ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ದೇವರು ಕೊಟ್ಟ ದೇಹವನ್ನು ಎಲ್ಲರೂ ರಕ್ಷಿಸುವುದು ಅಗತ್ಯವಿದೆ- ಡಾ. ಧನಂಜಯ್ ಸರ್ಜಿ

ಶಿವಮೊಗ್ಗ: ಮನುಷ್ಯನ ದೇಹದಲ್ಲಿ ಒಂದು ಸದೃಢ ಹೃದಯ ದೇವರು ನೀಡಿದ್ದು, ಒಂದು ದಿನಕ್ಕೆ ಒಂದುಲಕ್ಷ ಬಾರಿ ಬಡಿಯುತ್ತದೆ. ಏಳು ಸಾವಿರ ಲೀಟರ್ ರಕ್ತವನ್ನುಪಂಪ್ ಮಾಡುತ್ತದೆ. ಆದರೂ ಆ ವ್ಯಕ್ತಿಗೆ ತಿಳಿಯುವುದೇ ಇಲ್ಲ. ಪ್ರಪಂಚದಲ್ಲಿ 7 ಮಿಲಿಯನ್ ಜನರು ಇದ್ದರು. ಅವರಲ್ಲಿ ವ್ಯತ್ಯಸಗಳು ಇದೆ. ಅಂದರೇ, ಈ ದೇವರು ಕೊಟ್ಟ ದೇಹವನ್ನು ಎಲ್ಲರೂ ರಕ್ಷಿಸುವುದು ಅಗತ್ಯವಿದೆ ಎಂದು ಸರ್ಜಿ ಆಸ್ಪತ್ರೆಯ ಸರ್ಜಿ ಪೌಂಡೆಶನ್‍ನ ಅಧ್ಯಕ್ಷರಾದ ಡಾ. ಧನಂಜಯ್ ಸರ್ಜಿ ಹೇಳಿದ್ದಾರೆ.
ಅವರು ಇಂದು ನಗರದ ಆಚರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜು ಶಿವಮೊಗ್ಗ ಇದರ ಐಕ್ಯೂಎಸಿ ವಿಭಾಗ ಎನ್‍ಎಸ್‍ಎಸ್ ವಿಭಾಗ, ರೆಡ್‍ಕ್ರಾಸ್, ಸರ್ಜಿ ಪೌಂಡೇಷನ್ ಮತ್ತು ಶಂಕರ ಕಣ್ಣಿನ ಆಸ್ಪತ್ರ ಇವರ ಸಂಯುಕ್ತಾಶ್ರಯದಲ್ಲಿ ಕಾಲೇಜಿನ ಚಂದನ ಸಭಾಂಗಣದಲ್ಲಿ ಆರೋಗ್ಯ ತಪಾಸಣೆ, ದಂತ ತಪಾಸಣೆ, ನೇತ್ರ ತಪಾಸಣೆ ಮತ್ತು ರಕ್ತ ತಪಾಸಣ ಹಾಗೂ ನೇತ್ರಾದಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಭಗವಂತ ಮಾನವನಿಗೆ ಅಮೂಲ್ಯವಾದ ಎರಡು ಕಣ್ಣು, ಎರಡು ಕಿವಿ ಕೈ ಕಾಲು ಕಿಡ್ನಿ ಶ್ವಾಸಕೋಶ ಎಲ್ಲವನ್ನು ಎರಡು ನೀಡಿ ಒಂದೇ ಹೃದಯವನ್ನು ನೀಡಿದ್ದಾನೆ. ಆ ಹೃದಯ ಭೌತಿಕವಾಗಿ ಆರೋಗ್ಯಪೂರ್ಣವಾಗಿರಬೇಕು. ಜೊತೆಗೆ ಭಾವನ್ಮಾತಕವಾಗಿ ಇರಬೇಕು. ಇನ್ನೊಬ್ಬರ ಕಷ್ಟಗಳಿಗೆ ಮಿಡಿಯುವ ರೀತಿಯಲ್ಲಿ ಹೃದಯ ಇರಬೇಕು. ಕೊಡುವುದನ್ನು ನಾವು ಕಲಿಯಬೇಕು. ಇನ್ನೊಬ್ಬರ ಕಷ್ಟಗಳಿಗೆ ಕಣ್ಣೀರು ಮಿಡಿಯುವ ವ್ಯಕ್ತಿತ್ವ ಇರಬೇಕು ಆಗ ಮಾತ್ರ ಪರಿಪೂರ್ಣ ಮನುಷ್ಯನಾಗಲು ಸಾಧ್ಯ ಎಂದರು.
ಮನುಷ್ಯ ಬದುಕಲು ಶುದ್ಧ ನೀರು, ಗಾಳಿ ಮತ್ತು ಆಹಾರ ಬೇಕೇ ಬೇಕು. ನಾವು ಸೇವಿಸುವ ನೀರಿನಲ್ಲಿ ಶೇ.76 ಕಲುಷಿತ ನೀರು ಇದೆ. ದೇಶದಲ್ಲಿ ಮೂರು ಮುಕ್ಕಾಲು ಕೋಟಿ ಜನ ನೀರಿನಿಂದ ಉಂಟಾಗುವ ಸೋಂಕಿನಿಂದ ಬಳುತ್ತಿದ್ದಾರೆ. ವರ್ಷಕ್ಕೆ 15 ಲಕ್ಷ ಮಕ್ಕಳು ಅತಿಸಾರ ವಾಂತಿಬೇದಿಯಿಂದ ಸಾಯುತ್ತಿದ್ದಾರೆ. ನೀರನ್ನು ಶೋಧಿಸಿ ಕುಡಿಯಬೇಕು. ಪಾನಿಪೂರಿ ಮತ್ತು ಗೋಬಿಮಂಜೂರಿ ಮೊದಲಾದ ರಸ್ತೆಯ ಬದಿಯ ತಿಂಡಿಗಳಿಂದ ಆರೋಗ್ಯದ ಮೇಲೆ ಪರಿಣಾಮವಾಗುತ್ತದೆ. ಮಾಂಸಹಾರ ತಿನ್ನುವವರು ವರ್ಷಕ್ಕೊಮ್ಮೆ ಜಂತುಹುಳು ಔಷಧಿಯನ್ನು ಸೇವಿಸಲೇ ಬೇಕು. ಜಂತುಹುಳುಗಳು ಮೆದುಲಿಗೆ ಹೋದರೆ, ಪಿಡ್ಸ್‍ನಂತಹ ಖಾಯಿಲೆ ಬರುತ್ತದೆ. ಮತ್ತು ಮೆದುಳು ಹಾಳಾಗುತ್ತದೆ. ಪ್ರತಿ 8 ಜನರಲ್ಲಿ ಒಬ್ಬರು ಅಶುದ್ಧ ಗಾಳಿಯಿಂದ ಸಾಯುತ್ತಾರೆ. ಅದು ಶ್ವಾಸಕೋಶಕ್ಕೆ ಹಾನಿ ಮಾಡುತ್ತದೆ. ಸಿಗರೇಟ್, ತಂಬಾಕು ಸೇವಿಸಬಾರದು, ಒಳ್ಳೆಯ ಗಾಳಿಯ ಸೇವನೆ ಮಾಡಬೇಕಾದರೆ ಮರಗಳನ್ನು ಬೆಳೆಸಬೇಕು ಎಂದರು.
ಒಂದು ಕಾರು 26 ಸಾವಿರ ಮೈಲು ಚಾಲನೆ ಮಾಡಿದಾಗ ಆಗುವ ವಾಯು ಮಾಲಿನ್ಯ ಸರಿಮಾಡಲು ಒಂದು ಎಕರೆ ಕಾಡುಬೇಕು. ಕೋಟ್ಯಾಂತರ ವಾಹನಗಳು ಓಡುಡಾವಾಗ ಎಷ್ಟು ಅಶುದ್ಧ ಗಾಳಿಯನ್ನು ನಾವು ಸೇವಿಸುತ್ತೇವೆ ಎಂಬುದನ್ನು ಮನಗಂಡು ಪ್ರತಿದಿನ ಶ್ವಾಸಕೋಶದ ಸಾಂಧ್ರತೆಯನ್ನು ಹೆಚ್ಚಿಸಲು ದೀರ್ಘ ಉಸಿರಾಟ ಯೋಗವನ್ನು ಮಾಡಲೇಬೇಕು. ಶುದ್ಧವಾದ ಗಾಳಿ, ಶುದ್ಧ ನೀರು, ಶುದ್ಧ ಆಹಾರ ಮೂರರ ಸೇವನೆಯಿಂದ ಮಾತ್ರ ಮನುಷ್ಯ ಆರೋಗ್ಯವಾಗಿ ಇರಲಿ ಸಾಧ್ಯ. ನಮ್ಮ ಆರೋಗ್ಯ ನಮ್ಮ ಭವಿಷ್ಯ ನಮ್ಮದೇ ಕೈಯಲಿ ಇದೆ. ಇರುವುದೊಂದೇ ಹೃದಯ ಚೆನ್ನಾಗಿ ನೋಡಿಕೊಳ್ಳಿ ಎಂದರು.
ಮುಖ್ಯ ಅತಿಥಿಗಳಾಗಿ ರೋ. ವಿಜಯ್‍ಕುಮಾರ್, ಡಾ.ಸವಿನಯ,ಡಾ. ಸ್ಪೂರ್ತಿ, ಡಾ. ದೀಪ ಭಾಗವಹಿಸಿದ್ದರು. ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಮಮತಾ ಪಿ.ಆರ್. ವಹಿಸಿದ್ದರು. ಪ್ರೊ.ಎಸ್. ಜಗದೀಶ್ ಕಾರ್ಯಕ್ರಮಾಧಿಕಾರಿ ಪೊ. ಕೆ.ಎನ್. ನಾಗರಾಜು, ಪ್ರೊ.ಮಂಜುನಾಥ್ ಮತ್ತಿತರರು ಇದ್ದರು.

Related posts

ಜಯಕರ್ನಾಟಕ ಜನಪರ ವೇದಿಕೆಯ ಜಿಲ್ಲಾಧ್ಯಕ್ಷರಾಗಿ ಎಸ್.ಕೆ. ರಘುವೀರ್ ಸಿಂಗ್ ಪುನರಾಯ್ಕೆ

ಗುರುಗಳಿಂದ ಕಲಿತ ವಿದ್ಯೆ ಶಾಶ್ವತ- ಶೃತಿ ರಾಘವೇಂದ್ರನ್

ಕೇವಲ ಸಣ್ಣ ಪುಟ್ಟ ಅಲ್ಲ: ದೊಡ್ಡ ಲೀಡರ್ ಗಳೇ ಕಾಂಗ್ರೆಸ್ ಗೆ ಬರ್ತಾರೆ- ಸಚಿವ ಎಂ.ಬಿ ಪಾಟೀಲ್