ಶಿವಮೊಗ್ಗ: ನಗರದ ಹೊಸಮನೆ ಬಡಾವಣೆಯ ಡಾ. ಬಿ.ಆರ್. ಅಂಬೇಡ್ಕರ್ ಸಮುದಾಯ ಭವನದ ಹತ್ತಿರವಿರುವ ಅರಳಿಮರ ಶ್ರೀ ಮಾರಿಕಾಂಬ ದೇವಾಲಯದ ಮುಂಭಾಗದಲ್ಲಿ ಮಹಾನಗರ ಪಾಲಿಕೆಯ ಅನುದಾನದಲ್ಲಿ ನಿರ್ಮಿಸಲಾಗಿರುವ ಡಾ. ಬಾಬು ಜಗಜೀವನ್ ರಾಮ್ ಸಭಾಂಗಣದ ಉದ್ಘಾಟನೆಯನ್ನು ಇಂದು ಬಡಾವಣೆ ಹಿರಿಯರು ಹಾಗೂ ವಿಧಾನ ಪರಿಷತ್ತಿನ ಮಾಜಿ ಸದಸ್ಯರಾದ ಆರ್.ಪ್ರಸನ್ಕುಮಾರ್ ನೆರವೇರಿಸಿದರು.
ನÀಂತರ ಮಾತನಾಡಿದ ಅವರು, ಈಗಾಗಲೇ ಹೊಸಮನೆ ಬಡಾವಣೆಯ ಹಲವು ಜ್ವಲಂತ ಸಮಸ್ಯೆಗಳಾದ ರಾಜಕಾಲುವೆ ದುರಸ್ತಿ ಕಾಮಗಾರಿ, ಕನ್ಸರ್ವೆನ್ಸಿ ಅಭಿವೃದ್ಧಿ, ರಸ್ತೆ, ಬೀದಿ ದೀಪದ ಸೇರಿದಂತೆ ಹಲವು ಕಾಮಗಾರಿಗಳನ್ನು ಸ್ಥಳೀಯ ಪಾಲಿಕೆ ಸದಸ್ಯರಾದ ರೇಖಾರಂಗನಾಥ್ ತಮ್ಮ ಪಾಲಿಕೆಯ ಆಡಳಿತ ಅವಧಿಯಲ್ಲಿ ಸಂಪೂರ್ಣಗೊಳಿಸುವ ಮುಖಾಂತರ ಹೊಸಮನೆ ಬಡಾವಣೆಯನ್ನು ಸ್ಮಾರ್ಟ್ ಬಡಾವಣೆ ಮಾಡುವ ದಿಟ್ಟಿನಲ್ಲಿ ಕಾರ್ಯನಿರ್ವಹಿಸಿದ್ದಾರೆ ಎಂದರು.
ಜೊತೆಗೆ ಬಡಾವಣೆಯಲ್ಲಿರುವ ಡಾ. ಬಿ.ಆರ್ .ಅಂಬೇಡ್ಕರ್ ಸಮುದಾಯ ಭವನ ಸೇರಿದಂತೆ ಇಂದು ಉದ್ಘಾಟನೆಗೊಂಡ ಡಾ. ಬಾಬು ಜಗಜೀವನ್ರಾಮ್ ಸಭಾಂಗಣ ಈ ರೀತಿ ಹಲವು ಮಹನೀಯರ ಹೆಸರುಗಳಲ್ಲಿ ಸಭಾಂಗಣಗಳನ್ನು ನಿರ್ಮಾಣ ಮಾಡಿ ಬಡಾವಣೆಯ ನಾಗರಿಕರಿಗೆ ಕಾರ್ಯಕ್ರಮ ನೆರವೇರಿಸಲು ಅನುವು ಮಾಡಿಕೊಟ್ಟಿದ್ದಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಾಲಿಕೆ ಸದಸ್ಯೆ ರೇಖಾ ರಂಗನಾಥ್ ವಹಿಸಿದ್ದರು. ಈ ಸಂದರ್ಭದಲ್ಲಿ ಯುವ ಮುಖಂಡರಾದ ಕೆ. ರಂಗನಾಥ್, ಬಡಾವಣೆಯ ಪ್ರಮುಖರಾದ ನರಸಿಂಹ ಮೂರ್ತಿ, ರವಿ, ಆನಂದ ಮೂರ್ತಿ, ರಾಮ್ಕುಮಾರ್, ಅನುಪ್ , ಸುನಿಲ್, ಚಂದ್ರು ಗೆಡ್ಡೆ , ನಾಗರಾಜ್ , ಚೌಡಪ್ಪ, ದೀಪು, ಮಧು ಅಪ್ಪಿ , ಜಿಲ್ಲಾ ಯುವ ಕಾಂಗ್ರೆಸ್ ನ ಅಧ್ಯಕ್ಷ ಹೆಚ್.ಪಿ. ಗಿರೀಶ್, ಶಿವಕುಮಾರ್, ಬಿ ಲೋಕೇಶ್, ಸದಾನಂದ್ ಸೇರಿದಂತೆ ಹಲವರು ಹಾಜರಿದ್ದರು.
previous post