ಬೆಂಗಳೂರು,: ಮಹಿಳೆಗೆ ನಟ ದರ್ಶನ್ ಅವರ ಮನೆಯ ನಾಯಿ ಕಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಂದು ವಿಚಾರಣೆಗೆ ಆರ್ ಆರ್ ನಗರ ಪೊಲೀಸ್ ಠಾಣೆಗೆ ಹಾಜರಾಗಿದ್ದಾರೆ.
ಪ್ರಕರಣ ಸಂಬಂದ ಮೂರು ದಿನಗಳ ಒಳಗೆ ವಿಚಾರಣೆಗೆ ಹಾಜರಾಗಬೇಕು. ಸಿಸಿ ಟಿವಿ ವಿಡಿಯೋ ಸಮೇತ ಹಾಜರಾಗಬೇಕು ಎಂದು ಪೊಲೀಸರು ನಟ ದರ್ಶನ್ ಗೆ ನೋಟಿಸ್ ನೀಡಿದ್ದರು.
ನೋಟಿಸ್ ನೀಡಿದ ಹಿನ್ನೆಲೆ ಇಂದು ನಟ ದರ್ಶನ್ ವಿಚಾರಣೆಗೆ ಆರ್ ಆರ್ ನಗರ ಪೊಲೀಸ್ ಠಾಣೆಗ ಹಾಜರಾಗಿದ್ದು ಪೊಲೀಸರು ಹೇಳಿಕೆ ದಾಕಲು ಮಾಡಿಕೊಳ್ಳಲಿದ್ದಾರೆ.