ಕನ್ನಡಿಗರ ಪ್ರಜಾನುಡಿ
ದೇಶಪ್ರಧಾನ ಸುದ್ದಿಮುಖ್ಯಾಂಶಗಳುರಾಜ್ಯ

ಸಾಲ ವಸೂಲಿ: ಕಠಿಣ ನಿಯಮಗಳನ್ನ ಪ್ರಸ್ತಾಪಿಸಿದ ಆರ್ಬಿಐ

ನವದೆಹಲಿ: ಬಾಕಿ ಇರುವ ಸಾಲಗಳನ್ನು ವಸೂಲಿ ಮಾಡುವ ವಿಚಾರದಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(RBI)  ಕಠಿಣ ನಿಯಮಗಳನ್ನು ಪ್ರಸ್ತಾಪಿಸಿದೆ.

ಸಾಲಗಾರರನ್ನು ಬೆಳಿಗ್ಗೆ 8 ಗಂಟೆಯ ಮೊದಲು ಮತ್ತು ಸಂಜೆ 7 ಗಂಟೆಯ ನಂತರ ಕರೆಯುವಂತಿಲ್ಲ ಎಂದು ಹಣಕಾಸು ಸಂಸ್ಥೆಗಳು ಮತ್ತು ಅವುಗಳ ವಸೂಲಾತಿ ಏಜೆಂಟರುಗಳಿಗೆ ಆರ್ ಬಿಐ ಸೂಚಿಸಿದೆ.  ಬ್ಯಾಂಕ್ ಗಳು ಮತ್ತು ಎನ್ಬಿಎಫ್ಸಿಗಳಂತಹ ನಿಯಂತ್ರಿತ ಘಟಕಗಳು (ಆರ್ ಇಗಳು) ನೀತಿ ನಿರೂಪಣೆ ಮತ್ತು ಕೆವೈಸಿ ಮಾನದಂಡಗಳ ಅನುಸರಣೆಯನ್ನು ನಿರ್ಧರಿಸುವುದು ಮತ್ತು ಸಾಲಗಳಿಗೆ ಮಂಜೂರಾತಿ ನೀಡುವಂತಹ ನಿರ್ಧಾರ ತೆಗೆದುಕೊಳ್ಳುವ ಕಾರ್ಯಗಳು ಸೇರಿದಂತೆ ಪ್ರಮುಖ ನಿರ್ವಹಣಾ ಕಾರ್ಯಗಳನ್ನು ಹೊರಗುತ್ತಿಗೆ ನೀಡಬಾರದು ಎಂದು ‘ಹಣಕಾಸು ಸೇವೆಗಳ ಹೊರಗುತ್ತಿಗೆಯಲ್ಲಿ ಅಪಾಯಗಳ ನಿರ್ವಹಣೆ ಮತ್ತು ನೀತಿ ಸಂಹಿತೆಯ ಕರಡು ಮಾಸ್ಟರ್ ಡೈರೆಕ್ಷನ್’ ಹೇಳಿದೆ.

ಉದ್ದೇಶಿತ ನಿರ್ದೇಶನಗಳ ಮೂಲ ತತ್ವವೆಂದರೆ ಹೊರಗುತ್ತಿಗೆ ವ್ಯವಸ್ಥೆಗಳು ಗ್ರಾಹಕರಿಗೆ ತನ್ನ ಬಾಧ್ಯತೆಗಳನ್ನು ಪೂರೈಸುವ ಸಾಮರ್ಥ್ಯವನ್ನು ಕಡಿಮೆ ಮಾಡುವುದಿಲ್ಲ ಅಥವಾ ಮೇಲ್ವಿಚಾರಣಾ ಪ್ರಾಧಿಕಾರದ ಪರಿಣಾಮಕಾರಿ ಮೇಲ್ವಿಚಾರಣೆಗೆ ಅಡ್ಡಿಯಾಗುವುದಿಲ್ಲ ಎಂದು ಆರ್ಇ ಖಚಿತಪಡಿಸಿಕೊಳ್ಳಕೊಳ್ಳಬೇಕು ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೇಳಿದೆ.

ಡೈರೆಕ್ಟ್ ಸೇಲ್ಸ್ ಏಜೆಂಟ್ಸ್ (ಡಿಎಸ್ಎ) / ಡೈರೆಕ್ಟ್ ಮಾರ್ಕೆಟಿಂಗ್ ಏಜೆಂಟ್ಸ್ (ಡಿಎಂಎ) / ರಿಕವರಿ ಏಜೆಂಟ್ಸ್ (ವಾಣಿಜ್ಯ ಬ್ಯಾಂಕುಗಳು, ಸಹಕಾರಿ ಬ್ಯಾಂಕುಗಳು ಮತ್ತು ಎನ್ಬಿಎಫ್ಸಿಗಳಿಗೆ ಅನ್ವಯಿಸುತ್ತದೆ) ಗಾಗಿ ಆರ್ಇಗಳು ಮಂಡಳಿ ಅನುಮೋದಿತ ನೀತಿ ಸಂಹಿತೆಯನ್ನು ಜಾರಿಗೆ ತರಬೇಕು ಎಂದು  ತಿಳಿಸಿದೆ.

 

Related posts

ಪಠ್ಯಗಳ ಪುನರ್ ಪರಿಶೀಲನೆಗೆ ಮಹತ್ವದ ಕ್ರಮ : 37 ತಜ್ಞರ ಸಮಿತಿ ರಚಿಸಿದ ಸರ್ಕಾರ

ಮಹಿಳೆಯರಿಗೆ ಗುಡ್ ನ್ಯೂಸ್: ಉದ್ಯೋಗದಲ್ಲಿ ಶೇ 35ರಷ್ಟು ಮೀಸಲಾತಿ.

ಲೋಕಸಭೆ ಚುನಾವಣೆಗೆ ಈಗಿನಿಂದಲೇ ಸಿದ್ಧತೆ: ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಮಧ್ಯೆ ಪೈಪೋಟಿ ಹೆಚ್ಚಳ.