ಶಿವಮೊಗ್ಗ: ಶಿವಮೊಗ್ಗ ಆದಿಚುಂಚನಗಿರಿ ಸಂಸ್ಥೆ ನಡೆಸುತ್ತಿರುವ ೫೦ನೇ ಸುವರ್ಣ ಸಂಭ್ರಮದ ಅಂಗವಾಗಿ ಕಳೆದ ೩ ದಿನಗಳಿಂದ ಹಮ್ಮಿಕೊಂಡಿರುವ ವಿಶೇಷ ಕಾರ್ಯಕ್ರಮದಲ್ಲಿ ಇಂದು ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಅಷ್ಠಾವಧಾನಿ ಸೂರ್ಯಹೆಬ್ಬಾರ್ ಅವರಿಂದ ಸನಾತನ ಧರ್ಮ ಅರಿವು ಮತ್ತು ಅನುಸಂಧಾನ ಕುರಿತು ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ವಿದ್ಯಾಸಂಸ್ಥೆಯಲ್ಲಿ ವ್ಯಾಸಾಂಗ ಮಾಡಿ ವಿವಿಧ ಸಾಧನೆ ಮಾಡಿದ ಗಣ್ಯರನ್ನು ಆದಿಚುಂಚನಗಿರಿ ಮಹಾಸಂಸ್ಥಾನದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ಆತ್ಮೀಯವಾಗಿ ಸನ್ಮಾನಿಸಿದರು. ವೈದ್ಯರಾದ ಡಾ. ವೀಣಾ ಎಸ್.ಭಟ್, ಡಾ.ಪ್ರೀತಮ್, ಡಾ.ನಿಖಿಲ್, ಡಿ.ಹೆಚ್.ಸುಬ್ಬಣ್ಣ, ಡಿ.ಮಂಜುನಾಥ್, ಗೋವಿಂದ ನಾಗಪ್ಪಗೌ, ರಘುರಾಂ ದೇವಾಡಿಗ, ಡಾ.ಹರೀಶ್, ಕೃಷಿಕ ರಾಮಕೃಷ್ಣಪ್ಪ ಅವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ದಸರಿಘಟ್ಟ ಶಾಖಾ ಮಠದ ಚಂದ್ರಶೇಖರನಾಥ ಸೇರಿದಂತೆ ವಿವಿಧ ಗಣ್ಯರು ಉಪಸ್ಥಿತರಿದ್ದರು.