ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ವಿದ್ಯಾರ್ಥಿಗಳ ಜೊತೆ ಶಿಕ್ಷಕರು ಆಪ್ತ ಸಮಾಲೋಚಕರಾಗಿ-ಖ್ಯಾತ ಮನಶಾಸ್ತ್ರಜ್ಞ ಡಾ.ಪ್ರೀತಿ ಶಾನಭಾಗ.

ಶಿವಮೊಗ್ಗ : ಮಕ್ಕಳು ಶಾಲೆಯಲ್ಲಿಯೇ ಹೆಚ್ಚು ಸಮಯ ಕಳೆಯುವುದರಿಂದ ಶಿಕ್ಷಕರು ಮಕ್ಕಳ ಸಮಸ್ಯೆಗಳನ್ನು ಅರಿತು ಪರಿಹರಿಸುವ ಆಪ್ತ ಸಮಾಲೋಚಕರಾಗಿ ಎಂದು ಖ್ಯಾತ ಮನಶಾಸ್ತ್ರಜ್ಞ ಡಾ.ಪ್ರೀತಿ ಶಾನಭಾಗ ಕಿವಿಮಾತು ಹೇಳಿದರು.
ಬುಧವಾರ ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಕುವೆಂಪು ಶಿಕ್ಷಣ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ್ದ ಡಾ. ಕೆ. ಎ. ಅಶೋಕ ಪೈ ಅವರು ‌ನೀಡಿದ ಕಟೀಲು ಅಪ್ಪು ಪೈ ಮತ್ತು ವಿನೋಧಿನಿ ಪೈ ದತ್ತಿಯ ಆಶಯದಂತೆ ಮಾನಸಿಕ ಆರೋಗ್ಯ-ಶಿಕ್ಷಕರ ಪಾತ್ರ ವಿಷಯ ಕುರಿತು ಮಾತನಾಡಿದರು.
ಹಿಂದಿನಂತೆ ಮಕ್ಕಳು ನಿತ್ಯ ಮನೆಯಲ್ಲಿರುವ ಸಮಯಕ್ಕಿಂತ ಶಾಲೆಯಲ್ಲಿರುವ ಸಮಯ ಹೆಚ್ಚು. ಮಕ್ಕಳ ಕುರಿತು ತಂದೆ ತಾಯಿಗಳಿಗೆ ತಿಳಿಯದ ಅನೇಕ ವರ್ತನೆಗಳು ಶಿಕ್ಷಕರಿಗೆ ಅರಿವಾಗಿರುತ್ತದೆ. ಪೋಷಕರ ಗಮನಕ್ಕೆ ಬರುವಾಗ ಮಗು ತೊಂದರೆಗೆ ಸಿಲುಕಿ ಬಿಟ್ಟಿರುತ್ತದೆ. ಅಂತಹ ಅನಾಹುತಗಳನ್ನು ತಡೆಯುವ ಶಕ್ತಿ ಶಿಕ್ಷಕರಿಗಿದೆ.
 ಶಿಕ್ಷಕ ವೃತ್ತಿ ಮಾನಸಿಕ ಒತ್ತಡದಿಂದ ಕೂಡಿದ್ದು, ಸಮರ್ಪಕವಾಗಿ ನಿರ್ವಹಿಸಿಕೊಳ್ಳಬೇಕಿದೆ. ಶಿಕ್ಷಕರು ಮಕ್ಕಳ ವ್ಯಕ್ತಿತ್ವ ವಿಕಸನ, ಫಲಿತಾಂಶ, ಓದು ಎಲ್ಲದರ ಕುರಿತಾಗಿ ಕಾಳಜಿ ಹೊಂದಿದ್ದಾರೆ. ಮಗುವನ್ನು ಹೀಗೆಯೆ ಬೆಳಸಬೇಕು ಎಂಬ ಮಾದರಿಗಳಿಲ್ಲ. ನಮ್ಮ ಪೋಷಕರು ನಮಗೆ ಬೆಳೆಸಿದ ಪರಿಯೇ ನಮಗೆ ನಿಜವಾದ ಮಾದರಿ ಎಂದು ಹೇಳಿದರು.
ಶಿಕ್ಷಕರು ತಮ್ಮ ಅರಿವನ್ನು ಬಂಡವಾಳ ಮಾಡಿಕೊಳ್ಳಬೇಕು. ಓದು ಮತ್ತು ತಿಳುವಳಿಕೆಗಳನ್ನು ಪಡೆಯುವುದು ನಿಲ್ಲಿಸಬಾರದು. ಪಠ್ಯದ ವಿಷಯದ ಜೊತೆಗೆ ಇತರೆ ಪೂರಕ ಮಾಹಿತಿಯ ಅರಿವು ಅಗತ್ಯ. ಇದರಿಂದ ವೃತ್ತಿಯಲ್ಲಿ ಯಶಸ್ಸುಗಳಿಸಲು ಸಾಧ್ಯ ಎಂದು ವಿವರಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷರಾದ ಡಿ.ಮಂಜುನಾಥ ಮಾತನಾಡಿ, ಕನ್ನಡ ಭಾಷೆ ಶ್ರೀಮಂತವಾಗಿದೆ. ಅದನ್ನು ಸರಿಯಾಗಿ ಕಲಿಯದೆ ಆತ್ಮವಂಚನೆ ಮಾಡಿಕೊಳ್ಳುವುದು ಸರಿಯಲ್ಲ. ಎಲ್ಲಾ ಹಂತಗಳಲ್ಲಿ ಕನ್ನಡ ಬಳಸುವ ಬದ್ಧತೆ ನಮ್ಮದಾಗಬೇಕು ಎಂದು ಹೇಳಿದರು.
ಜಿಲ್ಲಾ ಒಕ್ಕಲಿಗರ ಸಂಘದ ಮಾಜಿ ಅಧ್ಯಕ್ಷರಾದ ಶ್ರೀಕಾಂತ್ ಎನ್. ಹೆಚ್, ಕೋಶಾಧ್ಯಕ್ಷರಾದ ಟಿ.ಪಿ. ನಾಗರಾಜ್ ಉಪಸ್ಥಿತರಿದ್ದರು. ಕಾಲೇಜು ಪ್ರಾಂಶುಪಾಲರಾದ ಡಾ.ಜಿ. ಮಧು ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ಪ್ರಶಿಕ್ಷಣಾರ್ಥಿಗಳು ವಿವಿಧ ಕನ್ನಡ ಭಾವಗೀತೆಗಳನ್ನು ‌ಹಾಡಿದರು.

Related posts

ಸಂಘಟನೆ ಕೊರತೆಯಿಂದ ರೈತರು ಶೋಷಣೆಗೆ ಗುರಿಯಾಗುತ್ತಿದ್ದಾರೆ : ನಬಾರ್ಡ್ ಕಾರ್ಯನಿರ್ವಾಹಕ ವ್ಯವಸ್ಥಾಪಕ ಟಿ. ರಮೇಶ್

TOD News

ಹಿರಿಯ ನಟಿ ಲೀಲಾವತಿ ನಿವಾಸಕ್ಕೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ ನಟ ಶಿವರಾಜ್ ಕುಮಾರ್ ದಂಪತಿ.

ಎಲ್ಲಾ ಎಟಿಎಂ ಅವರದ್ದೇ.:  ಪೋಸ್ಟರ್ ಬಿಡುಗಡೆ ಮಾಡಿದ್ದ ಬಿಜೆಪಿಗೆ ಡಿಸಿಎಂ ಡಿಕೆ ಶಿವಕುಮಾರ್ ತಿರುಗೇಟು.