ಶಿವಮೊಗ್ಗ: ಜಿಲ್ಲಾ ಜಾತ್ಯಾತೀತ ಜನತಾದಳದ ಅಧ್ಯಕ್ಷರಾಗಿ ಆಯ್ಕೆಯಾದ ಕಡಿದಾಳ್ ಗೋಪಾಲ್, ಉಪಾಧ್ಯಕ್ಷರಾಗಿ ಆಯ್ಕೆಯಾದ ಗೋವಿಂದಪ್ಪ, ಹಾಗೂ ಶಿವಮೊಗ್ಗ ನಗರ ಅಧ್ಯಕ್ಷರಾಗಿ ನೇಮಕಗೊಂಡ ದೀಪಕ್ ಸಿಂಗ್ ಅವರನ್ನು ಇಂದು ಜಿಲ್ಲಾ ಜೆಡಿಎಸ್ ಕಾರ್ಯಾಲಯದಲ್ಲಿ ಸನ್ಮಾನಿಸಿ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಜೆಡಿಎಸ್ರಾಜ್ಯ ಕೋರ್ ಕಮಿಟಿ ಸದಸ್ಯ ಕೆ.ಬಿ. ಪ್ರಸನ್ನಕುಮಾರ್, ಪಕ್ಷದ ಮುಖಂಡರಾದ ರಾಮಕೃಷ್ಣ, ತ್ಯಾಗರಾಜ್, ಸಿದ್ದಪ್ಪ, ವಿನಯ್, ಬೊಮ್ಮನಕಟ್ಟೆ ಮಂಜುನಾಥ್, ರಘು, ಸುಬ್ಬೇಗೌಡ, ಗೀತಾಸತೀಶ್, ಮುಜೀಬ್, ಸಂಜಯ್ ಕಶ್ಯಪ್, ಅರುಣ್ರಾವ್, ದಯಾನಂದ್ ಸಾಲಗಿ ಮುಂತಾದವರಿದ್ದರು.