ಕನ್ನಡಿಗರ ಪ್ರಜಾನುಡಿ
ಪ್ರಧಾನ ಸುದ್ದಿಮುಖ್ಯಾಂಶಗಳುರಾಜಕೀಯರಾಜ್ಯ

 ಡಿ.ಕೆ ಶಿವಕುಮಾರ್  ಚಾಲೇಂಜ್  ಸ್ವೀಕರಿಸಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ.

 

ಬೆಂಗಳೂರು:  ರಾಮನಗರ ಜಿಲ್ಲೆ ವಿಚಾರವಾಗಿ ಬಹಿರಂಗ ಚರ್ಚೆಗೆ ಬರುವಂತೆ ಡಿಸಿಎಂ ಡಿಕೆ ಶಿವಕುಮಾರ್ ಹಾಕಿದ್ದ ಸವಾಲನ್ನ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಸ್ವೀಕರಿಸಿದ್ದಾರೆ.

ಈ ಕುರಿತು ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ರಾಮನಗರ ಜಿಲ್ಲೆ  ವಿಚಾರವಾಗಿ ಬಹಿರಂಗ ಚರ್ಚೆಗೆ ಬರುವ ಸವಾಲು ಹಾಕಿದ್ದಾರೆ. ಟಿಆರ್ ಪಿ ಇರುವ ಚಾನಲ್ ನಲ್ಲಿ ಚರ್ಚೆಗೆ ಬರುವಂತೆ ಸವಾಲು ಹಾಕಿದ್ದಾರೆ. ನಾನು ಪಲಾಯಾನ ಮಾಡೋದಿಲ್ಲ. ಸವಾಲು ಸ್ವೀಕರಿಸುತ್ತೇನೆ ಎಂದಿದ್ದಾರೆ.

ಪದೇ ಪದೇ ಮೈತ್ರಿ ಸರ್ಕಾರ ಪತನದ ಬಗ್ಗೆ ಮಾತನಾಡುತ್ತಿದ್ದಾರೆ. ಯಾವುದೇ ಷರತ್ತು ಹಾಕಿರಲಿಲ್ಲ ಎಂದು ಹೇಳಿದ್ದಾರೆ. ಮೊದಲ ದಿನದಿಂದಲೂ ಷರತ್ತು ಮೇಲೆ ಷರತ್ತು ಹಾಕಿದ್ರು ಎಂದು ಕಿಡಿಕಾರಿದರು.

ಸಿದ್ದರಾಮಯ್ಯಗೆ ನಾನು ರಾಜಕೀಯ ವಿಲನ್. ಸಿದ್ಧರಾಮಯ್ಯಗೆ ಸ್ನೇಹಿತ ಆಗಬೇಕಿತ್ತಾ. ಇವರು ಮಾಡುವ ತಪ್ಪಿಗೆ ನಾನು ವಿಲನ್ ಎಂದು ಸಿಎಂ ಸಿದ್ಧರಾಮಯ್ಯಗೆ ಹೆಚ್.ಡಿ ಕುಮಾರಸ್ವಾಮಿ ತಿರುಗೇಟು ನೀಡಿದರು.

ಮೇಗಾಡೈರಿಗೆ ಭೂಮಿ ಕೊಟ್ಟ ರೈತರಿಗೆ ನೀವು ಏನು ಮಾಡಿದ್ರಿ. ರೈತರಿಗೆ ನೀಡಿದ್ದ ಭೂಮಿ ನಿಮ್ಮ ಪಟಾಲಂ ಲೂಟಿ ಮಾಡಿದ್ರು.  ಅಧಿಕಾರ ಯಾರಿಗೂ ಶಾಶ್ವತ ಅಲ್ಲ ಮಿಸ್ಟರ್ ಡಿಕೆ ಶಿವಕುಮಾರ್ ಎಂದು ಹೆಚ್.ಡಿಕೆ ಗುಡುಗಿದರು.

Related posts

ರಾಜಕಾಲುವೆ ಕಾಮಗಾರಿ ಪೂರ್ಣ: ಸಚಿವ ಬೈರತಿ ಸುರೇಶ್ ರಿಂದ ಉದ್ಘಾಟನೆ.

ಸಿಎಂ ಸಿದ್ದರಾಮಯ್ಯರಿಂಧ ಜನತಾದರ್ಶನ ಆರಂಭ: ಸರತಿ ಸಾಲಿನಲ್ಲಿ ಮನವಿ ಸಲ್ಲಿಸುತ್ತಿರುವ ಸಾರ್ವಜನಿಕರು.

ಡಿಕೆಶಿ ಮತ್ತೆ ಜೈಲಿಗೆ ಹೋಗ್ತಾರೆಂಬ ಹೆಚ್.ಡಿಕೆ ಹೇಳಿಕೆಗೆ ತಿರುಗೇಟು ಕೊಟ್ಟ ಸಚಿವ ಜಮೀರ್ ಅಹ್ಮದ್ ಖಾನ್