ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಮಾಜಿ ಸಿಎಂ.ದಿ. ಎಸ್ ಬಂಗಾರಪ್ಪನವರ ಹುಟ್ಟು ಹಬ್ಬ: ಹಸಿರು ಬಂಗಾರ DRS -ಪಾರ್ಕ್ “ನ ಉದ್ಘಾಟನೆ- ಪ್ರಶಾಂತ್ ದೊಡ್ಡಮನೆ

ಶಿವಮೊಗ್ಗ:  ದೊಡ್ಡಮನೆ ರಾಮಪ್ಪ ಶ್ರೀಧರ್ ಸೇವಾ ಟ್ರಸ್ಟ್ ಅಧ್ಯಕ್ಷರು, ಜೆಸಿಐ ಭಾರತದ ಹಸಿರಿಕರಣ ವಿಭಾಗದ  ಪೂರ್ವ ರಾಷ್ಟ್ರೀಯ ಸಂಯೋಜಕರು ಪ್ರಶಾಂತ್ ದೊಡ್ಡಮನೆ ಇವರು ಮಾಜಿ ಮುಖ್ಯಮಂತ್ರಿಗಳಾದ ದಿವಂಗತ ಎಸ್ ಬಂಗಾರಪ್ಪನವರ ಹುಟ್ಟು ಹಬ್ಬದ ಪ್ರಯುಕ್ತ ಅಂಕರವಳ್ಳಿ – ಗುಂಜನೂರು ಪ್ರೌಢಶಾಲೆಯಲ್ಲಿ “ಹಸಿರು ಬಂಗಾರ” ಡಿ .ಆರ್ .ಎಸ್ ಪಾರ್ಕ್   ಮಾಡುವ ಕಾರ್ಯಕ್ರಮಗಳಿಗೆ ಗಿಡ ನೆಡುವುದರ ಮೂಲಕ ಚಾಲನೆ ನೀಡಿ ಮಾತನಾಡಿದರು.
ದಿವಂಗತ ಎಸ್ .ಬಂಗಾರಪ್ಪನವರು ಮುಖ್ಯಮಂತ್ರಿಗಳಾಗಿ ಜನಪರ ಮತ್ತು ರೈತರಿಗೆ ಅನುಕೂಲವಾಗಲು ಹಲವಾರು ಕಾರ್ಯಕ್ರಮಗಳನ್ನ ಮಾಡಿದ್ದಾರೆ ಅದರಲ್ಲಿ ವಿಶೇಷವಾಗಿ ಗ್ರಾಮಾಂತರ ಪ್ರದೇಶಗಳಿಗೆ ಗ್ರಾಮೀಣ ಕೃಪಾಂಕ ರೈತರಿಗೆ ಅನುಕೂಲವಾಗಲು ಪಂಪ್ಸೆಟ್ ಗಳ ವಿದ್ಯುತ್ ಉಚಿತಗೊಳಿಸಿರುವುದು ಇಂದಿಗೂ ಸಹ ರೈತರು ಬದುಕಲು ಅನುಕೂಲವಾಗಿದೆ ,
ಇದರ ಜೊತೆಗೆ ಗ್ರಾಮೀಣ ಪ್ರದೇಶಗಳಲ್ಲಿ ಶಿಕ್ಷಣವು ಗುಣಮಟ್ಟವಾಗಲು ಮತ್ತು ವಿದ್ಯಾರ್ಥಿಗಳಿಗೆ ಅನುಕೂಲವಾಗಲು ಹಲವಾರು ಯೋಜನೆಗಳನ್ನ ಮಾಡಿದ್ದರು, ಮತ್ತು ಅವರ ಸುಪುತ್ರರಾದ ಶ್ರೀಯುತ ಮಧು ಬಂಗಾರಪ್ಪನವರು ಶಿಕ್ಷಣ ಮಂತ್ರಿಗಳಾಗಿದ್ದು ,,ನಮ್ಮ ತಾಲೂಕಿಗೆ  ಗೌರವ ಮತ್ತು ಹೆಮ್ಮೆ ತರುವ ವಿಷಯ ಮತ್ತು ನಾವೆಲ್ಲರೂ ಯುವಕರು ಸೇರಿ ಸರ್ಕಾರಿ ಶಾಲೆಗಳನ್ನ ಬೆಳೆಸುವುದು ಸಹ ನಮ್ಮ ಗುರಿಯಾಗಬೇಕು ಎಂದು,
 ಇಂದು ಅವರ ಹುಟ್ಟು ಹಬ್ಬದ ಪ್ರಯುಕ್ತವಾಗಿ ಗ್ರಾಮೀಣ ಮಟ್ಟದ ಶಾಲೆಗಳಲ್ಲಿ ಮಕ್ಕಳಿಗೆ ಅನುಕೂಲವಾಗಲು ಪಾರ್ಕ್ ಅನ್ನ ಮಾಡಲು ಮುಂದಾಗಿದ್ದೇವೆ ಎಂದು ಹೇಳಿದರು ,
ಇದರಿಂದ ಶಾಲೆಯ ಶಾಲೆಯ ಸುತ್ತಮುತ್ತಲಿನ ಪರಿಸರವು ಅಂದವಾಗಿ ಕಾಣುತ್ತದೆ ಮತ್ತು ಮಕ್ಕಳಿಗೆ ಪರಿಸರದ ಮಧ್ಯೆ ಬೆಳೆಯಲು ಅನುಕೂಲವಾಗುತ್ತದೆ ಮತ್ತು ಗಿಡ ಮರಗಳ ಸಂರಕ್ಷಣೆ ಮತ್ತು ಅದರ ಉಪಯೋಗಗಳ ಬಗ್ಗೆ ಮಾಹಿತಿಯು ದೊರೆಯುತ್ತದೆ ಎಂದರು,
ಹಸಿರು ಬಂಗಾರ ಪಾರ್ಕನ್ನು ಉದ್ಘಾಟಿಸಿದ ಎ.ಪಿ.ಎಂ.ಸಿ ಸದಸ್ಯರಾದ  ಜೈಶೀಲಾ ಗೌಡರು ಇವರು ಮಾತನಾಡಿ
ಪ್ರಶಾಂತ್ ದೊಡ್ಡಮನೆಯವರು ಕಳೆದ ಹತ್ತು ವರ್ಷಗಳಿಂದ ” ಕೇಕ್ ಬಿಡು ಗಿಡ ನೆಡು” ಧ್ಯೇಯ ವಾಕ್ಯದೊಂದಿಗೆ
ಗಿಡ ನೆಡುವ ಕಾರ್ಯಕ್ರಮಗಳ ಮೂಲಕ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ ,, ಮಾಜಿ ಮುಖ್ಯಮಂತ್ರಿಗಳಾದ ಬಂಗಾರಪ್ಪನವರ ಹುಟ್ಟು ಹಬ್ಬದ ಪ್ರಯುಕ್ತ ಹಸಿರು ಬಂಗಾರ ಉದ್ಯಾವನ ಮಾಡುವ ಕಾರ್ಯ ರಾಜ್ಯದಲ್ಲಿ ಪ್ರಥಮ ಎಂದು ಹೇಳಿದರು,
ಸರ್ಕಾರಿ ಶಾಲೆಗಳನ್ನ ಆಯ್ಕೆ ಮಾಡಿಕೊಂಡು ಗಿಡಗಳನ್ನು ನೆಟ್ಟು ಟ್ರೀಗಾಡುಗಳನ್ನ ಅಳವಡಿಸಿ , ನೀರಿನ ಪೈಪ್ ಲೈನ್ ವ್ಯವಸ್ಥೆಯನ್ನು ಮಾಡಿ,,  ಗಿಡಗಳು ಚೆನ್ನಾಗಿ ಬೆಳೆಯಲು ಗೊಬ್ಬರ ಮುಂತಾದ ವ್ಯವಸ್ಥೆಗಳನ್ನು ಮಾಡಿರುತ್ತಾರೆ. ಹುಟ್ಟುಹಬ್ಬವನ್ನು ಮೋಜು ಮಸ್ತಿ ಮಾಡಿ ಯುವಕರು ದುಡ್ಡನ್ನ ದುಂದು ವೆಚ್ಚ ಮಾಡುತ್ತಿರುವ ಇಂತಹ ಸಂದರ್ಭದಲ್ಲಿ ,,,ಪ್ರಶಾಂತ್ ದೊಡ್ಡಮನೆಯವರ ಕಾರ್ಯ ಮತ್ತು ಎಲ್ಲ ಯುವಕರಿಗೆ ಮಾದರಿಯನ್ನು ತಿಳಿಸಿದರು.
ಇದೇ ಸಂದರ್ಭದಲ್ಲಿ  ಶಾಲಾ ಮುಖ್ಯ ಶಿಕ್ಷಕರಾದ ಚಂದ್ರಶೇಖರ್ ಇವರು ಮಾತನಾಡಿ ಮಾತನಾಡಿ ಪ್ರಶಾಂತ್ ದೊಡ್ಡಮನೆ ಇವರು 2018ರ ಸೊರಬ ಜೆಸಿಐನ ಅಧ್ಯಕ್ಷರಾಗಿ “ಪರ್ಯಾವರಣ ಯಾತ್ರೆ “ಕೇರಳ ತಮಿಳುನಾಡು ಕರ್ನಾಟಕ ಸೇರಿದಂತೆ 5,000 km ವ್ಯಾಪ್ತಿ ಕ್ರಮಿಸಿ ನೂರಕ್ಕೂ ಹೆಚ್ಚು ಶಾಲೆಗಳಲ್ಲಿ ಪರಿಸರ ಜಾಗೃತಿ ಕಾರ್ಯಕ್ರಮ ಮೂಡಿಸಿದ್ದಾರೆ .
2019 ರಲ್ಲಿ ಜೆ ಸಿ ಯನ್ನು ದ ವಲಯ ಸಂಯೋಜಕರಾಗಿ “ಪರ್ಯಾವಣಕಿ ಸಪ್ತಾಹ ,”ಎನ್ನುವ ಕಾರ್ಯಕ್ರಮ ಮಾಡಿದ್ದಾರೆ . 2020ರಲ್ಲಿ ವಲಯ ಉಪಾಧ್ಯಕ್ಷರಾಗಿ “ಪರ್ಯಾವರಣ ಸಪ್ತಾಹ” ಎನ್ನುವ ಶ ಕಾರ್ಯಕ್ರಮಗಳನ್ನು ಮಾಡಿ ತೆಂಗಿನ ಗಿಡಗಳನ್ನು ವಿತರಿಸಿದ್ದಾರೆ.  2021ರ ವಲಯ ಅಧ್ಯಕ್ಷರಾಗಿ 18 ಜಿಲ್ಲೆಗಳನ್ನ ಒಳಗೊಂಡ ನಮ್ಮ ವಲಯದಲ್ಲಿ “ಪರ್ಯಾವಣಕ ಕುಟುಂಬ “ಎನ್ನುವ ಧೇಯ ವಾಕ್ಯದೊಂದಿಗೆ ಹಸಿರಿಕರಣದ ಕೆಲಸಗಳನ್ನು ಮಾಡಿದ್ದಾರೆ .
ಇದೇ ರೀತಿ 2022 ರಲ್ಲಿ ಜೆ ಸಿ ಐ ಭಾರತದ ಹಸಿ ಕರಣದ ರಾಷ್ಟ್ರೀಯ ಅಧ್ಯಕ್ಷರಾಗಿ “ಪರ್ಯಾವರಣ ಮಿತ್ರ”ಎಂಬುವ ಹೆಸರಿನಲ್ಲಿ 20ಕ್ಕೂ ಹೆಚ್ಚು ರಾಜ್ಯಗಳಲ್ಲಿ 200 ಹೆಚ್ಚು ಜೆಸಿಐ ಪಾರ್ಕ್ ಗಳನ್ನು ನಿರ್ಮಿಸಿದ್ದಾರೆ ಎಂದರು,,,

Related posts

ಅಂತರ್ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸರ್ವಾಧ್ಯಕ್ಷರಾಗಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳ ಆಯ್ಕೆ: ಸ್ವಾಗತ ಕೋರಿ ಗುರುವಂದನೆ

ಚಿಕ್ಕಬಳ್ಳಾಪುರ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಲಾ 2 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ.

ಅಂಬಾರಿ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ ದಸರಾ ಆನೆಗಳಿಗೆ ಸ್ವಾಗತ: ವಿಶೇಷ ಪೂಜೆ ಸಲ್ಲಿಕೆ