ಶಿವಮೊಗ್ಗ: ನಗರದ ಅಂಬೇಡ್ಕರ್ ಭವನದಲ್ಲಿ ಭಾನುವಾರ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಸಂಸ್ಥೆ ವತಿಯಿಂದ ಪ್ರಾಂತೀಯ ಸಮ್ಮೇಳನ ಭಾವನೋತ್ಸವ ಎಂಬ ವಿಶೇಷ ಕಾರ್ಯಕ್ರಮ ನಡೆಯಿತು.
ಸಮ್ಮೇಳನವನ್ನು ಸಿಎಸ್ಎಲ್ನ ರಾಷ್ಟ್ರೀಯ ಅಧ್ಯಕ್ಷ ಪ್ರೊ. ವರ್ಗಿಸ್ ವೈದ್ಯನ್ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನವೀನ್ ಅಮಿನ್ ವಹಿಸಿದ್ದರು. ಎಸ್ಸಿಐನ ಶಿವಮೊಗ್ಗ ಘಟಕದ ಅಧ್ಯಕ್ಷರಾದ ಸುರೇಖಾ ಮುರಳೀಧರ್, ರಾಷ್ಟ್ರೀಯ ಸಂಚಾಲಕಿ ಪುಷ್ಪಾ ಎಸ್. ಶೆಟ್ಟಿ, ಪ್ರಮುಖರಾದ ಭರತ್ದಾಸ್, ಹರಿಪ್ರಸಾದ್ ರೈ, ಡಾ. ಅರವಿಂದ ರಾವ್, ಜೋಸ್ ಖಂಡೋತ್, ರಾಜೇಶ್ ವೈಭವ್, ರೆಹಮಾನ್, ಚಿತ್ರಾಕುಮಾರ್, ರತ್ನಾ ಲಕ್ಷ್ಮೀನಾರಾಯಣ್, ಕವಿತಾ ಎಸ್.ರಾವ್, ಮೃದುಲಾ ಮಂಜುನಾಥ್ ಮತ್ತಿತರರಿದ್ದರು.
previous post