ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಪತ್ರಕರ್ತರ ಸಂಘ, ಪ್ರೆಸ್‌ ಟ್ರಸ್ಟ್‌ ವತಿಯಿಂದ ಪ್ರತಿಭಾ ಪುಸ್ಕಾರ- ಅ. 26 ರ ಒಳಗೆ ಅರ್ಜಿ ಸಲ್ಲಿಸಲು ಸೂಚನೆ.

ಶಿವಮೊಗ್ಗ: ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಶಿವಮೊಗ್ಗ ಪ್ರೆಸ್‌ ಟ್ರಸ್ಟ್‌ ವತಿಯಿಂದ ಅ. ೨೯ ರ ಭಾನುವಾರದಂದು ಸಂಘದ ಮತ್ತು ಟ್ರಸ್ಟ್‌ ನ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಆಯೋಜಿಸಿದ್ದು, ಪ್ರತಿಭಾವಂತ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಅ. ೨೯ ರ ಭಾನುವಾರ ಪ್ರೆಸ್‌ ಟ್ರಸ್ಟ್‌ ಪತ್ರಿಕಾ ಭವನದಲ್ಲಿ ನಡೆಯುವ ಕಾರ್ಯನಿರತ ಪತ್ರಕರ್ತರ ಸಂಘದ ಸರ್ವಸದಸ್ಯರ ಸಭೆಯ ಬಳಿಕ ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿ ಪರೀಕ್ಷೆಗಳಲ್ಲಿ ಶೇ. ೯೦ಕ್ಕಿಂತ ಅಧಿಕ ಅಂಕ ಗಳಿಸಿದ ಅಥವಾ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಯಾವುದೇ ವಿಭಾಗದಲ್ಲಿ ಸ್ಪರ್ಧಿಸಿ ಪ್ರಶಸ್ತಿ ಗಳಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಗುವುದು. ಅರ್ಹರು ತಮ್ಮ ಅಂಕ ಪಟ್ಟಿಯ ನಕಲು ಪ್ರತಿ, ಪಾಸ್‌ ಪೋರ್ಟ್‌ ಸೈಜಿನ ಫೋಟೋ ಸೇರಿದಂತೆ ಅಗತ್ಯ ದಾಖಲೆಗಳೊಂದಿಗೆ ತಮ್ಮ ಹೆಸರನ್ನು ಸಂಘದ ಅಧ್ಯಕ್ಷರಾದ ಗೋಪಾಲ್‌ ಯಡಗೆರೆ[9108825454] ಅಥವಾ ಪ್ರಧಾನ ಕಾರ್ಯದರ್ಶಿ ಸಂತೋಷ್‌ ಕಾಚಿನಕಟ್ಟೆ[9341126340] ಅಥವಾ ಪ್ರೆಸ್‌  ಟ್ರಸ್ಟ್‌ ಕಾರ್ಯದರ್ಶಿ ನಾಗರಾಜ್‌  ನೇರಿಗೆ[93411 10728] ಈ ಸಂಖ್ಯೆ ಗೆ ವಾಟ್ಸಪ್‌ ಮೂಲಕ ಅಥವಾ ಪ್ರೆಸ್‌ ಟ್ರಸ್ಟ್‌ ಕಚೇರಿಗೆ ನೇರವಾಗಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಅ. ೨೬ ಕೊನೆಯ ದಿನಾಂಕವಾಗಿರುತ್ತದೆ ಎಂದು ಸಂಘದ ಅಧ್ಯಕ್ಷರಾದ ಗೋಪಾಲ್‌ ಯಡಗೆರೆ ತಿಳಿಸಿದ್ದಾರೆ.

Related posts

ಇತ್ತೀಚೆಗೆ ನಿಧನರಾದ ರೈತಮುಖಂಡರಿಗೆ ಶ್ರದ್ಧಾಂಜಲಿ.

ಸಿರಿಧಾನ್ಯ ಅಡುಗೆ ಮಾಡುವ ಸ್ಪರ್ಧೆ ಅ. 16ಕ್ಕೆ

ಜಿಲ್ಲೆಯ ಜನಪದ ಕಲಾವಿದರ ಮಾಹಿತಿ ನೀಡಲು ಕಜಾಪ ಮನವಿ