ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ವಿನೂತನ ಚಟುವಟಿಕೆಗಳಿಂದ ರಾಜ್ಯ ಮಟ್ಟದ ಅತ್ಯುತ್ತಮ  ಗರಿ ಮುಡಿಗೇರಿಸಿದೆ ಶಿವಮೊಗ್ಗ ಐಎಂಎ ಶಾಖೆ

ಶಿವಮೊಗ್ಗ:  ಬೀದರಿನಲ್ಲಿ  ಅಕ್ಟೋಬರ್ 28,29 ರಂದು ನಡೆದ ರಾಜ್ಯ ಮಟ್ಟದ ಭಾರತೀಯ ವೈದ್ಯ ಸಮ್ಮೇಳನದಲ್ಲಿ ಐಎಂಎ ಶಿವಮೊಗ್ಗ ಶಾಖೆಗೆ ಅತ್ಯುತ್ತಮ ದೊಡ್ಡ ಶಾಖೆಯ ಪ್ರಶಸ್ತಿ ದೊರೆತಿದೆ .

ಕಳೆದ ಸೆಪ್ಟೆಂಬರ್ 2022 ರಿಂದ ಅಧ್ಯಕ್ಷರಾಗಿ ಡಾ . ಅರುಣ್ ಎಂ ಎಸ್ ಹಾಗು ಕಾರ್ಯದರ್ಶಿ ಡಾ . ರಕ್ಷಾ ರಾವ್ ಅವರ ನೇತೃತ್ವದಲ್ಲಿ ಅಕ್ಟೋಬರ್ 1 , 2023 ವರೆಗೂ ಒಂದು ವರ್ಷ  ಕಾಲಾವಧಿಯಲ್ಲಿ ವೈದ್ಯರಿಗೆ ವೈಜ್ಞಾನಿಕ ಕಲಿಕಾ ಕಾರ್ಯಾಗಾರಗಳು , ವಿಶ್ವ ಅರೋಗ್ಯ ದಿವಸಗಳ ಆಚರಣೆ , ಶಾಲಾ ಕಾಲೇಜುಗಳಲ್ಲಿ ಅರೋಗ್ಯ ಜಾಗೃತಿ , ಮಹಿಳಾ ಆರೋಗ್ಯ , ಸಾರ್ವಜನಿಕರಿಗೆ ಹಾಗು ನರ್ಸಿಂಗ್ ವಿದ್ಯಾರ್ಥಿಗಳಿಗೆ ಜೀವರಕ್ಷಕ ಸಿ ಪಿ ಆರ್ ಕಾರ್ಯಾಗಾರ , ಅಧಿಕಸ್ಯ ಅಧಿಕಫಲಂ ಒಂದು ತಿಂಗಳ ಉಚಿತ ಆರೋಗ್ಯ ಮಾಹಿತಿ ಶಿಭಿರ , ಕೆ – ಲೈವ್ ಜೊತೆಗೆ ನಮಸ್ತೆ ಐಎಂಎ ಯೌಟ್ಯೂಬ್ ಆರೋಗ್ಯ ಮಾಲಿಕೆ ಸರಣಿಗಳು , ವೈದ್ಯರುಗಳಿಗೆ ಹಾಗು ಕುಟುಂಬದವರಿಗೆ ಸಾಂಸ್ಕೃತಿಕ ಸಂಜೆ ಹಾಗು ಚಾರಣ , ಹಿರಿಯ ವೈದ್ಯ ಸದಸ್ಯರಿಗೆ ಮನೆಯಲ್ಲಿ ಭೇಟಿ ಹಾಗು ಕುಶಲೋಪಚಾರ ವಿನಿಮಯ – ಹೀಗೆ ವಿವಿಧ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಸಾರ್ವಜನಿಕ ವಲಯದಲ್ಲಿ ಮನೆಮಾತಾಗಿದ್ದ ಐಎಂಎ ಶಿವಮೊಗ್ಗ, ರಾಜ್ಯಮಟ್ಟದಲ್ಲೂ ಗುರುತಿಸಿಕೊಂಡು ಅತ್ಯುತ್ತಮ ಶಾಖೆ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ .  ಐಎಂಎ ರಾಷ್ಟ್ರಾಧ್ಯಕ್ಷರಾದ  ಡಾ .ಅಶೋಕನ್ ಅವರಿಂದ , ರಾಜ್ಯಾಧ್ಯಕ್ಷರಾದ ಡಾ . ಶಿವಕುಮಾರ್ ಲಕ್ಕೋಲ್ ಅವರ ಉಪಸ್ಥಿತಿಯಲ್ಲಿ ಪ್ರಶಸ್ತಿಯನ್ನು  ಸಮಾರಂಭದಲ್ಲಿ ಅಧ್ಯಕ್ಷರಾದ ಡಾ . ಅರುಣ್ ಎಂ ಎಸ್ ಹಾಗು ಸದಸ್ಯರಾದ ಡಾ . ಎಸ್ . ಬಿ . ಹೆಗ್ಡೆ , ಡಾ . ವಿನಯ ಶ್ರೀನಿವಾಸ್ , ಡಾ . ಶುಭ್ರತ ಸ್ವೀಕರಿಸಿದರು . ಪ್ರಶಸ್ತಿ ಸಮಾರಂಭದಲ್ಲಿ
ಅರೋಗ್ಯ ಮಂತ್ರಿ ದಿನೇಶ್ ಗುಂಡೂರಾವ್ ಮತ್ತು ಅರಣ್ಯ ಇಲಾಖೆ ಸಚಿವ ಈಶ್ವರ್ ಕಂಡ್ರೆ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು .

ಮಂತ್ರಿ ಗುಂಡೂ ರಾವ್ ಅವರು ವೈದ್ಯರ ಜೀವಾವಧಿ ಇತರರಿಗೆ ಹೋಲಿಸಿದಲ್ಲಿ ಶೇಖಡ 10 ರಷ್ಟು ಕಡಿಮೆ ಎನ್ನುವ ಅಂಕಿಅಂಶ ಕಳವಳಕಾರಿ . ವೈದ್ಯರು ತಮ್ಮ ಹಾಗು ಕುಟುಂಬದ ಕಡೆಗೂ ಹೆಚ್ಚು ಕಾಳಜಿ ವಹಿಸಬೇಕು . ವೈದ್ಯರ ಏಳಿಗೆಗೆ ತಮ್ಮ ಸರಕಾರ ಬದ್ಧವಾಗಿದೆ ಎಂಬ ಭರವಸೆಯ ನುಡಿ ನುಡಿದರು . ಸಚಿವ ಈಶ್ವರ್ ಕಂಡ್ರೆ ಅವರು ವೈದ್ಯಕೀಯ ಸೇವೆ ಅತ್ಯಂತ ಪವಿತ್ರವಾದ ವೃತ್ತಿ . ಇತ್ತೀಚಿನ ದಿನಗಳಲ್ಲಿ ಕೇಳಿ ಬರುತ್ತಿರುವ ವೈದ್ಯರ ಮೇಲಿನ ಹಲ್ಲೆ ಪ್ರಕರಣಗಳು ಖಂಡನೀಯ . ಹಲ್ಲೆ ಎಸಗುವರ ಮೇಲೆ ಕಾನೂನು ಪ್ರಕಾರ ನಿಯಮಾವಳಿವೆ , ಸೂಕ್ತ ಶಿಕ್ಷೆ ದೊರೆಕಿಸುವಲ್ಲಿ ಅಗತ್ಯ ಕ್ರಮ ತೆಗೆದುಕೊಳ್ಳಲು ನಮ್ಮ ಸರಕಾರ ಯಾವಾಗಲೂ ಸಿದ್ಧ ಎಂದು ಹೇಳಿದರು . ರಾಷ್ಟ್ರಮಟ್ಟದ ಎಂಸಿಐ ನಿಂದ ಪ್ರಸ್ತುತ ಏನ್ಎಂಸಿ ನಿಯಂತ್ರಕ ಸಂಸ್ಥೆಯ ಬಗ್ಗೆ ವಿಶ್ಲೇಷಿಸಿದರು .
ರಾಜ್ಯಮಟ್ಟದ ಜೀವಮಾನ ಸಾಧನೆ ಪ್ರಶಸ್ತಿಗೆ ಹಿರಿಯ ಸದಸ್ಯರಾದ ಡಾ. ಎಸ್ . ಬಿ . ಹೆಗ್ಡೆ ಪಾತ್ರರಾಗಿದ್ದು ಶಿವಮೊಗ್ಗ ಐಎಂಎ ಗೆ ಮತ್ತೊಂದು ವೈಶಿಷ್ಟ್ಯ .
ಸಾರ್ವಜನಿಕ ಆರೋಗ್ಯ ಜಾಗೃತಿ ಚಟುವಟಿಕೆಗಳಿಗೂ ಐಎಂಎ ಶಿವಮೊಗ್ಗೆ ಶಾಖೆಯ ಮಹಿಳಾ ವೈದ್ಯರ ಘಟಕ ಡಾ . ವಿನಯ ಶ್ರೀನಿವಾಸ್ ಅವರ ನೇತೃತ್ವದಲ್ಲಿ ಗಂಗಾವತಿಯಲ್ಲಿ ನಡೆದ ರಾಜ್ಯ ಮಟ್ಟದ ಮಹಿಳಾ ವೈದ್ಯರ ಸಮ್ಮೇಳನದಲ್ಲಿ ಪ್ರಶಸ್ತಿ ಪಡೆದ ಹೆಗ್ಗಳಿಕೆಗೆ ಪಾತ್ರವಾಯಿತು .
ಯಶಸ್ವಿಯಾದ ಅಧಿಕಾರಾವಧಿಗೆ ಕಾರಣೀಭೂತರಾದ ಎಲ್ಲಾ ಆಡಳಿತ ವರ್ಗ , ಕಾರ್ಯಕಾರಿ ಸಮಿತಿ ಸದಸ್ಯರಿಗೆ ಹಾಗು ಸದಸ್ಯರಿಗೆ , ಅಂತೆಯೇ ಎಲ್ಲಾ ಚಟುವಟಿಕೆಗಳನ್ನು ಜನರಿಗೆ ತಲುಪುವಲ್ಲಿ ಸಹಕರಿಸಿದ ಮಾಧ್ಯಮ ಮಿತ್ರರಿಗು ಡಾ . ಅರುಣ್ ಹಾಗು ಡಾ . ರಕ್ಷಾ ರಾವ್ ಧನ್ಯವಾಧ ತಿಳಿಸಿರುತ್ತಾರೆ .  ಪ್ರಸ್ತುತ ಅಧ್ಯಕ್ಷರಾದ ಡಾ . ರಮೇಶ್ ಹಾಗು ಕಾರ್ಯದರ್ಶಿಗಳಾದ ಡಾ. ಅರವಿಂದನ್ ಅವರಿಗೆ ಶುಭಹಾರೈಸಿದ್ದಾರೆ

Related posts

ರಾಜ್ಯಾದ್ಯಂತ ಧಾರಾಕಾರ ಮಳೆ ಸಾಧ್ಯತೆ- ಹವಮಾನ ಇಲಾಖೆ ಮುನ್ಸೂಚನೆ.

ವೈಜ್ಞಾನಿಕ ಮನೋಭಾವ, ವೈಚಾರಿಕ ತಿಳಿವಳಿಕೆಯ ಪದವೀಧರರನ್ನ ಸಜ್ಜುಗೊಳಿಸಿ-ಕುಲಪತಿಗಳಿಗೆ ಸಿಎಂ ಸಿದ್ಧರಾಮಯ್ಯ ಸೂಚನೆ.

 ಯಾರೂ ಬಿಜೆಪಿ ಬಿಟ್ಟು ಹೋಗಲ್ಲ:ಆ ರೀತಿ ಯಾವ ಬೆಳವಣಿಗೆ ಆಗಿಲ್ಲ. – ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ.