ಶಿವಮೊಗ್ಗ: ಆಯುರ್ವೇದ ದಿನಾಚರಣೆ 2023ರ ಪ್ರಯುಕ್ತ ಔಷಧ ಗಿಡಮೂಲಿಕೆಗಳ ಕೃಷಿ ಮತ್ತು ವ್ಯಾಪಾರೋದ್ಯಮದ ಮಾಹಿತಿಯನ್ನು ರೈತರಿಗೆ ತಿಳಿಸಲು “ರೈತರಿಗೆ ಆಯುರ್ವೇದ ಒಂದು ದಿನದ ಕಾರ್ಯಾಗಾರವನ್ನು ನವೆಂಬರ್ 7 ರಂದು ಬೆಳಗ್ಗೆ 9.30ರಿಂದ ಸಂಜೆ 4ರವರೆಗೆ ಹಮ್ಮಿಕೊಳ್ಳಲಾಗಿದೆ.
ಕರ್ನಾಟಕ ರಾಜ್ಯ ಔಷಧ ಗಿಡಮೂಲಿಕಾ ಪ್ರಾಧಿಕಾರ ಹಾಗೂ ಬಾಪೂಜಿ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಶಿವಮೊಗ್ಗ ಇವರ ಸಹಯೋಗದಲ್ಲಿ ಮಾಹಿತಿ ಕಾರ್ಯಾಗಾರವನ್ನು ಉಚಿತವಾಗಿ ಹಮ್ಮಿಕೊಳ್ಳಲಾಗಿದೆ. ಆಸಕ್ತರು ರೈತರು ನವೆಂಬರ್ 6ರೊಳಗೆ ನೋಂದಣಿ ಮಾಡಿಸಿಕೊಳ್ಳಬೇಕು. ಮಾಹಿತಿಗೆ ಗುರುಕಿರಣ್ 7204620465 ಸಂಪರ್ಕಿಸಬಹುದಾಗಿದೆ.