಗಳ ಕಾಲ ಆಯೋಜಿಸಿದ್ದ ರೋಟರಿ ವಲಯ ಮಟ್ಟದ “ಪೂರ್ವಚಂದ್ರ” ಕ್ರೀಡಾಕೂಟದಲ್ಲಿ ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಸಂಸ್ಥೆಯು ವಲಯ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಸಂಸ್ಥೆ ವತಿಯಿಂದ ಪ್ರತಿನಿಧಿಸಿದ್ದ ರವಿ ಕೊಟೋಜಿ ಹಾಗೂ ಆರ್.ಅಶ್ವಿನ್ ಅವರು ಶಟಲ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಪ್ರಥಮ, ರಮೇಶ್.ಎನ್ ಹಾಗೂ ವಿರೂಪಾಕ್ಷ ದ್ವಿತೀಯ ಸ್ಥಾನ ಗಳಿಸಿರುತ್ತಾರೆ.
ಚೆಸ್ ಸ್ಪರ್ಧೆಯಲ್ಲಿ ನಟೇಶ್ ಅವರು ಪ್ರಥಮ ಸ್ಥಾನ, ಕೇರಂ ಸ್ಪರ್ಧೆಯಲ್ಲಿ ಧರ್ಮೇಂದ್ರ ಸಿಂಗ್ ಪ್ರಥಮ ಸ್ಥಾನ ಗಳಿಸಿದ್ದಾರೆ. ಆನ್ಸ್ ವಿಭಾಗದಲ್ಲಿ ಸೀಮಾ ಶಿವರಾಜ್ ಅವರು ಪ್ರಥಮ ಸ್ಥಾನ, 40 ವರ್ಷದೊಳಗಿನ ವಿಭಾಗದಲ್ಲಿ ಸಿಂಗಲ್ ಶಟಲ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ರಾಜೇಶ್ವರಿಸಿಂಗ್ ಪ್ರಥಮ ಸ್ಥಾನ, ಡಬಲ್ಸ್ ಸ್ಪರ್ಧೆಯಲ್ಲಿ ರಾಜೇಶ್ವರಿ ಸಿಂಗ್ ಹಾಗೂ ವಿಜಯ ಪ್ರಕಾಶ್ ಪ್ರಥಮ ಸ್ಥಾನ ಗಳಿಸಿದ್ದಾರೆ.
40 ವರ್ಷ ಮೇಲ್ಪಟ್ಟ ವಿಭಾಗದ ಶಟಲ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಸಿಂಗಲ್ ನಲ್ಲಿ ವಿನುತ ಅಶ್ವಿನ್ ಅವರು ಪ್ರಥಮ ಸ್ಥಾನ ಹಾಗೂ ಡಬಲ್ಸ್ ನಲ್ಲಿ ವಿನುತ ಅಶ್ವಿನ್ ಹಾಗೂ ಸೀಮಾ ಶಿವರಾಜ್ ಪ್ರಥಮ ಸ್ಥಾನ ಗಳಿಸಿದ್ದಾರೆ. 18 ವರ್ಷದೊಳಗಿನ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಅಮೂಲ್ಯ ಚಿದಾನಂದ ಅವರು ಪ್ರಥಮ ಸ್ಥಾನ ಗಳಿಸಿರುತ್ತಾರೆ.
ವಿಜೇತ ಕ್ರೀಡಾಪಟುಗಳಿಗೆ ವಲಯ ಸಹಾಯಕ ಗವರ್ನರ್ ರವಿ ಕೋಟೋಜಿ ಹಾಗೂ ರಾಜೇಂದ್ರ ಪ್ರಸಾದ್ ಅವರು ಬಹುಮಾನ, ಪಾರಿತೋಷಕ ವಿತರಣೆ ಮಾಡಿದರು. ಡಾ. ಧನಂಜಯ್ ಸರ್ಜಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು.
ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಅಧ್ಯಕ್ಷ ಎಚ್.ಪಿ.ಶಿವರಾಜ್ ಹಾಗೂ ವಲಯ ಮಟ್ಟದ ಕ್ರೀಡಾ ಸಂಚಾಲಕ ಗಣೇಶ ಎಂ.ಅಂಗಡಿ, ವಲಯ ಸೇನಾನಿ ಧರ್ಮೇಂದ್ರ ಸಿಂಗ್, ಜಿಲ್ಲಾ ಮಾಜಿ ಗವರ್ನರ್ ಜಿ.ಎನ್.ಪ್ರಕಾಶ್ ಹಾಗೂ ನಟೇಶ್.ಕೆಜಿ., ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ನ ಎಲ್ಲ ಸದಸ್ಯರು ಉಪಸ್ಥಿತರಿದ್ದರು.
next post