ಶಿವಮೊಗ್ಗ: ನಗರದ ಚಾಲುಕ್ಯ ನಗರದ ಶ್ರೀ ಚೌಡೇಶ್ವರಿ ಅಮ್ಮನವರ ದೇವಸ್ಥಾನದಲ್ಲಿ ಅ . 20ರಂದು ರಶ್ಮಿ ಅನಿಲಕುಮಾರ್ ಕುಟುಂಬದ ವತಿಯಿಂದ ದೇವಿಗೆ ಸರಸ್ವತೀ ಮಾಡಲಾಗಿತ್ತು. ಹಾಗೂ ನೂರಾರು ಶಾಲಾ ಕಾಲೇಜು ಮಕ್ಕಳಿಂದ ಸರಸ್ವತೀ ಪೂಜೆ ನೆರವೇರಿಸಲಾಯಿತು.
ಅದೇ ದಿನ ಬೆಳಿಗ್ಗೆ 10.30 ರಿಂದ ಗೀತಾ ನಾಗೇಶ್ ಕುಟುಂಬದ ವತಿಯಿಂದ ಲಕ್ಷೀ ನಾರಾಯಣ ಹೃದಯ ಹೋಮ ನೆರವೇರಿಸಲಾಯಿತು.
ಅ.20ರ ಸಂಜೆ 6.30 ರಿಂದ ರಾಮ ಪ್ರಿಯ ಭಜನ ತಂಡದಿಂದ ನೃತ್ಯ ದೀಪ ಭಜನೆ ಏರ್ಪಡಿಸಲಾಗಿದೆ.
ಅ. 21ರಂದು ದೇವಿಗೆ ಮಹಾಕಾಳಿ ಅಲಂಕಾರ ಹಾಗೂ ದುರ್ಗಾ ಹೋಮ 12.30ಕ್ಕೇ ಮಹಾಮಂಗಳಾರತಿ ಪ್ರಸಾದ ವಿನಿಯೋಗ ಏರ್ಪಡಿಸಲಾಗಿದೆ. ಅ 21ರ ಸಂಜೆ 7.30ರಿಂದ ಉಯಾಲೇ ಸೇವೆ ಹಾಗೂ ಭರತನಾಟ್ಯ ಏರ್ಪಡಿಸಲಾಗಿದೆ
ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಿಸುವಂತೆ ಆಡಳಿತ ಮಂಡಲಿ ಕೋರಿದೆ.
ಹೆಚ್ಚಿನ ಮಾಹಿತಿಗಾಗಿ 9980247081, 9448888129 ಸಂಪರ್ಕಿಸಬಹುದು