ಶಿವಮೊಗ್ಗ: ಆಕಾಶವಾಣಿ ಭದ್ರಾವತಿ ನವೆಂಬರ್ ತಿಂಗಳ ಪೂರ್ತಿ ಶಿವಮೊಗ್ಗ ದಾವಣಗೆರೆ ಹಾಗು ಚಿಕ್ಕಮಗಳೂರು ಜಿಲ್ಲೆಯ ಹೊರನಾಡ ಕನ್ನಡಿಗರ ಅನಿಸಿಕೆ ಧ್ವನಿಮುದ್ರಿಸಿ ಅವರಿಗಿರುವ ಕನ್ನಡದ ಪ್ರೀತಿ ಕುರಿತಂತೆ ‘ಹೊರನಾಡ ಕನ್ನಡಿಗರ ಕನ್ನಡ ಪ್ರೀತಿ’ ಕಾರ್ಯಕ್ರಮ ಸರಣಿಯನ್ನು ಪ್ರಸಾರಿಸಲಿದೆ.
ಪ್ರತೀದಿನ ಬೆಳಿಗ್ಗೆ 9.35 ನಿಮಿಷಕ್ಕೆ ಪ್ರಸಾರವಾಗುವ ಈ ಸರಣಿಯಲ್ಲಿ ಹೊರನಾಡ ಕನ್ನಡಿಗರು ಭಾಗವಹಿಸಲು ಅವಕಾಶವಿದೆ. ಹೊರನಾಡ ಕನ್ನಡಿಗರು ತಮ್ಮ ಕನ್ನಡ ಪ್ರೀತಿಯನ್ನು ಧ್ವನಿಮುದ್ರಿಸಿ ಚಿiಡಿbಜvಣ@gmಚಿiಟ.ಛಿom ಮೈಲ್ ಗೆ ಕಳುಹಿಸಲು ಅವಕಾಶ ಕಲ್ಪಿಸಲಾಗಿದೆ. ನವೆಂಬರ್ ತಿಂಗಳ ಪೂರ್ತಿ ಪ್ರಸಾರವಾಗುವ ಈ ಕಾರ್ಯಕ್ರಮದೊಟ್ಟಿಗೆ ನವೆಂಬರ್ 1 ರಂದು ಬೆಳಿಗ್ಗೆ ಆಕಾಶವಾಣಿ ಹಾಗು ಶಿವಮೊಗ್ಗದ ಕರ್ನಾಟಕ ಸಂಘದ ಸಹಯೋಗದಲ್ಲಿ ಶ್ರೋತೃಗಳ ಸಮ್ಮುಖದಲ್ಲಿ ನಡೆದ “ಕವಿಕಾವ್ಯ ಗಾನಸುಧೆ” ವಿಶೇಷ ಕಾರ್ಯಕ್ರಮ ಬೆಳಿಗ್ಗೆ 9.00ಗಂಟೆಯಿಂದ 11ಗಂಟೆಯವರೆಗೆ ಪ್ರಸಾರವಾಗಲಿದೆ. ಈ ಕಾರ್ಯಕ್ರಮದಲ್ಲಿ ಹೆಸರಾಂತ 10 ಕವಿಗಳು ತಮ್ಮ ಕವನ ವಾಚನ ಮಾಡುವುದರೊಟ್ಟಿಗೆ ಸಂಗೀತ ಸಂಯೋಜಿಸಿ ಭಾವಗೀತೆಯನ್ನು ಪ್ರಸ್ತುತಪಡಿಸಲಾಗುವುದು. ನಾಡಗೀತೆಯಿಂದ ಆರಂಭವಾಗುವ ಈ ಕಾರ್ಯಕ್ರಮ ಸತತ 2ಗಂಟೆಗಳ ಕಾಲ ಪ್ರಸಾರವಾಗಲಿದೆ.
ಈ ಕಾರ್ಯಕ್ರಮ ಭದ್ರಾವತಿ ಆಕಾಶವಾಣಿ ಈಒ103.5 ಹಾಗೂ ಒW675ಏhz ನಲ್ಲಿ ಹಾಗೂ ವಿಶ್ವದಾದ್ಯಂತ Prasarbharati ‘newsonair App ನಲ್ಲಿ ಭದ್ರಾವತಿ ಕೇಂದ್ರದ ಮೂಲಕ ಪ್ರಸಾರ ಸಮಯದಲ್ಲಿ ಕೇಳಬಹುದು ಹಾಗೂ ಪ್ರಸಾರ ನಂತರAkashavani Bhadravathi youtube channel ನಲ್ಲಿ ಕೇಳಬಹುದು